ಆ್ಯಪ್ನಗರ

ಉಗ್ರರಿಂದ ತಂದೆ, ಮಗನ ಅಪಹರಣ

ಶಂಕಿತ ಲಷ್ಕರೆ ತಯ್ಬಾ ಉಗ್ರರು ಗುರುವಾರ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ತಂದೆ ಮತ್ತು ಮಗನನ್ನು ಅಪಹರಿಸಿದ್ದು, ತಂದೆ ಉಗ್ರರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Vijaya Karnataka 6 Apr 2018, 10:07 am
ಶ್ರೀನಗರ: ಶಂಕಿತ ಲಷ್ಕರೆ ತಯ್ಬಾ ಉಗ್ರರು ಗುರುವಾರ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ತಂದೆ ಮತ್ತು ಮಗನನ್ನು ಅಪಹರಿಸಿದ್ದು, ತಂದೆ ಉಗ್ರರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ


ಇದು ಜಿಲ್ಲೆಯ ಹಾಜಿನ್‌ ವಲಯದಲ್ಲಿ 48 ಗಂಟೆಗಳ ಅವಯಲ್ಲಿ ನಡೆದ 2ನೇ ಅಪಹರಣ ಪ್ರಕರಣ. ರಾತ್ರಿ 11.45ರ ಸುಮಾರಿಗೆ ಅಬ್ದುಲ್‌ ಮತ್ತು ಅವರ ಪುತ್ರ ಮನ್ಸೂರ್‌ ಅಹ್ಮದ್‌ ಭಟ್‌ ಅವರನ್ನು ಉಗ್ರರು ಅಪಹರಿಸಿದರು. ಗುಂಡೇಟು ತಿಂದರೂ ತಪ್ಪಿಸಿಕೊಂಡು ಬರುವಲ್ಲಿ ಅಬ್ದುಲ್‌ ಯಶಸ್ವಿಯಾದರು. ತೀವ್ರವಾಗಿ ಗಾಯಗೊಂಡಿರುವ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮುಂಚೂಣಿ ಕಾವಲು ಠಾಣೆ ಮತ್ತು ನಾಗರಿಕ ವಾಸಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ಪಡೆಗಳು ನಡೆಸಿದ ಮೋರ್ಟಾರ್‌ ಬಾಂಬ್‌ ದಾಳಿಗೆ ಸಿಲುಕಿ ಸ್ಥಳೀಯ ನಿವಾಸಿ ಬೋಲೊರಾಂ ಮತ್ತು ಅವರ ಪುತ್ರಿ ಸಂಗೀತಾ ಗಾಯಗೊಂಡಿದ್ದಾರೆ. ನೌಶೆರಾ ಸೆಕ್ಟರ್‌ನಲ್ಲಿ ಬುಧವಾರ ಸಂಜೆ ಈ ದಾಳಿ ನಡೆದಿದೆ. ಬೋಲಾ ರಾಂ ಅವರ ಮನೆಯ ಕಾಂಪೌಂಡ್‌ನಲ್ಲಿ 120 ಎಂಎಂ ಮೋರ್ಟಾರ್‌ ಶೆಲ್‌ ಸ್ಫೋಟಗೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ