ಆ್ಯಪ್ನಗರ

ಭಾರತದಲ್ಲಿ ಸಮುದಾಯ ಮಟ್ಟಕ್ಕೆ ಹರಡಿತೇ ಕೊರೊನಾ ಸೋಂಕು?

ದೇಶದಲ್ಲಿ ಕೊರೊನಾ ಸೋಂಕು ಸಮುದಾಯ ಮಟ್ಟಕ್ಕೆ ಪಸರಿಸುವ ಸ್ಪಷ್ಟ ಸೂಚನೆ ನೀಡಿದೆ. ದಿಲ್ಲಿಯಲ್ಲಿ ಪತ್ತೆಯಾಗಿರುವ ಕೇಸ್‌ಗಳ ಪೈಕಿ ಶೇಕಡ 50ರಷ್ಟು ಪ್ರಕರಣಗಳಲ್ಲಿ ಸೋಂಕಿನ ಮೂಲ ಪತ್ತೆಯಾಗಿಲ್ಲ. ಇದರಿಂದ ಸೋಂಕು ಸಮುದಾಯ ಮಟ್ಟಕ್ಕೆ ತಲುಪಿರುವ ಶಂಕೆ ಮೂಡಿದೆ.

Vijaya Karnataka Web 10 Jun 2020, 5:06 pm
ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಸೋಂಕು ಎಲ್ಲನಿಯಂತ್ರಣ ಕ್ರಮಗಳನ್ನು ಮೀರಿ ಸಮುದಾಯ ಮಟ್ಟಕ್ಕೆ ಪಸರಿಸುವ ಸ್ಪಷ್ಟ ಸೂಚನೆ ನೀಡಿದೆ.
Vijaya Karnataka Web corona 1


ಲಾಕ್‌ಡೌನ್‌ ಕ್ರಮೇಣ ಸಡಿಲಗೊಳ್ಳುತ್ತಿದ್ದಂತೆಯೇ ದಿಲ್ಲಿ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಕೋವಿಡ್‌-19 ಅಟ್ಟಹಾಸ ಮೇರೆ ಮೀರಿದೆ. ಜನ ಸಾಮಾನ್ಯರಿಗಿಂತ ಅತಿ ನಾಜೂಕಿನ ಸುರಕ್ಷತಾ ಕ್ರಮಗಳಿಗೆ ಮೊರೆ ಹೋದ ಜನನಾಯಕರಿಗೂ ಸೋಂಕು ಅಂಟಿದ್ದು, ಆತಂಕ ಮೂಡಿಸಿದೆ.

ದಿಲ್ಲಿಯಲ್ಲಿ ಇದುವರೆಗೂ ಪತ್ತೆಯಾಗಿರುವ ಕೇಸ್‌ಗಳ ಪೈಕಿ ಶೇಕಡ 50ರಷ್ಟು ಪ್ರಕರಣಗಳಲ್ಲಿ ಸೋಂಕಿನ ಮೂಲ ಯಾವುದೆಂಬುದೇ ಪತ್ತೆಯಾಗಿಲ್ಲ ಎಂದು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಹೇಳಿರುವುದು ಸೋಂಕು ಸಮುದಾಯ ಮಟ್ಟಕ್ಕೆ ಪ್ರಸರಣಗೊಂಡಿರುವ ಶಂಕೆ ಹೊರಹಾಕಿದೆ.

ಅತಿ ಹೆಚ್ಚು ಕೊರೊನಾ ಬಾಧಿತ ರಾಜ್ಯಗಳಲ್ಲಿ ಮುಂಚೂಣಿಯಲ್ಲಿರುವ ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲೂಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು ಜುಲೈ ಬಳಿಕ ಕೊರೊನಾ ಸ್ಫೋಟದ ಪರಿಸ್ಥಿತಿ ನಿಭಾಯಿಸುವುದು ಹೇಗೆಂಬ ಚಿಂತೆ ರಾಜ್ಯಗಳನ್ನು ಚಿಂತೆಗೀಡು ಮಾಡಿವೆ.

ರಾಜ್ಯದಲ್ಲಿ 4 ಲಕ್ಷ ದಾಟಿದ ಕೊರೊನಾ ಪರೀಕ್ಷೆ, ಶೇ. 44 ಸೋಂಕಿತರು ಗುಣಮುಖ

ಇತ್ತೀಚಿನ ದಿನಗಳಲ್ಲಿ ನಿತ್ಯ ಸರಾಸರಿ 7 ರಿಂದ 9 ಸಾವಿರ ಕೇಸ್‌ಗಳು ವರದಿಯಾಗುತ್ತಿದ್ದು ಜಾಗತಿಕ ಕೊರೊನಾ ಬಾಧಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೇಲೇರುತ್ತಿರುವುದು ಸಹ ಸಮುದಾಯ ಮಟ್ಟ ತಲುಪುವ ಸೂಚನೆಯಾಗಿದೆ. ದಿಲ್ಲಿಯಲ್ಲಿ ಪ್ರತಿ 12 ದಿನಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಜುಲೈ ಅಂತ್ಯದ ವೇಳೆಗೆ ರಾಷ್ಟ್ರ ರಾಜಧಾನಿಯಲ್ಲಿ ಸೋಂಕು ಪೀಡಿತರ ಸಂಖ್ಯೆ 5.5 ಲಕ್ಷ ದಾಟುವ ಸಾಧ್ಯತೆ ಇದೆ. 80 ಸಾವಿರ ಬೆಡ್‌ಗಳ ಅಗತ್ಯ ಇದ್ದು ಸಿದ್ದತೆ ನಡೆಯುತ್ತಿದೆ ಎಂದು ರಾಜ್ಯ ಸರಕಾರ ಹೇಳಿದೆ.

''ಜೂನ್‌ 15ರೊಳಗೆ ದಿಲ್ಲಿಯಲ್ಲಿ44 ಸಾವಿರ ಪ್ರಕರಣಗಳು ದಾಖಲಾಗಲಿದ್ದು, ಚಿಕಿತ್ಸೆಗಾಗಿ 6,600 ಹಾಸಿಗೆಗಳ ಅಗತ್ಯ ಬೀಳಲಿದೆ. ಜುಲೈ 15ಕ್ಕೆ 2.15 ಲಕ್ಷ ಮಂದಿಗೆ ಸೋಂಕು ತಗುಲಿದರೆ, ಜುಲೈ ಅಂತ್ಯಕ್ಕೆ ಸೋಂಕಿತರ ಸಂಖ್ಯೆ 5.5 ಲಕ್ಷ ದಾಟಲಿದೆ,'' ಎಂದು ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿದ್ದು ಇದು ಸಮುದಾಯ ಪ್ರಸರಣದ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.

ದಕ್ಷಿಣ ಒಳನಾಡಿಗೆ ಆವರಿಸಿದ ಮಾನ್ಸೂನ್: ಇನ್ನೆರಡು ದಿನದಲ್ಲಿ ರಾಜ್ಯವ್ಯಾಪಿ ಮುಂಗಾರು!

ಮಹಾರಾಷ್ಟ್ರದಲ್ಲಿ 90 ಸಾವಿರ: ಮಹಾರಾಷ್ಟ್ರದಲ್ಲಿ ಮಂಗಳವಾರ ಸೋಂಕಿತರ ಸಂಖ್ಯೆ 90 ಸಾವಿರ ದಾಟಿದ್ದರೆ, ತಮಿಳುನಾಡಿನಲ್ಲಿ35 ಸಾವಿರದ ಗಡಿ ತಲುಪಿದೆ. ಇದೇ ವೇಳೆ, ಕೊರೊನಾ ಸಾಂಕ್ರಾಮಿಕ ಹಾವಳಿಯಿಂದ ಹಲವು ದೇಶಗಳಲ್ಲಿ ಸಾರ್ವಜನಿಕರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ