ಆ್ಯಪ್ನಗರ

ಪ್ರಯಾಣಿಕರ ಗಮನಕ್ಕೆ: ರೈಲು ಹೊರಡುವ 20 ನಿಮಿಷ ಮುನ್ನವೇ ನಿಲ್ದಾಣ ತಲುಪಿ

ಈ ತಿಂಗಳು ಕುಂಭ ಮೇಳ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಉತ್ತರ ಪ್ರದೇಶದ ಅಲಹಾಬಾದ್ ರೈಲು ನಿಲ್ದಾಣದಲ್ಲಿ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ.

TIMESOFINDIA.COM 6 Jan 2019, 3:51 pm
ಹೊಸದಿಲ್ಲಿ: ರೈಲ್ವೆ ನಿಲ್ದಾಣಗಳು ಸಹ ವಿಮಾನ ನಿಲ್ದಾಣಗಳಂತೆಯೇ ಹೈಟೆಕ್ ಆಗುತ್ತಿದ್ದು, ಭದ್ರತಾ ತಪಾಸಣಾ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶದಿಂದ ಪ್ರಯಾಣಿಕರು ರೈಲು ಹೊರಡುವ 15-20 ನಿಮಿಷ ಮುಂಚಿತವಾಗಿಯೇ ನಿಲ್ದಾಣ ತಲುಪಬೇಕಾಗಿದೆ.
Vijaya Karnataka Web Railway


ಈ ತಿಂಗಳು ಕುಂಭ ಮೇಳ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಉತ್ತರ ಪ್ರದೇಶದ ಅಲಹಾಬಾದ್ ರೈಲು ನಿಲ್ದಾಣದಲ್ಲಿ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸೇರಿದಂತೆ ದೇಶದ 202 ನಿಲ್ದಾಣಗಳಲ್ಲಿಯೂ ಈ ಯೋಜನೆ ಜಾರಿಗೊಳ್ಳುವ ನಿರೀಕ್ಷೆ ಇದೆ ಎಂದು ರೈಲ್ವೆ ಭದ್ರತಾ ಪಡೆ ಮಹಾ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ.

'ರೈಲು ನಿಲ್ದಾಣದ ಪ್ರತಿಯೊಂದು ಪ್ರವೇಶ ದ್ವಾರದ ಬಳಿಯೂ ಆಯ್ದ ಭದ್ರತಾ ತಪಾಸಣೆ ಇರುತ್ತದೆ. ಆದರೆ, ವಿಮಾನ ನಿಲ್ದಾಣಗಳಂತೆ ಪ್ರಯಾಣಿಕರು ಗಂಟೆಗಳ ಮುಂಚಿತವಾಗಿಯೇ ಬರಬೇಕಿಲ್ಲವಾದರೂ, ಭದ್ರತಾ ತಪಾಸಣೆ ಹಿನ್ನೆಲೆಯಲ್ಲಿ ರೈಲು ಹೊರಡುವ 15-20 ನಿಮಿಗಳ ಮುಂಚೆ ಬರಬೇಕಾಗುತ್ತದೆ' ಎಂದು ಅರುಣ್ ಕುಮಾರ್ ತಿಳಿಸಿದರು.

ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಆದರೆ, ಭದ್ರತಾ ಸಿಬ್ಬಂದಿ ಸಂಖ್ಯೆಯಲ್ಲಿ ಹೆಚ್ಚಳ ಮಾಡುತ್ತಿಲ್ಲ. 'ನಾವು ತಂತ್ರಜ್ಞಾನಗಳನ್ನು ಹೆಚ್ಚೆಚ್ಚು ಬಳಕೆ ಮಾಡಿದಷ್ಟು, ಮಾನವ ಸಂಪನ್ಮೂಲಗಳ ಅವಶ್ಯಕತೆ ತಪ್ಪುತ್ತದೆ' ಎಂದು ಕುಮಾರ್ ತಿಳಿಸಿದ್ದಾರೆ.

ಈ ನಿಲ್ದಾಣಗಳು ಏಕೀಕೃತ ಭದ್ರತಾ ವ್ಯವಸ್ಥೆಯ (ಐಎಸ್‌ಎಸ್) ಸಿಸಿಟಿವಿ, ಪ್ರವೇಶ ನಿಯಂತ್ರಣ, ವೈಯಕ್ತಿಕ ಮತ್ತು ಬ್ಯಾಗೇಜ್ ಸ್ಕ್ರೀನಿಂಗ್ ವ್ಯವಸ್ಥೆ ಸೇರಿದಂತೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಐಎಸ್‌ಎಸ್ ಯೋಜನೆಯ ನಿರೀಕ್ಷಿತ ವೆಚ್ಚ 385.06 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ