ಆ್ಯಪ್ನಗರ

ವಿಷಪೂರಿತ ಚಪಾತಿ ತಿನ್ನಿಸಿ ನ್ಯಾಯಾಧೀಶ, ಪುತ್ರನ ಕೊಲೆ; 6 ಜನರ ಬಂಧನ

ಜಿಲ್ಲಾ ಹೆಚ್ವುವರಿ ಮತ್ತು ಸೆಷನ್‌ ನ್ಯಾಯಾಧೀಶ ಬೀತಲ್‌ ಮಹೇಂದ್ರ ತ್ರಿಪಾಠಿ ಹಾಗೂ ಅವರ 33 ವರ್ಷದ ಪುತ್ರ ಭಾನುವಾರ ಸಾವನ್ನಪ್ಪಿದ್ದರು. ಇದಕ್ಕೂ 2 ದಿನ ಮೊದಲು ರಾತ್ರಿಯ ಊಟ ಸೇವಿಸಿದ ಬಳಿಕ ಅವರಿಬ್ಬರು ಅನಾರೋಗ್ಯಕ್ಕೀಡಾಗಿದ್ದರು.

Agencies 30 Jul 2020, 5:54 pm
ಭೋಪಾಲ್‌: ವಿಷಪೂರಿತ ಜಪಾತಿ ತಿಂದು ನ್ಯಾಯಾಧೀಶರೊಬ್ಬರು ಮತ್ತು ಅವರ ಪುತ್ರ ಸಾವನ್ನಪ್ಪಿದ ದಾರುಣ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಓರ್ವ ಮಹಿಳೆ ಮತ್ತು ಮಂತ್ರವಾದಿಯೊಬ್ಬ ಸೇರಿದ್ದಾನೆ.
Vijaya Karnataka Web Madhya Pradesh


ಬೀತಲ್‌ ಜಿಲ್ಲಾ ಹೆಚ್ವುವರಿ ಮತ್ತು ಸೆಷನ್‌ ನ್ಯಾಯಾಧೀಶ ಮಹೇಂದ್ರ ತ್ರಿಪಾಠಿ ಹಾಗೂ ಅವರ 33 ವರ್ಷದ ಪುತ್ರ ಭಾನುವಾರ ಸಾವನ್ನಪ್ಪಿದ್ದರು. ಇದಕ್ಕೂ ಎರಡು ದಿನ ಮೊದಲು ರಾತ್ರಿಯ ಊಟ ಸೇವಿಸಿದ ನಂತರ ಇಬ್ಬರೂ ಅನಾರೋಗ್ಯಕ್ಕೀಡಾಗಿದ್ದರು.

ಬಂಧಿತಳಾಗಿರುವ ಮಹಿಳೆಯನ್ನು ಸಂಧ್ಯಾ ಸಿಂಗ್‌ ಎಂದು ಗುರುತಿಸಲಾಗಿದ್ದು, ಈಕೆ ಎನ್‌ಜಿಒ ಒಂದನ್ನು ನಡೆಸುತ್ತಿದ್ದಾಳೆ. ಮನೆಯಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಪೂಜೆ ನಡೆಸುತ್ತಿದ್ದೇನೆ ಎಂದು ಹೇಳಿದ್ದ ಈಕೆ ವಿಷಪೂರತಿ ಗೋಧಿ ಹಿಟ್ಟನ್ನು ನ್ಯಾಯಮೂರ್ತಿಗಳ ಕುಟುಂಬಕ್ಕೆ ನೀಡಿದ್ದಳು.

ಗೋಧಿ ಹಿಟ್ಟನ್ನು ಮನೆಗೆ ತಂದಿದ್ದ ನ್ಯಾಯಧೀಶರು, ಜುಲೈ 20 ರಂದು ಇದೇ ಹಿಟ್ಟಿನಿಂದ ಮಾಡಿದ ಚಪಾತಯನ್ನು ತಿಂದಿದ್ದರು. ನ್ಯಾಯಾಧೀಶರು ಮತ್ತು ಅವರ ಪುತ್ರ ಚಪಾತಿ ತಿಂದಿದ್ದರು. ಆದರೆ ಅವರ ಪತ್ನಿ ಅನ್ನ ಮಾತ್ರ ಸೇವಿಸಿದ್ದರು. ನಂತರ ಇಬ್ಬರೂ ವಾಂತಿ ಮಾಡಿಕೊಳ್ಳಲು ಆರಂಭಿಸುತ್ತಿದ್ದಂತೆ ಇಬ್ಬರನ್ನೂ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.

ಜುಲೈ 25ರಂದು ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಇಬ್ಬರನ್ನೂ ನಾಗಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಸ್ಪತ್ರೆಗೆ ದಾಖಲಾದ ದಿನವೇ ನ್ಯಾಯಾಧೀಶರ ಪುತ್ರ ಸಾವನ್ನಪ್ಪಿದರೆ, ಜಡ್ಜ್‌ಮರುದಿನ ಅಸುನೀಗಿದ್ದರು.

ಅವರ ಇನ್ನೋರ್ವ ಪುತ್ರನೂ ಅಸ್ವಸ್ಥನಾಗಿದ್ದು, ಆತನ ಆರೋಗ್ಯದಲ್ಲಿ ಚೇತರಿಸಿಕೆ ಕಾಣುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದೆಲ್ಲಾ ಸಂಧ್ಯಾ ಸಿಂಗ್‌ ತಂತ್ರ ಎಂದು ಪೊಲೀಸರು ತಿಳಿಸಿದ್ದಾರೆ. ಛಿಂದ್ವಾರ ಜಡ್ಜ್‌ ಬಂದ ನಂತರ ಇವರ ನಡುವೆ ಸಂಬಂಧ ಕುದುರಿತ್ತು.
ಆದರೆ ಕಳೆದ ನಾಲ್ಕು ತಿಂಗಳಿಂದ ನ್ಯಾಯಧೀಶರನ್ನು ಭೇಟಿಯಾಗಲು ಆಕೆಗೆ ಸಾಧ್ಯವಾಗಿರಲಿಲ್ಲ. ಕಾರಣ ಅವರ ಕುಟುಂಬಸ್ಥರು ಬಂದು ಬೀತಲ್‌ನಲ್ಲಿ‌ ಮಹೇಂದ್ರ ತ್ರಿಪಾಠಿ ಅವರ ಜೊತೆಗೆ ಉಳಿದುಕೊಂಡಿದ್ದರು. ಇದರಿಂದ ಒತ್ತಡಕ್ಕೊಳಗಾಗಿ ಆಕೆ ಈ ಈ ಕೃತ್ಯ ಎಸಗಿದ್ದಾಳೆ ಎಂದು ಎಸ್‌ಪಿ ಶಿಮಲ ಪ್ರಸಾದ್‌ ಹೇಳಿದ್ದಾರೆ.

ನಿಮ್ಮ ಕುಟುಂಬದ ಸಮಸ್ಯೆಗಳು ನಿವಾರಣೆಯಾಗಲು ಪೂಜೆಗೆ ಗೋಧಿ ಹಿಟ್ಟು ತಂದು ಕೊಡಿ ಎಂದು ಸಂಧ್ಯಾಸಿಂಗ್‌ ಹೇಳಿದ್ದಳು. ಹಾಗೆ ನೀಡಿದ ಗೋಧಿಯನ್ನು ಮರಳಿಸುವಾಗ ಅದಕ್ಕೆ ವಿಷ ಬೆರೆಸಲಾಗಿತ್ತು ಎನ್ನಲಾಗಿದೆ.

ಆರಂಭದಲ್ಲಿ ಸಂಧ್ಯಾ ಸಿಂಗ್‌ ಮತ್ತು ಆಕೆಯ ಚಾಲಕ ಸಂಜುನನ್ನು ಬಂಧಿಸಿದ ಪೊಲೀಸರು ನಂತರ ಉಳಿದವರನ್ನು ಬಂಧಿಸಿದ್ದರು. ಮಂತ್ರವಾದಿಯು ತಲೆ ಮರೆಸಿಕೊಳ್ಳುವಂತೆ ಸಂಧ್ಯಾಗೆ ಸಲಹೆ ನೀಡಿದ್ದ. ಆಕೆ ಅದರಂತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಳು. ಆದರೆ ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ