ಆ್ಯಪ್ನಗರ

ಭಾರತದೊಳಗೆ ನುಸುಳುತ್ತಿದ್ದಾರೆ ಜಿಹಾದಿಗಳು !

ಭಾರತದೊಳಗೆ ಜಿಹಾದಿಗಳ ನುಸುಳುವಿಕೆ ಹೆಚ್ಚಾಗಿದೆ ಎಂದು ಬಾಂಗ್ಲಾದೇಶ ಎಚ್ಚರಿಕೆ ನೀಡಿದೆ.

ವಿಕ ಸುದ್ದಿಲೋಕ 21 Mar 2017, 10:56 am
ಕೋಲ್ಕತ್ತಾ: ಭಾರತದೊಳಗೆ ಜಿಹಾದಿಗಳ ನುಸುಳುವಿಕೆ ಹೆಚ್ಚಾಗಿದೆ ಎಂದು ಬಾಂಗ್ಲಾದೇಶದ ಗುಪ್ತಚರ ಇಲಾಖೆ ನಮ್ಮ ಕೇಂದ್ರ ಗೃಹ ಇಲಾಖೆಗೆ ಎಚ್ಚರಿಕೆ ನೀಡಿದೆ.
Vijaya Karnataka Web jihadis entering india warns bangladesh
ಭಾರತದೊಳಗೆ ನುಸುಳುತ್ತಿದ್ದಾರೆ ಜಿಹಾದಿಗಳು !


ಭಾರತಕ್ಕೆ ನುಸುಳುತ್ತಿರುವ ಜಿಹಾದಿಗಳ ಸಂಖ್ಯೆ 2015ಕ್ಕಿಂತ 2016ರಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಿದೆ.

ನೆರೆ ದೇಶದ ಹರ್ಕತ್ ಉಲ್ ಜಿಹಾದಿ ಅಲ್ ಇಸ್ಲಾಮಿ ಮತ್ತು ಜಮಾತ್ ಉಲ್ ಮುಜಾಹ್ದೀನ್ ಬಾಂಗ್ಲಾ ಗುಂಪಿಗೆ ಸೇರಿದ ಉಗ್ರರು ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದ ಕಡೆಗೆ ನುಸುಳುತ್ತಿದ್ದಾರೆ. ಹೀಗೆ ನುಸುಳಿರುವ ಉಗ್ರರಿಗೆ ಅಂತಾರಾಷ್ಟ್ರೀಯ ಉಗ್ರರ ಜೊತೆ ನಂಟಿದೆ ಎಂದು ವರದಿಯಲ್ಲಿ ತಿಳಿಸಿದೆ. ನದಿ ಮುಖಾಂತರ ಈ ಉಗ್ರರು ಭಾರತ ಪ್ರವೇಶಿಸುತ್ತಿದ್ದಾರೆ.

'ಉಗ್ರರ ಚಟುವಟಿಕೆಗಳು ಕಳೆದ ಆರು ತಿಂಗಳಿನಿಂದ ಹೆಚ್ಚಾಗಿದೆ. ಈಗಾಗಲೇ 54 ಜಮಾತ್ ಉಲ್ ಮುಜಾಹ್ದೀನ್ ಬಾಂಗ್ಲಾ ಉಗ್ರರನ್ನು ಬಂಧಿಸಲಾಗಿದೆ' ಎಂದು ಅಸ್ಸಾಂನ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪಲ್ಲಾಬ್ ಭಟ್ಟಾಚಾರ್ಯ ಹೇಳಿದ್ದಾರೆ.

'ಉಗ್ರರ ಚಟುವಟಿಕೆ ಹಾಗೂ ನುಸುಳುವಿಕೆಯನ್ನು ತಡೆಯಲು ಹಿರಿಯ ಪೊಲೀಸರ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದ್ದು, ಇವರು ಪ್ರತಿನಿತ್ಯ ಗಡಿಗಳಿಗೆ ಭೇಟಿ ನೀಡಿ ಭದ್ರತಾ ಪಡೆಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ' ಎಂದು ತಿಳಿಸಿದರು.

' ಮೊದಲು ಮಾಲ್ಡಾ, ನಾದಿಯಾ ಈ ಜಿಲ್ಲೆಗಳ ಮೂಲಕ ನುಸುಳುತ್ತಿದ್ದರು, ಆದರೆ ಈಗ ಅಸ್ಸಾಂ, ತ್ರಿಪುರಾ ಮೂಲಕ ಪಶ್ಚಿಮ ಬಂಗಾಳಕ್ಕೆ ಬರುತ್ತಿದ್ದಾರೆ. ನದಿ ಗಡಿಯನ್ನು ದಾಟಿ ಬರುತ್ತಿರುವುದರಿಂದ ಭದ್ರತಾ ಪಡೆಗಳಿಗೂ ಇವರ ನುಸುಳುವಿಕೆ ತಿಳಿಯುವುದು ಕಷ್ಟವಾಗಿದೆ' ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ