ಆ್ಯಪ್ನಗರ

ಜಾಧವ್‌ಗೆ ಗಲ್ಲು ಶಿಕ್ಷೆ: ಪೂರ್ವ ನಿರ್ಧರಿತ ಕೊಲೆ

ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಮರಣ ದಂಡನೆ ಒಂದು ಪೂರ್ವ ನಿರ್ಧರಿತ ಕೊಲೆ ಎಂದು ಭಾರತ ಹೇಳಿದ್ದು, ಈ ಹಿನ್ನಲೆಯಲ್ಲಿ ಪಾಕ್‌ ರಾಯಭಾರಿ ಅಬ್ದುಲ್‌ ಬಸಿತ್‌ರನ್ನು ಕರೆಸಿ ಪ್ರತಿಭಟನೆ ನಡೆಸಿದೆ.

ಟೈಮ್ಸ್ ಆಫ್ ಇಂಡಿಯಾ 10 Apr 2017, 7:27 pm
ಹೊಸದಿಲ್ಲಿ: ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಮರಣ ದಂಡನೆ ಒಂದು ಪೂರ್ವ ನಿರ್ಧರಿತ ಕೊಲೆ ಎಂದು ಭಾರತ ಹೇಳಿದ್ದು, ಈ ಹಿನ್ನಲೆಯಲ್ಲಿ ಪಾಕ್‌ ರಾಯಭಾರಿ ಅಬ್ದುಲ್‌ ಬಸಿತ್‌ರನ್ನು ಕರೆಸಿ ಪ್ರತಿಭಟನೆ ನಡೆಸಿದೆ.
Vijaya Karnataka Web jadhavs death sentence is premeditated murder says india in demarche to pakistan
ಜಾಧವ್‌ಗೆ ಗಲ್ಲು ಶಿಕ್ಷೆ: ಪೂರ್ವ ನಿರ್ಧರಿತ ಕೊಲೆ


ಪ್ರಕರಣಕ್ಕೆ ಸಂಬಂಧಿಸಿ ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈಶಂಕರ್‌ ಪಾಕ್‌ ರಾಯಭಾರಿ ಬಸಿತ್‌ರನ್ನು ಕರೆಸಿದ್ದಾರೆ. ಅಲ್ಲದೇ ಜಾಧವ್‌ ವಿಚಾರಣೆ ಒಂದು ನಾಟಕೀಯ ವಿಚಾರಣೆಯಾಗಿದೆ ಎಂದು ಹೇಳಿದ್ದಾರೆ.

‘ಜಾಧವ್ ಅವರು ತಪ್ಪೊಪ್ಪಿಗೆ ನೀಡಿದ್ದಾರೆ ಎಂಬ ಬಗ್ಗೆ ಪಾಕಿಸ್ತಾನ ಸರಕಾರ ನಮಗೆ ಅಧಿಕೃತ ಮಾಹಿತಿ ನೀಡಿಲ್ಲ. ಪತ್ರಿಕಾ ಹೇಳಿಕೆಯಿಂದ ಆ ಕುರಿತು ಮಾಹಿತಿ ಲಭಿಸಿತ್ತು. ನಮ್ಮ ರಾಯಭಾರಿಗೂ ಕೂಡಾ ಜಾಧವ್‌ರ ವಿಚಾರಣೆ ಕುರಿತು ಮಾಹಿತಿ ನೀಡಿರಲಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೋಟಿಸ್‌ನಲ್ಲಿ ಹೇಳಿದೆ.

'ಒಂದು ವೇಳೆ ಭಾರತೀಯ ಪ್ರಜೆಗೆ ಯಾವುದೇ ವಿಚಾರಣೆ ನಡೆಸದೆ ಕಾನೂನನ್ನು ಉಲ್ಲಂಘಿಸಿ ಶಿಕ್ಷೆ ನೀಡಿದರೆ, ಸರಕಾರ ಹಾಗೂ ನಮ್ಮ ಜನರು ಪಾಕ್‌ ನಿಲುವನ್ನು ಪೂರ್ವ ನಿರ್ಧರಿತ ಕೊಲೆ ಎಂದು ಪರಿಗಣಿಸುತ್ತೇವೆ' ಎಂಬುದಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಿದೆ.

ಜಾಧವ್ ಅವರಿಗೆ ವಕೀಲರ ನೆರವು ನೀಡಲು ಪದೇಪದೇ ಮನವಿ ಮಾಡಿದರೂ ಪಾಕಿಸ್ತಾನ ಸರಕಾರ ಅದಕ್ಕೆ ಸ್ಪಂದಿಸಿಲ್ಲ. ಭಾರತದ ರಾಯಭಾರಿಗೆ ಜಾಧವ್ ಅವರನ್ನು ಭೇಟಿಯಾಗುವ ಅವಕಾಶವನ್ನೂ ಕಲ್ಪಿಸಿಲ್ಲ ಎಂದು ಅಧಿಕಾರಿಗಳು ದೂರಿದ್ದಾರೆ.

ಜಾಧವ್ ಅವರನ್ನು 2016ರ ಮಾರ್ಚ್ 3ರಂದು ಬಲೂಚಿಸ್ತಾನದಲ್ಲಿ ಬಂಧಿಸಲಾಗಿತ್ತು ಎಂದು ಸೋಮವಾರ ಮುಂಜಾನೆ ಪಾಕ್‌ ಸೇನೆ ಪ್ರಕಟಣೆ ಬಿಡುಗಡೆಗೊಳಿಸಿತ್ತು. ಜಾಧವ್ ಅವರನ್ನು ಭಾರತದ ಬೇಹುಗಾರಿಕಾ ಸಂಸ್ಥೆ ‘ರಾ’ದ ಏಜೆಂಟ್ ಎಂದು ಪಾಕಿಸ್ತಾನ ಆರೋಪಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ