ಆ್ಯಪ್ನಗರ

ಮುಂಬಯಿ: ಐಸಿಸ್‌ ನೇಮಕಾತಿ ಏಜೆಂಟ್‌ ಸೆರೆ

ಮತಾಂತರಗೊಂಡು, ಐಸಿಸ್‌ಗೆ ಸೇರುವಂತೆ ಕೇರಳ ಯುವಕರ ಮೇಲೆ ಒತ್ತಡ ಹೇರುತ್ತಿದ್ದ ಇಲ್ಲಿನ ಕಲ್ಯಾಣ್ ಮೂಲದ ಶಂಕಿತ ಐಸಿಸ್ ಉಗ್ರನನ್ನು ಕೇರಳ ಪೊಲೀಸರೊಂದಿಗೆ, ಎಟಿಎಸ್ ಶನಿವಾರ ಬಂಧಿಸಿದೆ.

ಏಜೆನ್ಸೀಸ್ 23 Jul 2016, 8:18 pm
ಮುಂಬಯಿ: ಯುವಕರನ್ನು ಮತಾಂತರ ಮಾಡಿ, ಐಸಿಸ್‌ಗೆ ಸೇರಿಸುವ ಕೆಲಸ ಮಾಡುತ್ತಿರುವ ಆರೋಪದಡಿ ಮುಂಬಯಿ ಕಲ್ಯಾಣ್‌ನ ರಿಝ್ವಾನ್‌ ಖಾನ್‌ ಎಂಬಾತನನ್ನು ಕೇರಳ ಪೊಲೀಸರು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆಯ ಸಹಕಾರದಲ್ಲಿ ಶನಿವಾರ ಬಂಧಿಸಿದ್ದಾರೆ.
Vijaya Karnataka Web is recruiter kalyan youth arrested
ಮುಂಬಯಿ: ಐಸಿಸ್‌ ನೇಮಕಾತಿ ಏಜೆಂಟ್‌ ಸೆರೆ


ತನ್ನನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ನಡೆಸುವ ಮತ್ತು ಐಸಿಸ್‌ಗೆ ಸೇರಿಸುವ ಪ್ರಯತ್ನ ನಡೆದಿತ್ತು ಎಂದು ಕೇರಳದ ಎಬಿನ್‌ ಜಾಕೋಬ್‌ (25) ಎಂಬ ಯುವಕ ಕೊಚ್ಚಿ ಪೊಲೀಸರಿಗೆ ದೂರು ನೀಡಿದ್ದರ ಆಧಾರದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಎರಡು ದಿನಗಳ ಹಿಂದೆ ಬಂಧಿತನಾದ, ಝಾಕಿರ್‌ ಹುಸೇನ್‌ನ ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಷನ್‌ನ ಪದಾಧಿಕಾರಿ ಆರ್ಷಿ ಖುರೇಷಿಗೂ ರಿಝ್ವಾನ್‌ ಖಾನ್‌ಗೂ ಸಂಬಂಧವಿದೆ.

ಈ ಎಬಿನ್‌ ಜಾಕೋಬ್‌ನ ಹಿನ್ನೆಲೆ ಇನ್ನೂ ವಿಶೇಷವಿದೆ. ಕೇರಳದಿಂದ ನಾಪತ್ತೆಯಾಗಿ ಐಸಿಸ್‌ ಸೇರಿದ್ದಾರೆ ಎನ್ನಲಾದ 21 ಮಂದಿಯ ಪೈಕಿ ಮೆರಿನ್‌ ಅಲಿಯಾಸ್‌ ಮೇರಿಯಂ ಮತ್ತು ಆಕೆಯ ಗಂಡ ಬೆಸ್ಟಿನ್‌ ವಿನ್ಸೆಂಟ್‌ ಅಲಿಯಾಸ್‌ ಯಾಹ್ಯಾ ಇಬ್ಬರು. ಮೆರಿನ್‌ ಅಲಿಯಾಸ್‌ ಮೇರಿಯಂನ ಸೋದರನೇ ಈ ಜಾಕೋಬ್‌.

2 ವರ್ಷದ ಹಿಂದೆ ಖುರೇಷಿ ಎಂಬಾತ ಎಬಿನ್‌ನನ್ನು ಮುಂಬಯಿಗೆ ಬರಲೇಬೇಕು ಎಂದು ಒತ್ತಾಯಿಸಿದ್ದ. ಇತ್ತ ಆ ಹೊತ್ತಿಗಾಗಲೇ ಇಸ್ಲಾಮನ್ನು ತಲೆಯಲ್ಲಿ ತುಂಬಿಕೊಂಡಿದ್ದ ಬೆಸ್ಟಿನ್‌ ಕೂಡಾ ಒತ್ತಡ ಹೇರುತ್ತಿದ್ದ. ಹಾಗಾಗಿ, ಅನಿವಾರ್ಯವಾಗಿ ಮುಂಬಯಿಗೆ ಹೋಗಿದ್ದು, ತನ್ನನ್ನು ಮತಾಂತರ ಮತ್ತು ಐಸಿಸ್‌ ಸೇರ್ಪಡೆಗೆ ಒತ್ತಾಯಿಸಲಾಯಿತು ಎಂದು ಎಬಿನ್‌ ತಿಳಿಸಿರುವುದಾಗಿ ಎರ್ನಾಕುಲಂ ಎಸಿಪಿ ಕೆ.ವಿ. ವಿಜಯನ್‌ ತಿಳಿಸಿದ್ದಾರೆ.

ಇದೀಗ ಆರ್ಷಿ ಖುರೇಷಿ ನೀಡಿದ ಮಾಹಿತಿಯ ಆಧಾರದಲ್ಲಿ ಜಾಕೋಬ್‌ನನ್ನು ಬಂಧಿಸಲಾಗಿದ್ದು, ಕೇರಳ ಪೊಲೀಸರು ವರ್ಗಾವಣೆ ರಿಮ್ಯಾಂಡ್‌ನಡಿ ಆತನನ್ನು ಕೇರಳಕ್ಕೆ ಕರೆದೊಯ್ದಿದ್ದಾರೆ.

ಮರಾಠವಾಡಾದ 100 ಯುವಕರು ಐಸಿಸ್‌ಗೆ?

ಈ ನಡುವೆ, ಮಹಾರಾಷ್ಟ್ರದ ಮರಾಠವಾಡದಿಂದ 100 ಯುವಕರು ನಾಪತ್ತೆಯಾಗಿದ್ದು, ಅವರೆಲ್ಲ ಐಸಿಸ್‌ ಸೇರಿರುವ ಸಾಧ್ಯತೆಗಳಿವೆ ಎಂದು ಪರ್ಭಾನಿ ಕ್ಷೇತ್ರದ ಶಾಸಕ ಶಿವಸೇನೆಯ ರಾಹುಲ್‌ ಪಾಟೀಲ್‌ ವಿಧಾನಸಭೆಯಲ್ಲೇ ಆರೋಪಿಸಿರುವುದು ಕುತೂಹಲ ಕೆರಳಿಸಿದೆ. ಇವರ ನಾಪತ್ತೆ ಬಗ್ಗೆ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ