ಆ್ಯಪ್ನಗರ

ಹಂದ್ವಾರದಲ್ಲಿ ಹುತಾತ್ಮರಾದ ಯೋಧರಿಗೆ ಜಾಮಿಯಾ ವಿದ್ಯಾರ್ಥಿನಿಯಿಂದ ಅವಹೇಳನ..!

ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಹುತಾತ್ಮರಾದ ಯೋಧರ ಬಗ್ಗೆಯೇ ದೆಹಲಿ ಕಾಲೇಜಿನ ವಿದ್ಯಾರ್ಥಿನಿ ಅವಹೇಳನಕಾರಿಯಾಗಿ ಮಾತನಾಡಿದ್ದಾಳೆ. ದೇಶಕ್ಕಾಗಿ ಪ್ರಾಣತೆತ್ತ ಯೋಧರನ್ನೇ ಈಕೆ ಯುದ್ಧ ಅಪರಾಧಿಗಳು ಎಂದು ಕರೆದಿದ್ದಾಳೆ. ಈ ಬಗ್ಗೆ ಒಪಿ ಇಂಡಿಯಾ ಅನ್ನೋ ಇಂಗ್ಲೀಷ್‌ ವೆಬ್‌ಸೈಟ್‌ ವರದಿ ಮಾಡಿದೆ.

Vijaya Karnataka Web 5 May 2020, 3:56 pm
ನವದೆಹಲಿ: ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ದೇಶದಲ್ಲೀಗ ಏನು ಬೇಕಾದ್ರೂ ಮಾತನಾಡಬಹುದು ಅನ್ನುವಂತಾಗಿದೆ. ಅದಕ್ಕೆ ಬೆಸ್ಟ್ ಉದಾಹರಣೆ ಭಾನುವಾರ ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಹುತಾತ್ಮರಾದ ಯೋಧರ ಬಗ್ಗೆಯೇ ದೆಹಲಿ ಕಾಲೇಜಿನ ವಿದ್ಯಾರ್ಥಿನಿ ಅವಹೇಳನಕಾರಿಯಾಗಿ ಮಾತನಾಡಿರುವುದು. ಹೌದು, ದೇಶಕ್ಕಾಗಿ ಪ್ರಾಣತೆತ್ತ ಯೋಧರನ್ನೇ ಯುವತಿಯೊಬ್ಬಳು ಯುದ್ಧ ಅಪರಾಧಿಗಳು ಎಂದು ಕರೆದಿದ್ದಾಳೆ. ಈ ಬಗ್ಗೆ ಒಪಿ ಇಂಡಿಯಾ ಅನ್ನೋ ಇಂಗ್ಲೀಷ್‌ ವೆಬ್‌ಸೈಟ್‌ ಆಕೆಯ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಜೊತೆಗೆ ವರದಿ ಮಾಡಿದೆ.
Vijaya Karnataka Web EXPTBqOWkAM3qc0


ದೆಹಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಹೂರ್‌ ಫರ್ವೇಜ್‌ ಎಂಬಾಕೆ ತನ್ನ ಸೋಶಿಯಯಲ್‌ ಮೀಡಿಯಾದಲ್ಲಿ ಹಂದ್ವಾರದ ಎನ್‌ಕೌಂಟರ್‌ ವೇಳೆ ಹುತಾತ್ಮರಾದ ಯೋಧರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಹಾಕಿದ್ದಾಳೆ. ಐವರು ಯೋಧರ ಮೃತದೇಹದ ಫೊಟೋಗಳನ್ನ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿರುವ ಮಹೂರ್‌ ಫರ್ವೇಜ್‌, ನೀವು ಯಾತಕ್ಕಾಗಿ ನಿರಂತರವಾಗಿ ಯುದ್ಧ ಅಪರಾಧಿಗಳನ್ನು ವೈಭವೀಕರಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾಳೆ. ದೇಶಕ್ಕಾಗಿ ಪ್ರಾಣಕೊಟ್ಟ ಯೋಧರನ್ನ ಯುದ್ಧ ಅಪರಾಧಿಗಳು ಎಂದು ಕರೆದಿದ್ದಾಗಿ ಒಪಿ ಇಂಡಿಯಾ ತಿಳಿಸಿದೆ.

ಒಪಿ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ ಹಾಕಿರುವ ಪೋಸ್ಟ್‌


ಇನ್ನು ಅದೇ ಪೋಸ್ಟ್‌ನ ಕೆಳ ಭಾಗದಲ್ಲಿ ಸತತ 70 ವರ್ಷಕ್ಕಿಂತಲೂ ಹೆಚ್ಚು ಕಾಲ ಕಾಶ್ಮೀರದಲ್ಲಿ ಅತಿಕ್ರಮಿಸಿ ಕುಳಿತ ಈ ಗುಂಪು ಹಲವು ಮಾನವ ಹಕ್ಕುಗಳನ್ನ ಉಲ್ಲಂಘಿಸಿದೆ. ಆದರೆ, ಕಾಶ್ಮೀರವನ್ನು ಪ್ರತ್ಯೇಕಿಸಲು ಒಬ್ಬ ಗನ್‌ ತೆಗೆದುಕೊಂಡರೇ ಅವರು ನಿಮಗೆ ಉಗ್ರನಾಗುತ್ತಾನೆ. ಇವರು ನಿಮಗೆ ಹುತಾತ್ಮರಾಗುತ್ತಾರೆ ಅಲ್ವಾ ಎಂದು ಪ್ರಶ್ನಿಸಿದ್ದಾಳೆ. ಈ ಪೋಸ್ಟ್‌ ಮೂಲಕ ಉಗ್ರರ ಬೆಂಬಲಿಗಳಂತೆ ಬಿಂಬಿತವಾದ ಮಹೂರ್‌ ಫರ್ವೇಜ್.‌ ಬಳಿಕ ಭಯದಿಂದ ಇನ್‌ಸ್ಟಾಗ್ರಾಂ ಸ್ಟೋರಿಗಳನ್ನ ಡಿಲೀಟ್‌ ಮಾಡಿದ್ದಾಳೆ ಎಂದು ಒಪಿ ಇಂಡಿಯಾ ವರದಿ ಮಾಡಿದೆ.


ಇನ್ನು ಮಹೂರ್‌ ಪೋಸ್ಟ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು ಈಕೆ ಉಗ್ರರ ಬೆಂಬಲಿಗಳಂತು ಮಾತನಾಡುತ್ತಿದ್ದಾಳೆ ಈಕೆಗೆ ತಕ್ಕ ಪಾಠ ಕಲಿಸಬೇಕು ಎಂದಿದ್ದಾರೆ. ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಪಾಕ್‌ ಪೋಷಿತ ಉಗ್ರರು ನಾಗರಿಕರನ್ನ ಒತ್ತೆಯಾಗಿಟ್ಟುಕೊಂಡಿದ್ದರು. ಈ ವೇಳೆ ಕಾರ್ಯಾಚರಣೆಗೆ ಇಳಿದ ಭದ್ರತಾ ಪಡೆ ಇಬ್ಬರು ಉಗ್ರರನ್ನ ಕೊಂದು ಒತ್ತೆಯಿಟ್ಟ ನಾಗರಿಕರನ್ನ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದರು. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಮೃತಪಟ್ಟಿದ್ದರು.

ಗುಂಡಿನ ಮತ್ತೇ ಗಮ್ಮತ್ತು.. ಒಳಗೆ ಸೇರಿದರೆ.. ಮದ್ಯ ಪ್ರಿಯರ ಆಟಾಟೋಪ ಒಂದೆರಡೇ..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ