ಆ್ಯಪ್ನಗರ

ತನಿಖೆಗಾಗಿ ವ್ಯಕ್ತಿಗೆ ಧ್ವನಿ ಮಾದರಿ ನೀಡುವಂತೆ ಮ್ಯಾಜಿಸ್ಪ್ರೇಟ್‌ ಸೂಚಿಸಬಹುದು

ಆರೋಪಿಗಳ ಸಿಆರ್‌ಪಿಸಿ ಲಾಭ ಪಡೆದು ತಪ್ಪಿಸಿಕೊಳ್ಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಸಂವಿಧಾನದ ವಿಧಿ 142 ಅಡಿಯಲ್ಲಿ ಅಧಿಕಾರ ಬಳಸಿ ಸುಪ್ರೀಂಕೋರ್ಟ್‌ ಈ ಮಹತ್ವದ ತೀರ್ಪು ನೀಡಿದೆ.

PTI 3 Aug 2019, 5:00 am
ಹೊಸದಿಲ್ಲಿ: ತನಿಖೆಯೊಂದು ತ್ವರಿತಗತಿಯಲ್ಲಿ ಮುಂದುವರಿಯಲು ಅನುಕೂಲವಾಗಲೆಂದು ವ್ಯಕ್ತಿಯೊಬ್ಬನಿಗೆ ಆತನ ಧ್ವನಿ ಮಾದರಿಯನ್ನು ತನಿಖಾ ಸಂಸ್ಥೆಗಳಿಗೆ ನೀಡಲು ನ್ಯಾಯಿಕ ದಂಡಾಧಿಕಾರಿ ನಿರ್ದೇಶಿಸಬಹುದು ಎಂದು ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ.
Vijaya Karnataka Web court

ಸದ್ಯ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ವ್ಯಕ್ತಿಗಳಿಗೆ ಅವರ ಧ್ವನಿ ಮಾದರಿ ನೀಡುವಂತೆ ಒತ್ತಾಯಿಸುವಂತಿಲ್ಲ ಎಂದು ಅಪರಾಧ ಪ್ರಕ್ರಿಯೆ ಸಂಹಿತೆ(ಸಿಆರ್‌ಪಿಸಿ)ಯಲ್ಲಿ ಹೇಳಲಾಗಿದೆ. ಆರೋಪಿಗಳ ಇದರ ಲಾಭ ಪಡೆದು ತಪ್ಪಿಸಿಕೊಳ್ಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಸಂವಿಧಾನದ ವಿಧಿ 142 ಅಡಿಯಲ್ಲಿ ಅಧಿಕಾರ ಬಳಸಿ ಸುಪ್ರೀಂಕೋರ್ಟ್‌ ಈ ಮಹತ್ವದ ತೀರ್ಪು ನೀಡಿದೆ.
ಸಿಜೆಐ ರಂಜನ್‌ ಗೊಗೊಯ್‌ , ನ್ಯಾ. ದೀಪಕ್‌ ಗುಪ್ತಾ ಮತ್ತು ನ್ಯಾ. ಸಂಜೀವ್‌ ಖನ್ನಾ ಅವರಿದ್ದ ತ್ರಿಸದಸ್ಯ ಪೀಠ, '' ಸಿಆರ್‌ಪಿಸಿಗೆ ಸಂಸತ್ತನಲ್ಲಿ ತಿದ್ದುಪಡಿ ಆಗುವ ತನಕ ಧ್ವನಿ ಮಾದರಿ ನೀಡುವಂತೆ ಆದೇಶಿಸಿವ ಅಧಿಕಾರ ನ್ಯಾಯಿಕ ದಂಡಾಧಿಕಾರಿಗೆ ಇರಲಿದೆ. ಅಪರಾಧದ ತನಿಖೆಗೆ ನೆರವಾಗುವ ಉದ್ದೇಶದಿಂದ ಕೋರ್ಟ್‌ ಈ ನಿಲುವಿಗೆ ಬಂದಿದೆ'' ಎಂದು 23 ಪುಟಗಳ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.
2012ರಲ್ಲಿ ಧ್ವನಿಮಾದರಿ ನಿರ್ದೇಶನ ಅಧಿಕಾರ ಕುರಿತು ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ಭಿನ್ನ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ