ಆ್ಯಪ್ನಗರ

ಮರಳ ಕಾವಿನಲ್ಲಿ ಯೋಧರ ಅಡುಗೆ

ಭಾರತ- ಪಾಕಿಸ್ತಾನ ಗಡಿಯ ಜೈಸಲ್ಮೇರ್‌ನಲ್ಲಿ ದೇಶ ಕಾಯುತ್ತಿರುವ ಗಡಿ ಭದ್ರತಾಪಡೆಯ ಯೋಧರು ಕಾದ ಮರಳನ್ನೇ ಉರುವಲನ್ನಾಗಿಸಿ ಅಡುಗೆ ಮಾಡುತ್ತಿದ್ದಾರೆ.

ಏಜೆನ್ಸೀಸ್ 21 May 2016, 2:36 pm
ಜೈಸಲ್ಮೇರ್: ಭಾರತ- ಪಾಕಿಸ್ತಾನ ಗಡಿಯ ಜೈಸಲ್ಮೇರ್‌ನಲ್ಲಿ ದೇಶ ಕಾಯುತ್ತಿರುವ ಗಡಿ ಭದ್ರತಾಪಡೆಯ ಯೋಧರು ಕಾದ ಮರಳನ್ನೇ ಉರುವಲನ್ನಾಗಿಸಿ ಅಡುಗೆ ಮಾಡುತ್ತಿದ್ದಾರೆ.
Vijaya Karnataka Web jawans roast papad cook rice on hot sand
ಮರಳ ಕಾವಿನಲ್ಲಿ ಯೋಧರ ಅಡುಗೆ


ಇದೇ ಮರಳಲ್ಲಿ ಹಪ್ಪಳ ಸುಡುತ್ತಾರೆ. ತೆರೆದ ಪಾತ್ರೆಯಲ್ಲಿ ನೀರಿನೊಂದಿಗೆ ಅಕ್ಕಿಯನ್ನು ಹಾಕಿ ಮರಳಲ್ಲಿ ಇಟ್ಟರೆ ಮೂರು ಗಂಟೆಗಳಲ್ಲಿ ಬೆಂದು ಹೋಗುತ್ತದೆ.

ಯೋಧರಲ್ಲಿರುವ ಸಾಧನದ ಪ್ರಕಾರ ಇಲ್ಲಿನ ಉಷ್ಣಾಂಶ ಈಗ 55 ಡಿಗ್ರಿ ಸೆಲ್ಷಿಯಸ್ ಇದೆ.

ಈ ಪ್ರದೇಶದ ಮುರೌರ್‌ ಠಾಣೆ ವ್ಯಾಪ್ತಿಯಲ್ಲಿ ನೆಲಕ್ಕೆ ಕಾಲಿಡಲಾರದಷ್ಟು ಸಹಿಸಲಾಗದ ಧಗೆ ಇದೆ. ಮರಳಿನಲ್ಲಿ ನಡೆದಾಗ ಬಿಸಿಯ ತೀವ್ರತೆಗೆ ಯೋಧರ ಬೂಟ್‌ಗಳ ಸೋಲ್‌ ಕರಗುತ್ತಿವೆ ಎಂದು ಸ್ಥಳಕ್ಕೆ ಭೇಟಿ ನೀಡಿರುವ ವರದಿಗಾರರು ಹೇಳುತ್ತಾರೆ.

ಯೋಧರು ಕ್ಯಾಪ್, ಕನ್ನಡಕಗಳನ್ನು ಧರಿಸಿ ಬಿಸಿಲಿನಿಂದ ರಕ್ಷಣೆ ಪಡೆಯುವ ಪ್ರಯತ್ನ ಮಾಡುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ