ಆ್ಯಪ್ನಗರ

ಸೆಲ್ಫೀ ತೆಗೆದುಕೊಳ್ಳಲು ಹೋದವನಿಗೆ ಥಳಿಸಿದ ಆನೆ

'ಆನೆಯೊಟ್ಟಿಗೆ ನಾನೇ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಅಪ್‌ಡೋಟ್ ಮಾಡುವ ಇರಾದೆಯಿಂದಲೋ ಏನೋ, ಸೆಲ್ಫೀ ತೆಗೆದುಕೊಳ್ಳಲು ಹೋದ ವ್ಯಕ್ತಿಗೆ ಆನೆ ಥಳಿಸಿದ್ದು, ಸೆಲ್ಫೀಯೂ ಸಾಕು, ಎಲ್ಲವೂ ಸಾಕು ಎನ್ನುವ ಹಾಗೆ ಮಾಡಿದೆ.

ಏಜೆನ್ಸೀಸ್ 14 Apr 2016, 4:19 pm
ತಿರುವನಂತಪುರಂ: 'ಆನೆಯೊಟ್ಟಿಗೆ ನಾನೇ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಅಪ್‌ಡೋಟ್ ಮಾಡುವ ಇರಾದೆಯಿಂದಲೋ ಏನೋ, ಸೆಲ್ಫೀ ತೆಗೆದುಕೊಳ್ಳಲು ಹೋದ ವ್ಯಕ್ತಿಗೆ ಆನೆ ಥಳಿಸಿದ್ದು, ಸೆಲ್ಫೀಯೂ ಸಾಕು, ಎಲ್ಲವೂ ಸಾಕು ಎನ್ನುವ ಹಾಗೆ ಮಾಡಿದೆ.
Vijaya Karnataka Web jumbo attacked man while trying to take selfie
ಸೆಲ್ಫೀ ತೆಗೆದುಕೊಳ್ಳಲು ಹೋದವನಿಗೆ ಥಳಿಸಿದ ಆನೆ


ಇಲ್ಲಿನ ಸಮೀಪದ ಕಿಲಿಮನೂರ್‌ನ ಮಲಯಮಾಡೊಮ್‌ನ ಉಮಾಮಹೇಶ್ವರ ಮಂದಿರದ ದೇವಸ್ವಂನ ಆನೆ ಮೆರವಣಿಗೆ ನಂತರ ವಿಶ್ರಾಂತಿ ಪಡೆಯುತ್ತಿತ್ತು. ಮಾವುತರೂ ಈ ಆನೆಯೊಂದಿಗೆ ವಿಶ್ರಮಿಸುತ್ತಿದ್ದರು. ಆಗಲೇ ನಮೋಮ್ ಮೂಲದ ಶ್ರೀಲಾಲ್ ಎಂಬುವವರು ಆನೆಗೆ ಬಾಳೆಹಣ್ಣನ್ನು ಕೊಟ್ಟು, ತಮ್ಮ ಮೊಬೈಲ್‌ನಲ್ಲಿ ಸೆಲ್ಫೀ ತೆಗೆದುಕೊಳ್ಳಲು ಮುಂದಾದರು. ಇದರಿಂದ ಇರಿಸುಮುರಿಸುಗೊಂಡ ಆನೆ ತನ್ನ ಸೊಂಡಿಲನಿಂದ ಶ್ರೀಲಾಲ್‌ನನ್ನು ನೂಕಿ, ಬೀಳಿಸಿದೆ.

ಕೂಗನ್ನು ಕೇಳಿಸಿಕೊಂಡ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಗಾಯಗೊಂಡವನನ್ನು ಆಸ್ಪತ್ರೆಗೆ ದಾಖಲಿಸಿದೆ.

ತೊಡೆಯ ಭಾಗದಲ್ಲಿ ಶ್ರೀಲಾಲ್‌ಗೆ ಗಂಭೀರ ಗಾಯಗಳಾಗಿದ್ದು, ತಿರುವನಂತಪುರಮ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ