ಆ್ಯಪ್ನಗರ

ಮೋದಿ ಹತ್ಯೆಗೆ ಪಕ್ಕಾ ಪ್ಲ್ಯಾನ್ ಇದೆ, ಗುತ್ತಿಗೆ ಕೊಡುವಿರಾ?: ಫೇಸ್‌ಬುಕ್ ಪೋಸ್ಟ್ ಹಾಕಿದವನ ಬಂಧನ

ಹರಿಯಾಣದ ರೇವಾರಿ ನಿವಾಸಿಯಾಗಿರುವ ಮತ್ತು ಪ್ರಸಕ್ತ ತ್ರಿವೇಣಿ ನಗರದಲ್ಲಿ ವಾಸವಾಗಿರುವ ನವೀನ್‌ ಕುಮಾರ್‌ ಯಾದವ್‌ (31) ಎಂಬಾತನೇ ಬಂಧಿತ. ಸೈಬರ್‌ ಸೆಲ್‌ನ ಸಹಾಯದಿಂದ ಈತನನ್ನು ಬಂಧಿಸಲಾಯಿತು ಎಂದು ಡಿಸಿಪಿ ರಾಹುಲ್‌ ಜೈನ್‌ ತಿಳಿಸಿದ್ದಾರೆ.

Vijaya Karnataka 29 Mar 2019, 8:37 am
ಜೈಪುರ: ''ಯಾರಾದರೂ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಕಾಂಟ್ರಾಕ್ಟ್ ಕೊಡುವವರು ಇದ್ದೀರಾ? ನನ್ನ ಹತ್ತಿರ ಅತ್ಯಂತ ಕರಾರುವಕ್ಕಾದ ಪ್ಲ್ಯಾನ್‌ ಇದೆ,'' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ ವ್ಯಕ್ತಿಯನ್ನು ಗುರುವಾರ ಜೈಪುರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web Arrest 23


ಹರಿಯಾಣದ ರೇವಾರಿ ನಿವಾಸಿಯಾಗಿರುವ ಮತ್ತು ಪ್ರಸಕ್ತ ತ್ರಿವೇಣಿ ನಗರದಲ್ಲಿ ವಾಸವಾಗಿರುವ ನವೀನ್‌ ಕುಮಾರ್‌ ಯಾದವ್‌ (31) ಎಂಬಾತನೇ ಬಂಧಿತ. ಸೈಬರ್‌ ಸೆಲ್‌ನ ಸಹಾಯದಿಂದ ಈತನನ್ನು ಬಂಧಿಸಲಾಯಿತು ಎಂದು ಡಿಸಿಪಿ ರಾಹುಲ್‌ ಜೈನ್‌ ತಿಳಿಸಿದ್ದಾರೆ.

ಮಾರ್ಚ್‌ 26ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದಾಗ ಸಾಕಷ್ಟು ಜನ ಆಕ್ಷೇಪಿಸಿದ್ದರು. ಅದರಿಂದ ಹೆದರಿದ ಆತ ಪೋಸ್ಟ್‌ ಡಿಲೀಟ್‌ ಮಾಡಿದ್ದ. ಮೋದಿ ಆಡಳಿತ ನಿರ್ವಹಣೆಯ ಬಗ್ಗೆ ಆಕ್ರೋಶವಿದ್ದ ಆತ ಹಿಂದೆಯೂ ಪ್ರಧಾನಿ ಬಗ್ಗೆ ನಕಾರಾತ್ಮಕ ಪೋಸ್ಟ್‌ಗಳನ್ನು ಹಾಕಿದ್ದ ಎನ್ನಲಾಗಿದೆ.

ತಪ್ಪೊಪ್ಪಿಕೊಂಡಿರುವ ಆತ ಮೋದಿ ಅವರ ಆಡಳಿತ ಮತ್ತು ಅವರು ನಂಬಿರುವ ಸಿದ್ಧಾಂತಗಳ ಬಗ್ಗೆ ನನಗೆ ಬೇಸರವಿದೆ. ಹೀಗಾಗಿ ಈ ಪೋಸ್ಟ್ ಹಾಕಿದೆ ಎಂದು ಹೇಳಿದ್ದಾನೆ ಎಂದು ಬಜಾಜ್ ನಗರ ಪೊಲೀಸ್ ಠಾಣೆಯ ಮನ್ವೇಂದರ್ ಸಿಂಗ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ