ಆ್ಯಪ್ನಗರ

ಜ್ಯೋತಿರ್ಮಯಿ ಡೇ ಕೊಲೆ ಪ್ರಕರಣ: ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

ಪಾತಕಿ ಛೋಟಾ ರಾಜನ್‌ ಮತ್ತು ಇತರ ಎಂಟು ಮಂದಿಗೆ ಮಹಾರಾಷ್ಟ್ರದ ಮೋಕಾ ವಿಶೇಷ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

TOI.in 2 May 2018, 9:06 pm
ಮುಂಬಯಿ: ಪತ್ರಕರ್ತ ಜ್ಯೋತಿರ್ಮಯಿ ಡೇ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಪಾತಕಿ ಛೋಟಾ ರಾಜನ್‌ ಮತ್ತು ಇತರ ಎಂಟು ಮಂದಿಗೆ ಮಹಾರಾಷ್ಟ್ರದ ಮೋಕಾ ವಿಶೇಷ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
Vijaya Karnataka Web chhota-rajan-to-return-to-india-tonight


ಪ್ರಕರಣದಲ್ಲಿ ಆರೋಪಿಗಳಾಗಿದ್ದ ಏಷ್ಯನ್ ಏಜ್‌ನ ಪತ್ರಕರ್ತೆ ಜಿಗ್ನಾ ವೋರಾ ಮತ್ತು ಸಿಮ್‌ ಕಾರ್ಡ್ ಪೂರೈಸಿದ್ದ ಪಾಲ್‌ಸನ್ ಜೋಸೆಫ್‌ನನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಅಲ್ಲದೆ ದೀಪಕ್ ಸಿಸೋದಿಯಾ ಹೊರತುಪಡಿಸಿ ಉಳಿದ ಎಲ್ಲ ಅಪರಾಧಿಗಳಿಗೆ ತಲಾ 26 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಮಹಾರಾಷ್ಟ್ರ ಸಂಘಟಿತ ಅಪರಾಧಗಳ ತಡೆ ಕಾಯ್ದೆ ಅಡಿ ರಾಜನ್‌ನನ್ನು ದೋಷಿ ಎಂದು ನ್ಯಾಯಾಲಯ ಪರಿಗಣಿಸಿತ್ತು. ಆತ ಬುಧವಾರ ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದನು. ಪ್ರಾಸಿಕ್ಯೂಟರ್‌ ಪ್ರದೀಪ್ ಘಾರತ್‌ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಗೆ ಮನವಿ ಮಾಡದಿದ್ದರೂ, ಪ್ರಕರಣದ ಗಂಭೀರತೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು.

ಪತ್ರಕರ್ತ ಡೇ ಅವರಿಗೆ ತಾಯಿ ಮತ್ತು ಸಹೋದರಿ ಇದ್ದು, ತಾಯಿ ಈಗಾಗಲೇ ತೀರಿಕೊಂಡಿರುವುದರಿಂದ ಪರಿಹಾರದ ಮೊತ್ತವನ್ನು ಸಹೋದರಿಗೆ ನೀಡಲು ನ್ಯಾಯಾಲಯಕ್ಕೆ ಹೇಳಿದ್ದರು.

2011ರ ಜೂನ್‌ನಲ್ಲಿ ಮಿಡ್‌ ಡೇ ಪತ್ರಿಕೆಯ ತನಿಖಾ ವರದಿಗಾರ ಜ್ಯೋತಿರ್ಮಯಿ ಡೇ ಅವರನ್ನು ಮನೆಯ ಎದುರು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಡೇ ಹತ್ಯೆಗೆ ಪತ್ರಕರ್ತೆ ಜಿಗ್ನಾ ರಾಜನ್‌ ತಂಡಕ್ಕೆ ಮಾಹಿತಿ ನೀಡಿ ಸಹಕರಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಪ್ರಕರಣದ ತನಿಖೆಯ ವೇಳೆ ಛೋಟಾ ರಾಜನ್ ಪ್ರಮುಖ ಆರೋಪಿಯಾಗಿರುವುದು ಪತ್ತೆಯಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ