ಜಾಧವ್ ಪ್ರಕರಣ: ಪಾಕ್ ಉಪ ರಾಯಭಾರಿಗೆ ಸಮನ್ಸ್ ಜಾರಿ
ಕುಲಭೂಷಣ್ ಯಾಧವ್ ಮರಣ ದಂಡನೆ ವಿಚಾರವಾಗಿ ಪಾಕ್ ಉಪ ರಾಯಭಾರಿಗೆ ಭಾರತ ಸಮನ್ಸ್ ಜಾರಿ ಮಾಡಿದೆ.
ಟೈಮ್ಸ್ ಆಫ್ ಇಂಡಿಯಾ 19 Apr 2017, 9:03 pm
ಹೊಸದಿಲ್ಲಿ: ಕುಲಭೂಷಣ್ ಯಾಧವ್ ಮರಣ ದಂಡನೆ ವಿಚಾರವಾಗಿ ಪಾಕ್ ಉಪ ರಾಯಭಾರಿಗೆ ಭಾರತ ಸಮನ್ಸ್ ಜಾರಿ ಮಾಡಿದೆ.
ಜಾಧವ್ ಅವರ ಮೇಲೆ ಸುಳ್ಳು ಆರೋಪ ಹಾಗೂ ಶಿಕ್ಷೆ ವಿಧಿಸಿದ ಕುರಿತು ಮಾತುಕತೆ ನಡೆಸಲು ಪಾಕ್ ಉಪ ರಾಯಭಾರಿಯಾಗಿರುವ ಸೈಯದ್ ಹೈದರ್ ಶಹಾಗೆ ಸಮನ್ಸ್ ಜಾರಿ ಮಾಡಿ ಕೇಂದ್ರ ವಿದೇಶಾಂಗ ವ್ಯವಾಹಾರಗಳ ಸಚಿವಾಲಯ ಆದೇಶಿಸಿದೆ.
ಕಳೆದ ಕೆಲ ದಿನಗಳ ಹಿಂದೆ ಭಾರತದ ಹೈಕಮಿಷನರ್ ಗೌತಮ್ ಬಂಬಾವಳೆ ಜಾಧವ್ ಮರಣ ದಂಡನೆ ಕುರಿತು ಪಾಕ್ ಹೈಕಮಿಷನರ್ನಲ್ಲಿ ಭೇಟಿಯಾಗಿದ್ದರು, ಅಲ್ಲಿ ಜಾಧವ್ ಪ್ರಕರಣದ ಎಪ್ಐಆರ್ ಪ್ರತಿಯಿಂದ ಹಿಡಿದು ಪ್ರತಿಯೊಂದು ಬೆಳವಣಿಗೆ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಈ ಎಲ್ಲಾ ಬೆಳವಣಿಗೆ ಬಳಿಕ ವಿದೇಶಾಂಗ ವ್ಯಾವಹಾರದ ಸಚಿವಾಲಯ ಈ ಕ್ರಮವನ್ನು ತೆಗೆದುಕೊಂಡಿದೆ.
ಪಾಕ್ನಲ್ಲಿ ನಡೆದ ಭೇಟಿ ಬಳಿಕ ಮಾತನಾಡಿದ್ದ ಬಂಬಾವಾಲೆ, 'ಜಾಧವ್ರನ್ನು ರಕ್ಷಿಸಬೇಕು ಎಂದು ನಮಗೂ ಅರಿವಿದೆ, ಆದರೆ ಪಾಕ್ ತೀರ್ಪನ್ನು ಪ್ರಶ್ನಿಸಲು ಸರಿಯಾದ ಆದಾರವಿರುಬೇಕು ಹೀಗಾಗಿ ಪಾಕ್ಗೆ ಜಾಧವ್ ಪ್ರಕರಣದ ಸಂಪೂರ್ಣ ದಾಖಲೆಯನ್ನು ಸಲ್ಲಿಸುವಂತೆ ನಾವು ಪಾಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ' ಹೇಳಿದ್ದಾರೆ.