ಆ್ಯಪ್ನಗರ

35ಎ ವಿಧಿ ರದ್ದಾದರೆ ಕಾಶ್ಮೀರ ಪ್ರತ್ಯೇಕ: ಮೆಹಬೂಬ ಎಚ್ಚರಿಕೆ

ಕೇಂದ್ರ ಸರಕಾರ 370ನೇ ವಿಧಿ ರದ್ದುಪಡಿಸಲು ಮುಂದಾದರೆ ಭಾರತದಲ್ಲೇ ಉಳಿಯಬೇಕೇ ಅಥವಾ ಭಾರತದಿಂದ ಪ್ರತ್ಯೇಕಗೊಳ್ಳಬೇಕೆ ಎಂಬುದರ ಬಗ್ಗೆ ರಾಜ್ಯ ಯೋಚಿಸಬೇಕಾಗುತ್ತದೆ.

Vijaya Karnataka Web 30 Mar 2019, 10:26 pm
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿರುವ ಸಂವಿಧಾನದ 370ನೇ ವಿಧಿ ರದ್ದುಪಡಿಸಿದರೆ, ಭಾರತದೊಂದಿನ ಸಂಬಂಧದ ಬಗ್ಗೆ ರಾಜ್ಯದ ಜನರು ಪರ್ಯಾಯ ಯೋಚನೆ ಮಾಡಬೇಕಾಗುತ್ತದೆ ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ್‌ ಮುಫ್ತಿ ಎಚ್ಚರಿಸಿದ್ದಾರೆ.
Vijaya Karnataka Web mufti


ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ(ಪಿಡಿಪಿ) ಕಾರ್ಯಕರ್ತರನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, ''ಕೇಂದ್ರ ಸರಕಾರ 370ನೇ ವಿಧಿ ರದ್ದುಪಡಿಸಲು ಮುಂದಾದರೆ ಭಾರತದಲ್ಲೇ ಉಳಿಯಬೇಕೇ ಅಥವಾ ಭಾರತದಿಂದ ಪ್ರತ್ಯೇಕಗೊಳ್ಳಬೇಕೆ ಎಂಬುದರ ಬಗ್ಗೆ ರಾಜ್ಯ ಯೋಚಿಸಬೇಕಾಗುತ್ತದೆ. ಅಲ್ಲದೇ ಈ ಸೇತುವೆಯನ್ನು ಹಾಳುಗೆಡವಿದರೆ, ಭಾರತ ಹಾಗೂ ಜಮ್ಮು-ಕಾಶ್ಮೀರ ನಡುವಿನ ಸಂಬಂಧವನ್ನು ಮರು ಸ್ಥಾಪಿಸಬೇಕಾಗುತ್ತದೆ,'' ಎಂದು ಹೇಳಿದ್ದಾರೆ.

''ಜಮ್ಮು-ಕಾಶ್ಮೀರದಲ್ಲಿ ಹೊರ ರಾಜ್ಯದವರು ಆಸ್ತಿ ಖರೀದಿಸಲು ಅನುಮತಿ ನೀಡದಿರುವ ಸಂವಿಧಾನದ 35ಎ ವಿಧಿಯಿಂದಾಗಿ ಕಣಿವೆ ರಾಜ್ಯ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ರಾಜ್ಯವನ್ನು ಪ್ರತ್ಯೇಕಿಸುವ ಇದು 'ಸಂವಿಧಾತ್ಮಕ ದೌರ್ಬಲ್ಯ'. ಇದು ರಾಜ್ಯದ ಹಿನ್ನೆಡೆಯ ಜತೆಗೆ ಅನೇಕ ರೀತಿಯ ತಾರತಮ್ಯಗಳಿಗೆ ಆಸ್ಪದ ಮಾಡಿಕೊಟ್ಟಿದೆ,'' ಎಂದು ಇತ್ತೀಚಿಗೆ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅಭಿಪ್ರಾಯಪಟ್ಟಿದ್ದರು.

ಜೇಟ್ಲಿ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯೆಯಾಗಿ ಮುಫ್ತಿ ಈ ಹೇಳಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ