ರಾಂಚಿ: ಮುಂಬರುವ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಸಂಯುಕ್ತ ಜನತಾದಳ (ಜೆಡಿಯು) 'ಬಾಣ'ದ ಚಿಹ್ನೆ ಬಳಸುವುದನ್ನು ಚುನಾವಣಾ ಆಯೋಗ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ 'ಟ್ರ್ಯಾಕ್ಟರ್ ಚಲಾಯಿಸುತ್ತಿರುವ ರೈತ'ನ ಚಿಹ್ನೆ ಕೇಳಲು ಪಕ್ಷ ತೀರ್ಮಾನಿಸಿದೆ. ಜಾರ್ಖಂಡ್ ಮುಕ್ತಿ ಮೋರ್ಚಾವು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ, ಸಂಯುಕ್ತ ಜನತಾದಳ ಚಿಹ್ನೆಯು ತನ್ನ ಪಕ್ಷದ 'ಬಿಲ್ಲು ಮತ್ತು ಬಾಣ'ದ ಚಿಹ್ನೆಯನ್ನು ಹೋಲುತ್ತದೆ, ಹೀಗಾಗಿ ಆ ಪಕ್ಷವು 'ಬಾಣ'ದ ಗುರುತು ಬಳಸುವುದನ್ನು ನಿಷೇಧಿಸಬೇಕು ಎಂದು ಕೋರಿತ್ತು. ಮನವಿಯನ್ನು ಮಾನ್ಯ ಮಾಡಿದ ಆಯೋಗವು 'ಬಾಣ'ದ ಚಿಹ್ನೆ ಬಳಸದಂತೆ ನಿತೀಶ್ಕುಮಾರ್ ನೇತೃತ್ವದ ಪಕ್ಷಕ್ಕೆ ನಿರ್ದೇಶನ ನೀಡಿತ್ತು. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ.
ಜಾರ್ಖಂಡ್ನಲ್ಲಿ ಜೆಡಿಯುಗೆ ಟ್ರ್ಯಾಕ್ಟರ್ ಚಲಾಯಿಸುತ್ತಿರುವ ರೈತನ ಚಿಹ್ನೆ?
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ.
PTI 7 Sep 2019, 5:00 am