ಆ್ಯಪ್ನಗರ

ಆಂಧ್ರದ ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ 75% ಮೀಸಲು

ಸಾರ್ವಜನಿಕ ಖಾಸಗಿ ಜಂಟಿ ಸಹಭಾಗಿತ್ವದ ಕಂಪನಿಗಳು, ಖಾಸಗಿ ಕಾರ್ಖಾನೆ, ಘಟಕಗಳಿಗೆ ನಿಯಮ ಅನ್ವಯಿಸಲಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲು ಕಲ್ಪಿಸುವುದಾಗಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಭರವಸೆ ನೀಡಿದ್ದರು. ಅದನ್ನು ಈಡೇರಿಸಿದ್ದಾರೆ.

PTI 24 Jul 2019, 5:00 am
ಹೊಸದಿಲ್ಲಿ : ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ವಲಯದ ಕಾರ್ಖಾನೆಗಳು ಮತ್ತು ಉದ್ದಿಮೆ ಘಟಕಗಳಲ್ಲಿ ಶೇ.75 ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡಲು ಆಂಧ್ರಪ್ರದೇಶ ನಿರ್ಧರಿಸಿದೆ. ಈ ಕುರಿತ ವಿಧೇಯಕವನ್ನು ಆಂಧ್ರ ಪ್ರದೇಶದ ವಿಧಾನಸಭೆಯು ಅಂಗೀಕರಿಸಿದೆ.
Vijaya Karnataka Web jagan


ಸಾರ್ವಜನಿಕ ಖಾಸಗಿ ಜಂಟಿ ಸಹಭಾಗಿತ್ವದ ಕಂಪನಿಗಳು, ಖಾಸಗಿ ಕಾರ್ಖಾನೆ, ಘಟಕಗಳಿಗೆ ನಿಯಮ ಅನ್ವಯಿಸಲಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲು ಕಲ್ಪಿಸುವುದಾಗಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಭರವಸೆ ನೀಡಿದ್ದರು. ಅದನ್ನು ಈಡೇರಿಸಿದ್ದಾರೆ.
ಸರಕಾರದ ಆರ್ಥಿಕ ನೆರವನ್ನು ಪಡೆದಿರುವ ಅಥವಾ ಪಡೆಯದೇ ಇರುವ ಯಾವುದೇ ಕಂಪನಿ/ಕೈಗಾರಿಕೆಗಾದರೂ ಈ ಮೀಸಲು ಅನ್ವಯವಾಗುತ್ತದೆ. ಸ್ಥಳೀಯರಿಗೆ ಶೇ.75ರಷ್ಟು ಮೀಸಲು ಕಲ್ಪಿಸುವ 'ಆಂಧ್ರಪ್ರದೇಶ ಎಂಪ್ಲಾಯ್‌ಮೆಂಟ್‌ ಆಫ್‌ ಲೋಕಲ್‌ ಕ್ಯಾಂಡಿಡೇಟ್ಸ್‌ ಇನ್‌ ಇಂಡಸ್ಟ್ರೀಸ್‌/ಫ್ಯಾಕ್ಟರಿ ಆ್ಯಕ್ಟ್ 2019'ಕ್ಕೆ ರಾಜ್ಯ ವಿಧಾನಸಭೆಯು ಅನುಮೋದನೆ ನೀಡಿದೆ. ಈ ವಿಧೇಯಕವು ಆಂಧ್ರದಲ್ಲಿ ಸದ್ಯಕ್ಕೆ ಅಸ್ತಿತ್ವದಲ್ಲಿರುವ ಕೈಗಾರಿಕೆಗಳು ಮತ್ತು ಉದ್ಯಮಗಳಿಗೆ ಮಾತ್ರ ಅನ್ವಯವಾಗುವುದಿಲ್ಲ. ಕಾನೂನು ಜಾರಿಯಾದ ಮೇಲೆ ತಲೆ ಎತ್ತುವ ಹೊಸ ಕಂಪನಿಗಳಿಗೂ ಅನ್ವಯವಾಗುತ್ತದೆ. ಹೊಸ ನೀತಿಯ ಪ್ರಕಾರ, ಮುಂದಿನ ಮೂರು ವರ್ಷಗಳಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಉದ್ಯೋಗಗಳನ್ನು ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಂಪನಿಗಳ ಮನವೊಲಿಸುವ ವಿಶ್ವಾಸವನ್ನು ಸರಕಾರವು ವ್ಯಕ್ತಪಡಿಸಿದೆ.

ಉದ್ಯೋಗಕ್ಕೆ ಆದ್ಯತೆ : ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಯುವಕರನ್ನು ಆಕರ್ಷಿಸಲು ಜಗನ್‌ ಅವರು ಉದ್ಯೋಗ ಮಂತ್ರವನ್ನು ಪಠಿಸಿದ್ದರು. ಅದರನ್ವಯವೇ ಸರಕಾರ ರಚನೆಯಾದ ಮೇಲೆ 1.33 ಲಕ್ಷ ಗ್ರಾಮ ಸ್ವಯಂ ಸೇವಕರ ಉದ್ಯೋಗಗಳನ್ನು ನಿರುದ್ಯೋಗಿಗಳಿಗಾಗಿ ಸರಕಾರವು ಈಗಾಗಲೇ ಘೋಷಿಸಿದೆ. ಸರಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಈ ಸ್ವಯಂ ಸೇವಕರು ಮಾಡಬೇಕಾಗುತ್ತದೆ.

======
ಲೋಕಲ್‌ ಫಸ್ಟ್‌: ಆಂಧ್ರದ ಹೊಸ ನೀತಿಯಲ್ಲಿ ಏನಿದೆ?

* ಮುಂದಿನ 3 ವರ್ಷಗಳಲ್ಲಿ ಖಾಸಗಿ ಕಂಪನಿ, ಕಾರ್ಖಾನೆಗಳು ಸ್ಥಳೀಯರಿಗೆ ಶೇ.75ರಷ್ಟು ಉದ್ಯೋಗಗಳನ್ನು ನೀಡಬೇಕು.

* ಒಂದು ವೇಳೆ ಸ್ಥಳೀಯರಿಗೆ ಸೂಕ್ತ ಕೌಶಲ ಇಲ್ಲದೇ ಹೋದರೆ, ಅವರಿಗೆ ತರಬೇತಿ ನೀಡಿ ಕಂಪನಿಗಳು ಉದ್ಯೋಗ ಒದಗಿಸಬೇಕಾಗುತ್ತದೆ.

* ಪೆಟ್ರೋಲಿಯಂ, ಫಾರ್ಮಸಿಟಿಕಲ್ಸ್‌, ಕಲ್ಲಿದ್ದಲು, ರಸಗೊಬ್ಬರ, ಸಿಮೆಂಟ್‌ ಮತ್ತಿತರ ಉದ್ಯಮಗಳಿಗೆ ಹೊಸ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ