ಹೊಸದಿಲ್ಲಿ: ಮೋಟಾರು ವಾಹನ ತಿದ್ದುಪಡಿ ಕಾಯಿದೆ ಅನುಸಾರ ಸಂಚಾರ ನಿಯಮಗಳ ಉಲ್ಲಂಘನೆಗೆ ಭಾರಿ ದಂಡಗಳನ್ನು ವಿಧಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ವಾಹನ ಮಾಲೀಕರ ನಿದ್ದೆಗೆಡಿಸುವ ಮತ್ತೊಂದು ಸುದ್ದಿ ಹೊರಬಿದ್ದಿದೆ. ಟ್ರಾಫಿಕ್ ನಿಯಮ ಕಡೆಗಣಿಸುವ ವಾಹನ ಸವಾರರು ತಮ್ಮ ವಾಹನದ ವಿಮೆಗೆ ಭಾರಿ ಮೊತ್ತದ ಪ್ರೀಮಿಯಂ ಪಾವತಿಸಬೇಕು! ಏಕೆಂದರೆ ಸಂಚಾರ ನಿಯಮ ಉಲ್ಲಂಘನೆಯನ್ನು ವಾಹನದ ವಿಮೆ ಜತೆಗೆ ಸಂಪರ್ಕ ಜೋಡಿಸುವ ಯೋಜನೆಗೆ ಕೇಂದ್ರ ಸರಕಾರ ಮುಂದಾಗಿದೆ. ಮೊದಲ ಹಂತದಲ್ಲಿ ರಾಷ್ಟ್ರೀಯ ರಾಜಧಾನಿ ವ್ಯಾಪ್ತಿ ಪ್ರದೇಶದಲ್ಲಿ (ಎನ್ಸಿಆರ್) ಇದು ಜಾರಿಗೆ ಬರಲಿದೆ.
ಸರಕಾರದ ಮನವಿ ಮೇರೆಗೆ ಭಾರತೀಯ ವಿಮಾನ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಈ ಸಾಧ್ಯತೆ ಕುರಿತು ಚರ್ಚಿಸಲು ಸಮಿತಿಯೊಂದನ್ನು ರಚಿಸಿದೆ. ಸಮಿತಿಯು ಎರಡು ತಿಂಗಳಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲಿದೆ. ಸಂಚಾರ ನಿಯಮ ಉಲ್ಲಂಘನೆಗಳಿಗೆ ತಕ್ಕಂತೆ ವಿಮೆ ಪ್ರೀಮಿಯಂ ಮೊತ್ತವನ್ನು ಏರಿಕೆ ಮಾಡುವುದು ಇದರ ಉದ್ದೇಶ. ಇದರಿಂದ ರಸ್ತೆ ಅಪಘಾತಗಳು ಕಡಿಮೆಯಾಗಲಿವೆ ಹಾಗೂ ಚಾಲಕನ ನಿರ್ಲಕ್ಷ ್ಯದ ನಡವಳಿಕೆ ತಗ್ಗುವ ಭರವಸೆಯನ್ನು ಐಆರ್ಡಿಎಐ ವ್ಯಕ್ತಪಡಿಸಿದೆ.
ಹೊಸ ವ್ಯವಸ್ಥೆ: ಕೇಂದ್ರ ಸರಕಾರ ಮಹಾನಗರ ಹಾಗೂ ಸ್ಮಾರ್ಟ್ ಸಿಟಿಗಳಲ್ಲಿ 'ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್' ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಸ್ವಯಂ ಟ್ರಾಫಿಕ್ ನಿಗಾ ವ್ಯವಸ್ಥೆ ಮೂಲಕ ಸಂಚಾರ ನಿಯಮ ಉಲ್ಲಂಘಿಸುವ ವಾಹನಕ್ಕೆ ಸಂಬಂಧಿಸಿದಂತೆ ಇ-ಚಲನ್ ಸೃಷ್ಟಿಯಾಗುತ್ತದೆ. ಇದನ್ನು ಆಧರಿಸಿ ಅಪರಾಧ ಎಸಗಿದ ವಾಹನದ ಮಾಲೀಕ/ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿರುತ್ತದೆ. ಟ್ರಾಫಿಕ್ ನಿಯಮ ಉಲ್ಲಂಘನೆಯನ್ನು ವಾಹನದ ವಿಮೆ ಪ್ರಿಮಿಯಂ ಮೊತ್ತಕ್ಕೆ ಲಿಂಕ್ ಮಾಡಿ ಅದನ್ನು ಕ್ರಮೇಣ ಏರಿಕೆ ಮಾಡುವುದು ಹೊಸ ಅಸ್ತ್ರವಾಗಿದೆ.
ಕಾರ್ಯ ಸಮಿತಿಯ ಕೆಲಸವೇನು?
* ಟ್ರಾಫಿಕ್ ನಿಯಮ ಉಲ್ಲಂಘನೆಗಳನ್ನು ವಾಹನ ವಿಮೆಯ ಪ್ರೀಮಿಯಂ ಮೊತ್ತಕ್ಕೆ ಲಿಂಕ್ ಮಾಡುವಲ್ಲಿ ಅನುಷ್ಠಾನದ ಚೌಕಟ್ಟು ಹಾಗೂ ವಿಧಾನ ರೂಪಿಸುವುದು.
* ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಜಾರಿಯಲ್ಲಿರುವ ಇಂತಹ ವ್ಯವಸ್ಥೆಯನ್ನು ಅಧ್ಯಯನ ನಡೆಸಿ ಭಾರತಕ್ಕೆ ಸೂಕ್ತವಾದ ಉತ್ತಮ ವ್ಯವಸ್ಥೆಯನ್ನು ಶಿಫಾರಸು ಮಾಡುವುದು.
* ರಾಜ್ಯಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಗಿರುವ ಅಂಕ ವ್ಯವಸ್ಥೆಯ ಪರಿಶೀಲನೆ ಹಾಗೂ ಮೌಲ್ಯಮಾಪನ ನಡೆಸಿ ಹೊಸ ಪದ್ಧತಿ ಕಂಡುಕೊಳ್ಳುವುದು.
* ಮೋಟಾರು ವಾಹನ ವಿಮೆಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಯನ್ನು ರೇಟಿಂಗ್ ಫ್ಯಾಕ್ಟರ್ಆಗಿ ಪರಿಗಣಿಸಲು ಡೇಟಾ ಸಂಗ್ರಹ ವ್ಯವಸ್ಥೆಗೆ ಒತ್ತು ಕೊಡುವುದು.
* ಟ್ರಾಫಿಕ್ ನಿಯಮ ಉಲ್ಲಂಘಿಸುವ ಪ್ರತಿ ವಾಹನಗಳ 'ವಯಲೇಷನ್ ಹಿಸ್ಟರಿ ಡೇಟಾ' ಸಂಗ್ರಹಿಸಿ ಅದನ್ನು ಸಂಬಂಧಿತ ಇಲಾಖೆಗೆ ವರ್ಗಾಯಿಸುವ ವ್ಯವಸ್ಥೆ ಅಭಿವೃದ್ಧಿಪಡಿಸುವುದು.
ಸರಕಾರದ ಮನವಿ ಮೇರೆಗೆ ಭಾರತೀಯ ವಿಮಾನ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಈ ಸಾಧ್ಯತೆ ಕುರಿತು ಚರ್ಚಿಸಲು ಸಮಿತಿಯೊಂದನ್ನು ರಚಿಸಿದೆ. ಸಮಿತಿಯು ಎರಡು ತಿಂಗಳಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲಿದೆ. ಸಂಚಾರ ನಿಯಮ ಉಲ್ಲಂಘನೆಗಳಿಗೆ ತಕ್ಕಂತೆ ವಿಮೆ ಪ್ರೀಮಿಯಂ ಮೊತ್ತವನ್ನು ಏರಿಕೆ ಮಾಡುವುದು ಇದರ ಉದ್ದೇಶ. ಇದರಿಂದ ರಸ್ತೆ ಅಪಘಾತಗಳು ಕಡಿಮೆಯಾಗಲಿವೆ ಹಾಗೂ ಚಾಲಕನ ನಿರ್ಲಕ್ಷ ್ಯದ ನಡವಳಿಕೆ ತಗ್ಗುವ ಭರವಸೆಯನ್ನು ಐಆರ್ಡಿಎಐ ವ್ಯಕ್ತಪಡಿಸಿದೆ.
ಹೊಸ ವ್ಯವಸ್ಥೆ: ಕೇಂದ್ರ ಸರಕಾರ ಮಹಾನಗರ ಹಾಗೂ ಸ್ಮಾರ್ಟ್ ಸಿಟಿಗಳಲ್ಲಿ 'ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್' ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಸ್ವಯಂ ಟ್ರಾಫಿಕ್ ನಿಗಾ ವ್ಯವಸ್ಥೆ ಮೂಲಕ ಸಂಚಾರ ನಿಯಮ ಉಲ್ಲಂಘಿಸುವ ವಾಹನಕ್ಕೆ ಸಂಬಂಧಿಸಿದಂತೆ ಇ-ಚಲನ್ ಸೃಷ್ಟಿಯಾಗುತ್ತದೆ. ಇದನ್ನು ಆಧರಿಸಿ ಅಪರಾಧ ಎಸಗಿದ ವಾಹನದ ಮಾಲೀಕ/ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿರುತ್ತದೆ. ಟ್ರಾಫಿಕ್ ನಿಯಮ ಉಲ್ಲಂಘನೆಯನ್ನು ವಾಹನದ ವಿಮೆ ಪ್ರಿಮಿಯಂ ಮೊತ್ತಕ್ಕೆ ಲಿಂಕ್ ಮಾಡಿ ಅದನ್ನು ಕ್ರಮೇಣ ಏರಿಕೆ ಮಾಡುವುದು ಹೊಸ ಅಸ್ತ್ರವಾಗಿದೆ.
ಕಾರ್ಯ ಸಮಿತಿಯ ಕೆಲಸವೇನು?
* ಟ್ರಾಫಿಕ್ ನಿಯಮ ಉಲ್ಲಂಘನೆಗಳನ್ನು ವಾಹನ ವಿಮೆಯ ಪ್ರೀಮಿಯಂ ಮೊತ್ತಕ್ಕೆ ಲಿಂಕ್ ಮಾಡುವಲ್ಲಿ ಅನುಷ್ಠಾನದ ಚೌಕಟ್ಟು ಹಾಗೂ ವಿಧಾನ ರೂಪಿಸುವುದು.
* ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಜಾರಿಯಲ್ಲಿರುವ ಇಂತಹ ವ್ಯವಸ್ಥೆಯನ್ನು ಅಧ್ಯಯನ ನಡೆಸಿ ಭಾರತಕ್ಕೆ ಸೂಕ್ತವಾದ ಉತ್ತಮ ವ್ಯವಸ್ಥೆಯನ್ನು ಶಿಫಾರಸು ಮಾಡುವುದು.
* ರಾಜ್ಯಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಗಿರುವ ಅಂಕ ವ್ಯವಸ್ಥೆಯ ಪರಿಶೀಲನೆ ಹಾಗೂ ಮೌಲ್ಯಮಾಪನ ನಡೆಸಿ ಹೊಸ ಪದ್ಧತಿ ಕಂಡುಕೊಳ್ಳುವುದು.
* ಮೋಟಾರು ವಾಹನ ವಿಮೆಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಯನ್ನು ರೇಟಿಂಗ್ ಫ್ಯಾಕ್ಟರ್ಆಗಿ ಪರಿಗಣಿಸಲು ಡೇಟಾ ಸಂಗ್ರಹ ವ್ಯವಸ್ಥೆಗೆ ಒತ್ತು ಕೊಡುವುದು.
* ಟ್ರಾಫಿಕ್ ನಿಯಮ ಉಲ್ಲಂಘಿಸುವ ಪ್ರತಿ ವಾಹನಗಳ 'ವಯಲೇಷನ್ ಹಿಸ್ಟರಿ ಡೇಟಾ' ಸಂಗ್ರಹಿಸಿ ಅದನ್ನು ಸಂಬಂಧಿತ ಇಲಾಖೆಗೆ ವರ್ಗಾಯಿಸುವ ವ್ಯವಸ್ಥೆ ಅಭಿವೃದ್ಧಿಪಡಿಸುವುದು.