ಆ್ಯಪ್ನಗರ

ಜಾರ್ಖಂಡ್‌ ಸಿಎಂ ವಿರುದ್ಧ ಬಂಡಾಯ ನಾಯಕನ ಸೆಡ್ಡು, ರಘುಬರದಾಸ್‌ ಗೆ ಕಳವಳ

ಮತ್ತೊಮ್ಮೆ ಜಾರ್ಖಂಡ್ ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿರುವ ರಘುಬರ ದಾಸ್‌ ಗೆ ಬಿಜೆಪಿ ಬಂಡಾಯ ನಾಯಕ ಸರಾಯು ರಾಯ್‌ ಶಾಕ್ ಕೊಟ್ಟಿದ್ದಾರೆ. ಜೆಮ್‌ಷೆಡ್‌ಪುರ ಪೂರ್ವ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ದಾಸ್‌ ವಿರುದ್ಧ ರಾಯ್‌ ಕಣಕ್ಕಿಳಿದಿದ್ದಾರೆ.

Vijaya Karnataka Web 19 Nov 2019, 10:10 am
ರಾಂಚಿ: ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗುವ ಕನಸು ಹೊತ್ತಿರುವ ರಘುಬರ ದಾಸ್‌ ಕಾರ್ಯಕರ್ತರ ಬೃಹತ್‌ರ‍್ಯಾಲಿಯ ಮೂಲಕ ಜಿಲ್ಲಾಡಳಿತ ಕಚೇರಿಗೆ ತೆರಳಿ ಸೋಮವಾರ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದರು. ಜೆಮ್‌ಷೆಡ್‌ಪುರ ಪೂರ್ವ ಕ್ಷೇತ್ರವು ಅವರ ಭದ್ರಕೋಟೆ ಎಂದೇ ಹೇಳಲಾಗುತ್ತಿದೆ. ದಾಸ್‌ ವಿರುದ್ಧ ಸಿಡಿದು ನಿಂತಿರುವ ಬಿಜೆಪಿ ಬಂಡಾಯ ನಾಯಕ ಸರಾಯು ರಾಯ್‌ ಸಹ ಸಿಎಂ ಪ್ರತಿಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸಿದರು.
Vijaya Karnataka Web Jharkhand Chief Minister Raghubar Das


ಜಾರ್ಖಂಡ್‌ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದಿದ್ದ ಖೋಡಾ ಕನಸಿಗೆ ಸುಪ್ರೀಂ ಕೋರ್ಟ್ ತಡೆ

1995ರಲ್ಲಿಅವಿಭಜಿತ ಬಿಹಾರದ ಭಾಗವಾಗಿದ್ದ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ರಘುಬರದಾಸ್‌ ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರದ ಸತತ ಐದು ಚುನಾವಣೆಗಳಲ್ಲಿಅವರು ಗೆಲುವು ಪಡೆದಿದ್ದಾರೆ. ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಅಧಿಕಾರ ನಡೆಸಿದ ಬುಡಕಟ್ಟೇತರ ಸಮುದಾಯದ ಪ್ರಥಮ ನಾಯಕ ಎನ್ನುವ ಖ್ಯಾತಿಯೂ ಅವರಿಗಿದೆ.

ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಪ್ರಿಯಾಂಕಾ ಹೆಸರೇ ಕಣ್ಮರೆ!

ಈಗ ತಮ್ಮದೇ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಸರಾಯು ರಾಯ್‌ ತಿರುಗಿ ಬಿದ್ದಿರುವುದು ಅವರಿಗೆ ಕಳವಳ ಉಂಟು­ಮಾಡಿದೆ. ಟಿಕೆಟ್‌ ಕೈತಪ್ಪಿದ್ದರಿಂದ ಬಂಡೆದ್ದ ರಾಯ್‌, ಮುಖ್ಯಮಂತ್ರಿ ವಿರುದ್ಧವೇ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ ಈ ಕ್ಷೇತ್ರದಿಂದ ತನ್ನ ವಕ್ತಾರ ಪ್ರೊ.ಗೌರವ್‌ ವಲ್ಲಭ ಅವರನ್ನು ಕಣಕ್ಕಿಳಿಸಿದೆ.

ಜಾರ್ಖಂಡ್‌ ವಿಧಾನಸಭೆ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ

ನಿರಂತರವಾಗಿ ಪಕ್ಷ ವಿರೋಧಿ ಧೋರಣೆಯನ್ನು ಅನುಸರಿಸುತ್ತಾ ಬಂದಿರುವುದರಿಂದ ಸರಾಯು ರಾಯ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ ಎಂದು ಹೇಳಲಾಗುತ್ತಿದೆ. ಶನಿವಾರ ಅವರು ವಿರೋಧ ಪಕ್ಷದ ಮುಖಂಡ ಜಾರ್ಖಂಡ್ ಮುಕ್ತಿ ಮೋರ್ಚಾದ ಮುಖ್ಯಮಂತ್ರಿ ಅಭ್ಯರ್ಥಿ ಹೇಮಂತ್ ಸುರೇನ್ ಅವರಿಗೆ ಶುಭಾಶಯ ಸಲ್ಲಿಸಿದ್ದರು. ಈ ಮೂಲಕ ರಾಯ್ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದರು.

ಐದು ಹಂತಗಳಲ್ಲಿ ಜಾರ್ಖಂಡ್‌ ವಿಧಾನಸಭೆಗೆ ಚುನಾವಣೆ, ಡಿ. 23ಕ್ಕೆ ಫಲಿತಾಂಶ

ಭಷ್ಟಾಚಾರದ ವಿರುದ್ಧ ಸಮರ ಸಾರುತ್ತಾ ಬಂದಿರುವ ರಾಯ್, ಬಿಹಾರದಲ್ಲಿ ಮೇವು ಹಗರಣದ ಸಂಬಂಧ ಆರ್ ಜೆಡಿ ಮುಖಂಡ ಲಾಲ್ ಪ್ರಸಾದ್ ಯಾದವ್ ಮತ್ತು ಜಾರ್ಕಂಡ್ ನ ಮಾಜಿ ಮುಖ್ಯಮಂತ್ರಿ ಮಧುಕೋಟಾ ಅವರನ್ನು ಕಲ್ಲಿದ್ದಲು ಹಗರಣದಲ್ಲಿ ಜೈಲಿಗಟ್ಟಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ