ಪಟನಾ: ಬಿಹಾರ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ (82) ಸೋಮವಾರ ಬೆಳಗ್ಗೆ ನಿಧರಾಗಿದ್ದಾರೆ. ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಅವರು, ಬಿಹಾರದಲ್ಲಿ ಕಾಂಗ್ರೆಸ್ನ ಕೊನೆಯ ಮುಖ್ಯಮಂತ್ರಿಯೂ ಹೌದು. ಇಂದಿರಾ ಗಾಂಧಿ ಅವರ ನಿಷ್ಠರಾಗಿದ್ದ ತಮ್ಮ ಹಿರಿಯ ಸಹೋದರ ಲಲಿತ್ ನಾರಾಯಣ ಮಿಶ್ರಾ ಅವರ ಹತ್ಯೆ ಬಳಿಕ 1975ರಲ್ಲಿ ಮೊದಲ ಸಲ ಬಿಹಾರ ಸಿಎಂ ಆಗಿ ಆಧಿಕಾರ ವಹಿಸಿಕೊಂಡಿದ್ದರು. ಲಲಿತ್ ಅವರ ಹತ್ಯೆಗಾಗಿ ನಡೆದ ಬಾಂಬ್ ಸ್ಫೋಟದಲ್ಲಿ ಜಗನ್ನಾಥ ಮಿಶ್ರಾ ಸಹ ಗಾಯಗೊಂಡಿದ್ದರು. ವಿಧಾನ ಮಂಡಲದ ಎರಡೂ ಸದನಗಳ ಸದಸ್ಯರಾಗಿದ್ದ ಅವರು, ಕೇಂದ್ರದಲ್ಲಿ ಪಿ.ವಿ.ನರಸಿಂಹ ರಾವ್ ಅವರ ಸಂಪುಟ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಮಾಧ್ಯಮಗಳನ್ನು ಹತ್ತಿಕ್ಕಲು ರಾಜ್ಯದಲ್ಲಿ 'ಪತ್ರಿಕಾ ಕಾಯಿದೆ' ಜಾರಿಗೆ ತಂದ ಕುಖ್ಯಾತಿಯೂ ಅವರಿಗಿದೆ. ರಾಜಕೀಯ ಬದುಕಿನ ಕೊನೆಯ ದಿನಗಳಲ್ಲಿ ಕಾಂಗ್ರೆಸ್ ಜತೆ ಮುನಿಸಿಕೊಂಡು, ಶರದ್ ಪವಾರ್ ನೇತೃತ್ವದ ಎನ್ಸಿಪಿ ಸೇರಿದ್ದರು. ಅವರ ಕಿರಿಯ ಪುತ್ರ ನಿತೀಶ್ ಮಿಶ್ರಾ ಅವರು ಬಿಹಾರದ ಹಾಲಿ ಸಚಿವರು. ಮೇವು ಹಗರಣದ ಮೂರು ಪ್ರಕರಣಗಳಲ್ಲಿ ಜಗನ್ನಾಥ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು, 2018ರ ಜುಲೈನಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಹುಟ್ಟೂರಿನಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಯಲಿದೆ.
ಬಿಹಾರ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ವಿಧಿವಶ
ಮೇವು ಹಗರಣದ ಮೂರು ಪ್ರಕರಣಗಳಲ್ಲಿ ಜಗನ್ನಾಥ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು, 2018ರ ಜುಲೈನಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿದ್ದರು.
Agencies 20 Aug 2019, 5:00 am