ಆ್ಯಪ್ನಗರ

ಜಮ್ಮು ಕಾಶ್ಮೀರ: ನೆರೆ ರಾಷ್ಟ್ರಗಳ ಮೇಲೆ ಏನೂ ಪರಿಣಾಮವಾಗಲ್ಲವಂತೆ!

ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳಾಡಿ ವಿಂಗಡಿಸಿರುವುದು ಸಂಪೂರ್ಣವಾಗಿ ದೇಶದ ಆಂತರಿಕ ವಿಚಾರವಷ್ಟೇ. ಇದರಿಂದ ನೆರೆ ರಾಷ್ಟ್ರಗಳ ಮೇಲೆ ಅಥವಾ ವಿದೇಶಿ ನೀತಿಗಳ ಮೇಲೆ ಪರಿಣಾಮ ಬೀರದು ಎಂದು ಯುಎಸ್‌ನ ಭಾರತ ರಾಯಭಾರಿ ಸ್ಪಷ್ಟಪಡಿಸಿದ್ದಾರೆ.

THE ECONOMIC TIMES 7 Aug 2019, 6:07 pm
ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆಯ ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರವಾಗಿದ್ದು, ಇದರಿಂದ ನೆರೆ ರಾಷ್ಟ್ರ ಅಥವಾ ಬೇರೆ ರಾಷ್ಟ್ರಕ್ಕೆ ಯಾವುದೇ ಸಂಬಂಧಗಳಿಲ್ಲ ಎಂದು ಭಾರತ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
Vijaya Karnataka Web US


ಮಂಗಳವಾರ ಲೋಕಸಭೆಯಲ್ಲಿ ಗೃಹಸಚಿವ ಅಮಿತ್‌ ಶಾ, ಈ ಸಂಬಂಧ ವಿಧೇಯಕ ಮಂಡಿಸಿ, ಸಭೆಯ ಅಂಗೀಕಾರ ಪಡೆದಿದ್ದರು. ಅಂತೆಯೇ ಆರ್ಟಿಕಲ್‌ 370 ಹಿಂಪಡೆದಿರುವುದೂ ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರವಾಗಿದ್ದು ಇದರಿಂದ ನೆರೆ ರಾಷ್ಟ್ರಗಳಿಗಾಗಲಿ, ಅಥವಾ ಯುಎಸ್‌ನಂತಹ ಇತರೆ ರಾಷ್ಟ್ರಗಳಿಗಾಗಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಯುಎಸ್‌ನ ಭಾರತ ರಾಯಭಾರಿ ಹರ್ಷವರ್ಧನ್‌ ಶೃಂಗ್ಲಾಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಆರ್ಥಿಕ ಅಭಿವೃದ್ಧಿ ಹಾಗೂ ಜಮ್ಮು ಮತ್ತು ಕಾಶ್ಮೀರ ಭಾಗದ ಅಭಿವೃದ್ಧಿಗಾಗಿ ಭಾರತ ಈ ನಿಲುವು ತೆಗೆದುಕೊಂಡಿದೆ. ಲಡಾಖ್‌ ಹಾಗೂ ಜಮ್ಮು-ಕಾಶ್ಮೀರ ಎಂಬ ಎರಡು ಭಾಗವನ್ನಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಿರುವುದು ಮುಂದಿನ ದಿನದಲ್ಲಿ ಅತ್ಯುತ್ತಮ ಆಡಳಿತ ನೀಡಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಪುನರ್‌ ರಚನೆ ಮಾಡುವ ಪ್ರಕ್ರಿಯೆ ಹೊಸತೇನಲ್ಲ. ಜಮ್ಮು ಕಾಶ್ಮೀರಈ ಪ್ರಕ್ರಿಯೆಗೆ ಒಳಪಟ್ಟ 12ನೇ ರಾಜ್ಯವಾಗಿದೆ. ಈ ಪ್ರಕ್ರಿಯೆಯಿಂದ ನೆರೆ ರಾಷ್ಟ್ರಗಳ ನಡುವಿನ ಯಾವುದೇ ಸಂಬಂಧಗಳಿಗೆ ಚ್ಯುತಿಯಾಗದು. ಅಂತೆಯೇ ಗಡಿ ನಿಯಂತ್ರಣ ರೇಖೆ ಸೇರಿದಂತೆ ಡಿಪಾರ್ಟ್‌ಮೆಂಟಲ್‌ ಸ್ಟಾಟರ್ಜಿ, ವಿದೇಶಿ ನೀತಿಗಳಲ್ಲೂ ಯಾವುದೇ ರೀತಿಯ ಬದಲಾವಣೆಯಾಗದು. ಇದು ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ. ಈ ಪ್ರಕ್ರಿಯೆಯ ಸಂಪೂರ್ಣ ಲಾಭ ಅಲ್ಲಿನ ಜನರಿಗೆ ಸಲ್ಲುತ್ತದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ