ಆ್ಯಪ್ನಗರ

ಎಲ್‌ಓಸಿಯಲ್ಲಿ ಪಾಕ್‌ ಗುಂಡಿನ ದಾಳಿ: ಮೇಜರ್‌ ಸಹಿತ ಮೂವರು ಯೋಧರು ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಕೇರಿಯಲ್ಲಿ ಗಡಿಯಾಚೆಯಿಂದ ಪಾಕಿಸ್ತಾನಿ ಸೇನೆ ಶನಿವಾರ ಅಪರಾಹ್ನ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತದ ಒಬ್ಬ ಮೇಜರ್‌ ಮತ್ತು ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

Vijaya Karnataka Web 23 Dec 2017, 7:16 pm
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಕೇರಿಯಲ್ಲಿ ಗಡಿಯಾಚೆಯಿಂದ ಪಾಕಿಸ್ತಾನಿ ಸೇನೆ ಶನಿವಾರ ಅಪರಾಹ್ನ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತದ ಒಬ್ಬ ಮೇಜರ್‌ ಮತ್ತು ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ನಿಯಂತ್ರಣ ರೇಖೆಯ ಹಲವೆಡೆ ಎರಡೂ ದೇಶಗಳು ಪರಸ್ಪರ ಗುಂಡಿನ ದಾಳಿ ನಡೆಸಿವೆ.
Vijaya Karnataka Web jk army major 2 soldiers martyred in firing by pakistan along loc
ಎಲ್‌ಓಸಿಯಲ್ಲಿ ಪಾಕ್‌ ಗುಂಡಿನ ದಾಳಿ: ಮೇಜರ್‌ ಸಹಿತ ಮೂವರು ಯೋಧರು ಹುತಾತ್ಮ


'120 ಇನ್‌ಫೆಂಟ್ರಿ ಬ್ರಿಗೇಡ್‌ನ ಕಣ್ಗಾವಲಿನಲ್ಲಿರುವ ಕೇರಿ ಸೆಕ್ಟರ್‌ನಲ್ಲಿ 2ನೇ ಸಿಖ್‌ ಬೆಟಾಲಿಯನ್‌ ಯೋಧರನ್ನು ನಿಯೋಜಿಸಲಾಗಿತ್ತು. ಮಧ್ಯಾಹ್ನ 12:15ರ ಸುಮಾರಿಗೆ ಪಾಕ್‌ ಕಡೆಯಿಂದ ಗುಂಡಿನ ದಾಳಿ ಆರಂಭವಾಯಿತು. ಮೇಜರ್‌ ಮತ್ತು ಇಬ್ಬರು ಯೋಧರು ಶೆಲ್‌ ದಾಳಿಗೆ ಬಲಿಯಾದರು. ಇನ್ನೊಬ್ಬ ಯೋಧ ಗಾಯಗೊಂಡಿದ್ದಾನೆ. ನಮ್ಮ ಯೋಧರು ಕೂಡ ಪ್ರಬಲ ತಿರುಗೇಟು ನೀಡಿದ್ದಾರೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಈ ವರ್ಷ 778 ಕಿ.ಮೀ ಉದ್ದದ ಎಲ್‌ಓಸಿಯಲ್ಲಿ 780ಕ್ಕೂ ಹೆಚ್ಚು ಕದನ ವಿರಾಮ ಉಲ್ಲಂಘನೆಗಳು ನಡೆದಿವೆ. 198 ಕಿ.ಮೀ ಉದ್ದದ ಅಂತಾರಾಷ್ಟ್ರೀಯ ಗಡಿಯಲ್ಲಿ 120ಕ್ಕೂ ಹೆಚ್ಚು ಗುಂಡಿನ ದಾಳಿಗಳು ನಡೆದಿವೆ.

ಕಳೆದ ತಿಂಗಳು ಪಾಕಿಸ್ತಾನಿ ಮೇಜರ್‌ ಜನರಲ್‌ ಸಾಹಿರ್‌ ಶಂಶಾದ್‌ ಮಿರ್ಜಾ ಜತೆ ನಡೆಸಿದ ಹಾಟ್‌ಲೈನ್‌ ಸಂಭಾಷಣೆಯಲ್ಲಿ ಭಾರತೀಯ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್‌ ಎ.ಕೆ ಭಟ್‌, ಗಡಿಯಲ್ಲಿರು ಪಾಕ್‌ ಸೈನಿಕರು ಮತ್ತು ರಾವಲ್ಪಿಂಡಿಯ ಸೇನಾ ಪ್ರಧಾನ ಕಚೇರಿಯ ನಡುವೆ ಸಂಪರ್ಕ ತಪ್ಪಿದೆ ಎಂದು ಹೇಳಿದ್ದರು.

ಎರಡೂ ಕಡೆಯ ಸೇನಾ ಪ್ರಮುಖರು ಶಾಂತಿ ಪಾಲನೆಗೆ ಮುಂದಾಗಿದ್ದರೆ, ಗಡಿಯಲ್ಲಿರುವ ಪಾಕ್‌ ಸೈನಿಕರು ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತ ಅಡ್ಡಿಪಡಿಸುತ್ತಿದ್ದಾರೆ ಎಂದು ಅವರು ದೂರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ