ಆ್ಯಪ್ನಗರ

ತೆರವು ಕಾರ್ಯಾಚರಣೆ ವೇಳೆ ಚರಂಡಿಗೆ ಬಿದ್ದ ಬಿಜೆಪಿ ಸಂಸದೆ ಪೂನಮ್‌ಬೇನ್

ಜಲರಾಂ ಪ್ರದೇಶದ ಕೊಳೆಗೇರಿಯೊಂದರ ತೆರವು ಕಾರ್ಯಾಚರಣೆ ವೇಳೆ, ನಿವಾಸಿಗಳೊಂದಿಗೆ ಮಾತನಾಡಲು ತೆರಳಿದ್ದ ಇಲ್ಲಿನ ಬಿಜೆಪಿ ಸಂಸದೆ ಪೂನಂಬೇನ್, ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ.

ಏಜೆನ್ಸೀಸ್ 16 May 2016, 5:04 pm
ಜಾಮ್‌‌ನಗರ: ಜಲರಾಂ ಪ್ರದೇಶದ ಕೊಳೆಗೇರಿಯೊಂದರ ತೆರವು ಕಾರ್ಯಾಚರಣೆ ವೇಳೆ, ನಿವಾಸಿಗಳೊಂದಿಗೆ ಮಾತನಾಡಲು ತೆರಳಿದ್ದ ಇಲ್ಲಿನ ಬಿಜೆಪಿ ಸಂಸದೆ ಪೂನಂಬೇನ್, ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ.
Vijaya Karnataka Web jamnagar mp poonamben maadam falls into drain during demolition drive
ತೆರವು ಕಾರ್ಯಾಚರಣೆ ವೇಳೆ ಚರಂಡಿಗೆ ಬಿದ್ದ ಬಿಜೆಪಿ ಸಂಸದೆ ಪೂನಮ್‌ಬೇನ್


ಪೂನಂ ನಿಂತಿದ್ದ ತೆಳುವಾದ ಕಾಂಕ್ರೀಟ್ ಸ್ಲ್ಯಾಬ್ ಮುರಿದ ಪರಿಣಾಮ ಈ ಅವಘಡ ಸಂಭವಿಸಿದ್ದು, ಸುಮಾರು ಎಂಟು ಆಳವಿರುವ ಕೊಳಕು ನೀರಿದ್ದ ಚರಂಡಿಗೆ ಬಿದ್ದರು. ಅವರ ತಲೆಗೆ ನಾಲ್ಕು ಇಂಚು ಆಳದ ಗಾಯವಾಗಿದ್ದು, ಭುಜ ಮತ್ತು ಪಾದಗಳಿಗೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆ ತೆರವು ಕಾರ್ಯಾಚರಣೆಗೆ ಆಕ್ಷೇಪ ವ್ಯಕ್ತಪಡಿಸಿದ ಜಲರಾಂ ಕೊಳೆಗೇರಿಯ ಜನರು ಪಾಲಿಕೆ ಅಧಿಕಾರಿಗಳೊಂದಿಗೆ ಜಗಳಕ್ಕಿಳಿದಿದ್ದರು. ವಿಷಯ ತಿಳಿದ ಪೂನಂ ಸ್ಥಳಕ್ಕೆ ಧಾವಿಸಿದ್ದರು. ಜನರ ಜತೆ ಮಾತನಾಡಲು ಬಂದ ಇವರು ನಿಲ್ಲಲು ಚರಂಡಿ ಮೇಲೆ ಹಾಕಿದ ಕಾಂಕ್ರೀಟ್‌ ಸ್ಪ್ಯಾಬ್‌ ಮುರಿದುಬಿದ್ದು ಈ ಅವಘಡ ಸಂಭವಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ