ಆ್ಯಪ್ನಗರ

ಪರೀಕ್ಷೇಲಿ ಫೇಲ್‌: ಉಗ್ರ ಸಂಘಟನೆ ಸೇರಲು ಯತ್ನಿಸಿದ ಬಾಲಕರು

ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ಭಯಗೊಂಡ ಬಾಲಕರಿಬ್ಬರು ಉಗ್ರ ಸಂಘಟನೆಯನ್ನು ಸೇರಲು ಮುಂದಾಗಿ, ಪೊಲೀಸರ ಅತಿಥಿಯಾದ ಘಟನೆ ವರದಿಯಾಗಿದೆ.

ಟೈಮ್ಸ್ ಆಫ್ ಇಂಡಿಯಾ 4 Aug 2017, 9:13 pm
ಶ್ರೀನಗರ: ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ಭಯಗೊಂಡ ಬಾಲಕರಿಬ್ಬರು ಉಗ್ರ ಸಂಘಟನೆಯನ್ನು ಸೇರಲು ಮುಂದಾಗಿ, ಪೊಲೀಸರ ಅತಿಥಿಯಾದ ಘಟನೆ ವರದಿಯಾಗಿದೆ.
Vijaya Karnataka Web jk police rescue two teenage boys who wanted to join militancy fearing failure in exams
ಪರೀಕ್ಷೇಲಿ ಫೇಲ್‌: ಉಗ್ರ ಸಂಘಟನೆ ಸೇರಲು ಯತ್ನಿಸಿದ ಬಾಲಕರು


ದಕ್ಷಿಣ ಕಾಶ್ಮೀರದ ಟ್ರಾಲ್‌ ಪ್ರದೇಶದ ನಿವಾಸಿಗಳಾಗಿರುವ ಬಶರತ್‌ ಅಹ್ಮದ್‌ ದರ್‌ ಹಾಗೂ ಅನಯತ್‌ ಖ್ವಯೂಮ್‌ ಭಟ್‌ ಇಬ್ಬರು ಬಾಲಕರು ಪರೀಕ್ಷೆಯಲ್ಲಿ ಫೇಲ್‌ ಆದ ಹಿನ್ನೆಲೆಯಲ್ಲಿ ಉಗ್ರ ಸಂಘಟನೆಯನ್ನು ಸೇರಲು ಮುಂದಾಗಿ ಬುಧವಾರದಂದು ಮನೆಬಿಟ್ಟಿದ್ದಾರೆ.

ಮಕ್ಕಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಇಬ್ಬರು ಬಾಲಕರ ಕುಟುಂಬಸ್ಥರೂ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಬಾಲಕರಿಬ್ಬರು ಟ್ರಾಲ್‌ ಪ್ರದೇಶದ ಬಳಿ ಸಿಕ್ಕಿ ಬಿದ್ದಿದ್ದು, ಪೋರರಿಬ್ಬರು ಉಗ್ರ ಸಂಘಟನೆಗೆ ಸೇರಲು ಅಲ್ಲಿನ ಮುಖ್ಯಸ್ಥರನ್ನು ಭೇಟಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಆದರೆ ಇವರನ್ನು ಕಂಡು ಸಂಶಯಗೊಂಡ ಪೊಲೀಸರು ಇಬ್ಬರನ್ನೂ ಪ್ರಶ್ನಿಸಿದ್ದಾರೆ, ಈ ವೇಳೆ ಬಾಲಕರು ಸತ್ಯ ಹೇಳಿದ್ದಾರೆ. ಕೂಡಲೇ ಇವರಿಬ್ಬರಿಗೂ ಕೌನ್ಸಿಲಿಂಗ್‌ ನೀಡಿದ ಅಧಿಕಾರಿ ಮಕ್ಕಳನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ