ಆ್ಯಪ್ನಗರ

ಅರ್ನಬ್‌ ಗೋಸ್ವಾಮಿ ಬಂಧನಕ್ಕೆ ಮುನ್ನ ಸಮನ್ಸ್‌ ನೀಡಲು ನಿರ್ದೇಶನ ನೀಡಿದ ಮುಂಬಯಿ ಹೈ ಕೋರ್ಟ್‌!

ಈ ಪ್ರಕರಣದಲ್ಲಿ ಗೋಸ್ವಾಮಿ ತಪ್ಪು ಮಾಡಿರಬಹುದು. ಅದಕ್ಕೆ ಸಂಬಂಧಿಸಿದಂತೆ ನೀವು ಸರಿಯಾದ ತನಿಖೆ ನಡೆಸಿ. ಇತರೆ ಆರೋಪಿಗಳ ರೀತಿ ಅವರಿಗೂ ಮೊದಲು ಸಮನ್ಸ್‌ ಜಾರಿಗೊಳಿಸಿ. ಆಗ ಅವರು ವಿಚಾರಣೆಗೆ ಹಾಜರಾಗುತ್ತಾರೆ. ಎಫ್‌ಐಆರ್‌ ದಾಖಲಿಸಿದ ಮಾತ್ರಕ್ಕೆ ಎಲ್ಲವೂ ಅಂತಿಮವಾಗುವುದಿಲ್ಲ. ಎಫ್‌ಐಆರ್‌ ಎನ್‌ಸೈಕ್ಲೋಪಿಡಿಯಾ ಅಲ್ಲ. ನೀವು ಏನು ತನಿಖೆ ಮಾಡಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳಲಾಗುವುದು ಎಂದು ಕೋರ್ಟ್‌ ಹೇಳಿದೆ.

Vijaya Karnataka Web 20 Oct 2020, 8:29 am
ಮುಂಬಯಿ: ನಕಲಿ ಟಿಆರ್‌ಪಿ ಪ್ರಕರಣದಲ್ಲಿ ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರನ್ನು ಬಂಧಿಸುವುದಿದ್ದರೆ ಬಂಧನಕ್ಕೂ ಮುನ್ನ ಅವರಿಗೆ ಸಮನ್ಸ್‌ ಜಾರಿಗೊಳಿಸಿ ವಿಚಾರಣೆ ನಡೆಸಬೇಕು ಎಂದು ಮುಂಬಯಿ ಹೈಕೋರ್ಟ್‌ ಸೋಮವಾರ ಅಪರಾಧ ವಿಭಾಗದ ಪೊಲೀಸರಿಗೆ ನಿರ್ದೇಶನ ನೀಡಿದೆ.
Vijaya Karnataka Web TRP scam GFX Ajit Ninan 1200


''ಈ ಪ್ರಕರಣದಲ್ಲಿ ಗೋಸ್ವಾಮಿ ತಪ್ಪು ಮಾಡಿರಬಹುದು. ಅದಕ್ಕೆ ಸಂಬಂಧಿಸಿದಂತೆ ನೀವು ಸರಿಯಾದ ತನಿಖೆ ನಡೆಸಿ. ಇತರೆ ಆರೋಪಿಗಳ ರೀತಿ ಅವರಿಗೂ ಮೊದಲು ಸಮನ್ಸ್‌ ಜಾರಿಗೊಳಿಸಿ. ಆಗ ಅವರು ವಿಚಾರಣೆಗೆ ಹಾಜರಾಗುತ್ತಾರೆ. ಎಫ್‌ಐಆರ್‌ ದಾಖಲಿಸಿದ ಮಾತ್ರಕ್ಕೆ ಎಲ್ಲವೂ ಅಂತಿಮವಾಗುವುದಿಲ್ಲ. ಎಫ್‌ಐಆರ್‌ ಎನ್‌ಸೈಕ್ಲೋಪಿಡಿಯಾ ಅಲ್ಲ. ನೀವು ಏನು ತನಿಖೆ ಮಾಡಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳಲಾಗುವುದು.

ಅದರ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ನವೆಂಬರ್‌ 5ರ ಒಳಗೆ ನಮಗೆ ಒಪ್ಪಿಸಿ,'' ಎಂದು ಕೋರ್ಟ್‌, ಪೊಲೀಸರಿಗೆ ಆದೇಶ ನೀಡಿತು. ಅ.6ರಂದು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಪ್ರಶ್ನಿಸಿ ಗೋಸ್ವಾಮಿ ಮೊದಲು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಬಳಿಕ ಸುಪ್ರೀಂಕೋರ್ಟ್‌ ಬಾಂಬೆ ಹೈಕೋರ್ಟ್‌ಗೆ ತೆರಳುವಂತೆ ಸೂಚಿಸಿತ್ತು. ಇದೀಗ ಬಾಂಬೆ ಹೈಕೋರ್ಟ್‌ನಲ್ಲಿ ಗೋಸ್ವಾಮಿ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ. ನಕಲಿ ಟಿಆರ್‌ಪಿ ಸಂಬಂಧದ ಪ್ರಕರಣವಾಗಿದೆ.

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಆಹಾರ ಧಾನ್ಯಗಳ ಖರೀದಿ ಶುರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ