ಆ್ಯಪ್ನಗರ

ಕಂದಕಕ್ಕೆ ಬೀಳಲಿದ್ದ 80 ಜನರಿದ್ದ ಬಸ್‌ ಅನ್ನು ರಕ್ಷಿಸಿದ ಜೆಸಿಬಿ ಚಾಲಕ

ಕುಡುಕ ಚಾಲಕನ ಅವಾಂತರದಿಂದ ಕೇರಳದಲ್ಲಿ ಕಂದಕಕ್ಕೆ ಬೀಳುತ್ತಿದ್ದ 80 ಜನ ಪ್ರಯಾಣಿಕರಿಂದ ತುಂಬಿದ್ದ ಬಸ್‌ ಅನ್ನು ಜೆಸಿಬಿ ಚಾಲಕನೋರ್ವ ಸಮಯಪ್ರಜ್ಞೆ ಬಳಸಿ ರಕ್ಷಿಸಿದ್ದಾನೆ.

Samayam Malayalam 21 Sep 2018, 5:57 pm
ಕೊಚ್ಚಿ: ಕುಡುಕ ಚಾಲಕನ ಅವಾಂತರದಿಂದ ಕೇರಳದಲ್ಲಿ ಕಂದಕಕ್ಕೆ ಬೀಳುತ್ತಿದ್ದ 80 ಜನ ಪ್ರಯಾಣಿಕರಿಂದ ತುಂಬಿದ್ದ ಬಸ್‌ ಅನ್ನು ಜೆಸಿಬಿ ಚಾಲಕನೋರ್ವ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾನೆ.
Vijaya Karnataka Web kerala bus jcb


ಕೇರಳದ ರಾಜಕ್ಕಾಡ್ ಸಮೀಪ ಬೋದಿನಾಯಕಣ್ಣೂರು ಮತ್ತು ರಾಜಕ್ಕಾಡ್‌ ನಡುವಣ ರಸ್ತೆಯ ಎರಚ್ಚಿಪರ ಎಂಬಲ್ಲಿ ತಮಿಳುನಾಡು ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ಒಂದು ರಸ್ತೆ ಬದಿಯಿಂದ ವಾಲಿ ಕಂದಕಕ್ಕೆ ಉರುಳುತ್ತಿತ್ತು. ಅದೇ ಸಂದರ್ಭದಲ್ಲಿ ಜೆಸಿಬಿ ಚಾಲಕನೋರ್ವ ಅದನ್ನು ಗಮನಿಸಿದ್ದು, ಕೂಡಲೇ ಜೆಸಿಬಿಯ ಕೈ ಬಳಸಿ ಬಸ್‌ ಅನ್ನು ಹಿಡಿದುಕೊಂಡಿದ್ದಾನೆ. ಇದರಿಂದ ಬಸ್‌ ಕಂದಕಕ್ಕೆ ಉರುಳುವುದು ತಪ್ಪಿದೆ.

ಸುಮಾರು 1 ಗಂಟೆಯವರೆಗೆ ಜೆಸಿಬಿ ಚಾಲಕ ಬಸ್‌ ಅನ್ನು ಜೆಸಿಬಿ ಬಳಸಿ ಹಿಡಿದಿಟ್ಟಿದ್ದು, ಬಸ್‌ನೊಳಗಿಂದ 80 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಹೊರಬಂದಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸಮಯಪ್ರಜ್ಞೆ ಮತ್ತು ಸಾಹಸ ತೋರಿದ ಜೆಸಿಬಿ ಚಾಲಕನನ್ನು ಪ್ರಶಂಶಿಸಿದ್ದಾರೆ.

ನಂತರ ತನಿಖೆ ನಡೆಸಿದ ಸಂತಾನಪರ ಪೊಲೀಸರು, ಬಸ್ ಚಾಲಕ ಕಾರ್ತಿಕೇಯನ್ ಮದ್ಯಪಾನ ಮಾಡಿ ಬಸ್‌ ಚಲಾಯಿಸಿದ್ದೇ ಬಸ್ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಲು ಕಾರಣ ಎಂದಿದ್ದಾರೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೂಲ ವರದಿ: ಸಮಯಂ ಮಲಯಾಳಂ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ