ಆ್ಯಪ್ನಗರ

ಕಾಶ್ಮೀರ ಪೊಲೀಸರ ಭರ್ಜರಿ ಬೇಟೆ: ಮೂವರು ಉಗ್ರರ ಅರೆಸ್ಟ್‌, ಪಾಕ್‌ ಧ್ವಜ ಹಾರಿಸಿದ ಪುಂಡರು!

ಹಾಜಿನ್‌ ಪಟ್ಟಣದ ಮೀರ್‌ ಮೊಹಲ್ಲಾ ಪ್ರದೇಶದ ನಿವಾಸಿಗಳಾದ ಮುಜೀಬ್‌ ಶಾಮಾಸ್‌, ತನ್ವೀರ್‌ ಅಹ್ಮದ್‌ ಮೀರ್‌ ಮತ್ತು ಇಮ್ತಿಯಾಜ್‌ ಅಹ್ಮದ್‌ ಶೇಖ್‌ ಬಂಧಿತರು. ಪಟ್ಟಣದಲ್ಲಿ ಶಾಂತಿ ಕದಡಿ ಭಾರತ-ಪಾಕ್‌ ಸಂಘರ್ಷ ಸೃಷ್ಟಿಸುವುದಕ್ಕೆ ಉಗ್ರರು ಇವರಿಗೆ ಆದೇಶಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಇಂತಹ ಕುಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

Agencies 9 Sep 2020, 7:07 am
ಶ್ರೀನಗರ: ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆ ಲಷ್ಕರೆ ತಯ್ಬಾಗೆ ನೆರವು ನೀಡುತ್ತಿದ್ದ ಮೂವರನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಡಿಪೊರ ಜಿಲ್ಲೆಯಲ್ಲಿ ಸಾಕ್ಷಿ ಸಮೇತ ಬಂಧಿಸಿದ್ದಾರೆ. ಲಷ್ಕರ್‌ ಉಗ್ರರ ಸೂಚನೆ ಮೇರೆಗೆ ಈ ಮೂವರು ಕೂಡ ಹಾಜಿನ್‌ ಪಟ್ಟಣ ಪ್ರದೇಶದ ಮಾರುಕಟ್ಟೆಯಲ್ಲಿ ಭಾನುವಾರ ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.
Vijaya Karnataka Web EhYygGOU4AETRXY


ಈ ಹಿನ್ನೆಲೆ ದಾಳಿ ನಡೆಸಿದ ಪೊಲೀಸರು ಈ ಮೂವರನ್ನ ಬಂಧಿಸಿದ್ದಾರೆ. ಹಾಜಿನ್‌ ಪಟ್ಟಣದ ಮೀರ್‌ ಮೊಹಲ್ಲಾ ಪ್ರದೇಶದ ನಿವಾಸಿಗಳಾದ ಮುಜೀಬ್‌ ಶಾಮಾಸ್‌, ತನ್ವೀರ್‌ ಅಹ್ಮದ್‌ ಮೀರ್‌ ಮತ್ತು ಇಮ್ತಿಯಾಜ್‌ ಅಹ್ಮದ್‌ ಶೇಖ್‌ ಬಂಧಿತರು. ಪಟ್ಟಣದಲ್ಲಿ ಶಾಂತಿ ಕದಡಿ ಭಾರತ-ಪಾಕ್‌ ಸಂಘರ್ಷ ಸೃಷ್ಟಿಸುವುದಕ್ಕೆ ಉಗ್ರರು ಇವರಿಗೆ ಆದೇಶಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಇಂತಹ ಕುಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ ಮುಂದಿನ ದಿನಗಳಲ್ಲಿ ಭಾರೀ ಸಂಚು ರೂಪಿಸಿರುವುದು ಕೂಡ ತಿಳಿದುಬಂದಿದೆ. ಬಂಧನ ವೇಳೆ ಇವರ ಬಳಿಯಿಂದ ಹ್ಯಾಂಡ್‌ ಗ್ರೆನೇಡ್‌, ಹೊಲಿಗೆ ಯಂತ್ರ ಸಮೇತ ಪಾಕ್‌ ಧ್ವಜ ಮಾಡಲು ಬಳಿಸಿದ ಬಟ್ಟೆಗಳು ಕೂಡ ಸಿಕ್ಕಿವೆ. ಕಣಿವೆ ರಾಜ್ಯದಲ್ಲಿ ಪಾಕಿಸ್ತಾನ ಉಗ್ರ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಬಟಾ ಬಯಲಾಗಿರುವ ವಿಚಾರ. ಇಲ್ಲಿನ ಯುವಕರ ಮನಸ್ಸಲ್ಲಿ ವಿಷ ಬೀಜ ಬಿತ್ತಿ ದೇಶದ ವಿರುದ್ಧವೇ ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ. ಇದಕ್ಕೆ ಪಾಕ್‌ನ ಗುಪ್ತಚರ ಸಂಸ್ಥೆಯೇ ಸಹಾಯ ಮಾಡುತ್ತಿದೆ.

ಲಡಾಖ್ ಗಡಿಯಲ್ಲಿ ಏನಾಗುತ್ತಿದೆ?: ಚೀನಿ ಸರಣಿ ದುಸ್ಸಾಹಸ ವಿಫಲಗೊಳಿಸಿದ ಧೀರರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ