ಆ್ಯಪ್ನಗರ

ಹೆತ್ತವರ ಮನವಿಗೆ ಸ್ಪಂದಿಸಿ ಬದಲಾದ ಉಗ್ರ

ಜಮ್ಮು-ಕಾಶ್ಮೀರದ ಉಗ್ರನೊಬ್ಬ ದಿಢೀರನೆ ಬದಲಾಗಿ ಸಭ್ಯ ಜೀವನಕ್ಕೆ ಹಿಂದಿರುಗಿದ್ದಾನೆ. ಇದಕ್ಕೆ ಕಾರಣ ಹೆತ್ತವರ ಮನ ಕರಗುವ ಮನವಿ.

Vijaya Karnataka 3 Dec 2018, 5:00 am
ಶ್ರೀನಗರ: ಹೆತ್ತವರು ಮಾಡಿದ ಕರಳು ಕರಗುವ ಮನವಿಗೆ ಸ್ಪಂದಿಸಿದ ಜಮ್ಮು-ಕಾಶ್ಮೀರದ ಉಗ್ರನೊಬ್ಬ ದಿಢೀರನೆ ಬದಲಾಗಿ ಸಭ್ಯ ಜೀವನಕ್ಕೆ ಹಿಂದಿರುಗಿದ್ದಾನೆ. ಇಥೆಶಮ್‌ ಬಿಲಾಲ್‌ ಬದಲಾದ ಉಗ್ರ. ನೋಯ್ಡಾ ಮೂಲದ ಕಾಲೇಜೊಂದರಲ್ಲಿ ಎಂಜಿನಿಯರಿಂಗ್‌ ಪದವಿ ವ್ಯಾಸಂಗ ಮಾಡುತ್ತಿದ್ದ ಈತ ಇತ್ತೀಚೆಗೆ ನಿಷೇಧಿತ ಇಸ್ಲಾಮಿಕ್‌ ಸ್ಟೇಟ್‌ ಆಫ್‌ ಜಮ್ಮು-ಕಾಶ್ಮೀರ (ಐಎಸ್‌ಜೆಕೆ) ಉಗ್ರ ಸಂಘಟನೆ ಸೇರಿ ಸುದ್ದಿ ಮಾಡಿದ್ದ. 20 ವರ್ಷದ ಈತ ತಲೆಗೆ ಕಪ್ಪು ಬಟ್ಟೆ ಕಟ್ಟಿಕೊಂಡು, ಮದ್ದುಗುಂಡು ತುಂಬಿದ ಬೆಲ್ಟ್‌ ಧರಿಸಿ, ಕೈಯಲ್ಲಿ ಉಗ್ರ ಸಂಘಟನೆಯ ಧ್ವಜ ಹಿಡಿದಿದ್ದ ತನ್ನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಹೆತ್ತವರಲ್ಲಿ ದಿಗಿಲು ಸೃಷ್ಟಿಸಿದ್ದ. ಇದಾಗಿ ಆತನ ಮನ ಪರಿವರ್ತನೆಗೆ ಪೋಷಕರು ಮನವಿ ಮಾಡಿದ್ದರು. ಪೊಲೀಸರೂ ಕಸರತ್ತು ನಡೆಸಿದ್ದರು. ಅಂತಿಮವಾಗಿ ಅವರ ಮನವಿಗೆ ಬಿಲಾಲ್‌ ಸ್ಪಂದಿಸಿದ್ದು, ಭಾನುವಾರ ಸಂಜೆ ಮನೆಗೆ ವಾಪಸಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Vijaya Karnataka Web BNG-0212-2-2-BILAL

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ