ಆ್ಯಪ್ನಗರ

ಪಾಕಿಸ್ತಾನ ಸೇನೆಯ ಹೇಡಿ ಕೃತ್ಯ! ರಾತ್ರೋರಾತ್ರಿ ಜನವಸತಿ ಪ್ರದೇಶಗಳ ಮೇಲೆ ಗುಂಡಿನ ದಾಳಿ

ಸದಾ ಏನಾದರೊಂದು ಕುತಂತ್ರ ಮಾಡುತ್ತಲೇ ಇರುವ ಪಾಕ್‌ ಸೇನೆ, ಇದೀಗ ಜನ ವಸತಿ ಪ್ರದೇಶಗಳನ್ನೇ ತನ್ನ ಟಾರ್ಗೆಟ್ ಮಾಡಿಕೊಂಡಿದೆ. ಹೇಡಿಗಳಂತೆ ರಾತ್ರಿ ವೇಳೆ ಜನವಸತಿ ಪ್ರದೇಶಗ ಮೇಲೆ ದಾಳಿ ನಡೆಸುತ್ತಿದೆ.

TIMESOFINDIA.COM 20 Oct 2019, 3:57 pm
ಕುಪ್ವಾರಾ (ಜಮ್ಮು-ಕಾಶ್ಮೀರ): ಪಾಕ್ ಸೇನೆಯ ಮತ್ತೊಂದು ಮಹಾ ಕುತಂತ್ರ ಬಯಲಾಗಿದೆ. ಭಾರತ ಮತ್ತು ಪಾಕ್‌ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನ ಸೇನೆ, ನಾಗರಿಕರನ್ನೇ ತನ್ನ ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ಹಾನಿ ಮಾಡಲು ಮುಂದಾಗಿದೆ.
Vijaya Karnataka Web pak army attack


ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ತಾಣಗಳ ಮೇಲೆ ಭಾರತೀಯ ಸೇನೆ ದಾಳಿ: 4 - 5 ಪಾಕ್‌ ಯೋಧರು ಬಲಿ?

ಭಾನುವಾರ ಬೆಳಗ್ಗೆ ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕಿಸ್ತಾನ, ಭಾರತೀಯ ನಾಗರಿಕನೊಬ್ಬನನ್ನು ಹತ್ಯೆಗೈದಿತ್ತು. ಮೂವರು ನಾಗರಿಕರು ಗಾಯಗೊಂಡಿದ್ರು. ಕುಪ್ವಾರದಲ್ಲಿ ನಡೆದ ಈ ದಾಳಿ ವೇಳೆ, ಗಡಿಯಾಚೆಗಿನಿಂದ ಪಾಕಿಸ್ತಾನ ಸೇನೆ ಭಾರೀ ಪ್ರಮಾಣದ ಶೆಲ್ ದಾಳಿ ನಡೆಸಿತು. ಅದೂ ಕೂಡಾ ಜನ ವಸತಿ ಪ್ರದೇಶಗಳ ಮೇಲೇ ಪಾಕಿಸ್ತಾನದ ಶೆಲ್‌ಗಳು ತೂರಿಬಂದವು. ಭಾರತ ಮತ್ತು ಪಾಕ್‌ ಗಡಿಯಲ್ಲಿರುವ ಮನ್ಯಾರಿ ಎಂಬ ಗ್ರಾಮದಲ್ಲಿ ಈ ದಾಳಿ ನಡೆದಿದ್ದು, ಮನ್ಯಾರಿ ಗ್ರಾಮ ಕಟುವಾ ಜಿಲ್ಲೆಯ fಯಾಪ್ತಿಗೆ ಬರುತ್ತೆ. ಶನಿವಾರ ತಡರಾತ್ರಿ ಹಾಗೂ ಭಾನುವಾರ ಮುಂಜಾನೆವರೆಗೂ ನಡೆದ ದಾಳಿಯಿಂದಾಗಿ ಮನೆಯೊಂದು ಸಂಪೂರ್ಣವಾಗಿ ಛಿದ್ರಛಿದ್ರವಾಗಿದೆ. ಅಕ್ಕಿ ಗೋದಾಮು ಕೂಡಾ ಹಾಳಾಗಿದೆ. 2 ವಾಹನಗಳು, ದನದ ಕೊಟ್ಟಿಗೆ ಹಾಗೂ 19 ಹಸುಗಳು ಜೀವಬಿಟ್ಟಿವೆ.

ಪಾಕಿಸ್ತಾನ ಸೇನೆ ನಾಗರಿಕರನ್ನೇ ಗುರಿಯಾಗಿಸಿ ದಾಳಿ ನಡೆಸುವುದರಿಂದ ಇಲ್ಲಿನ ಜನರ ರಕ್ಷಣೆ ಭಾರತೀಯ ಸೇನೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪಾಕಿಸ್ತಾನ ಸೇನೆಯ ನಿರಂತರ ದಾಳಿಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದ್ದು, ಸೇನೆ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪಾಕಿಸ್ತಾನ ಸೇನೆ ಜನ ವಸತಿ ಪ್ರದೇಶಗಳನ್ನೇ ಗುರಿಯಾಗಿಸಿ ದಾಳಿ ನಡೆಸುವ ಕಾರಣ, ಸ್ಥಳೀಯರು ಬಂಕರ್‌ಗಳಲ್ಲಿ ರಕ್ಷಣೆ ಪಡೆಯಬೇಕಾದ ಅನಿವಾರ್ಯತೆ ಎದುರಾಗ್ತಿದೆ. ಸಂಜೆ 7 ಗಂಟೆಗೆ ಆರಂಭವಾಗುವ ಗುಂಡಿನ ದಾಳಿ ಮರುದಿನ ಬೆಳಗಿನ ಜಾವದವರೆಗೂ ನಿರಂತರವಾಗಿ ನಡೆಯುತ್ತಿರುತ್ತದೆ. ನಮಗೆ ನಮ್ಮ ಮಕ್ಕಳ ಜೀವ ರಕ್ಷಣೆಯೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಸ್ಥಳೀಯರು. ಪ್ರಧಾನಿ ಮೋದಿ ಕೂಡಲೇ ಏನಾದ್ರೂ ಮಾಡಲೇಬೇಕು ಅನ್ನೋದು ಸ್ಥಳೀಯರ ಆಗ್ರಹ.

‘ಧರ್ಮಾಂದರು ದ್ವೇಷದಿಂದ ಕುರುಡಾಗಿದ್ದಾರೆ': ಕೇಂದ್ರ ಸಚಿವ ಗೋಯಲ್‌ ವಿರುದ್ಧ ರಾಹುಲ್ ವಾರ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ