ಹೊಸದಿಲ್ಲಿ: ಸಿಬಿಐ ಹಂಗಾಮಿ ನಿರ್ದೇಶಕರಾಗಿ ಎಂ.ನಾಗೇಶ್ವರ ರಾವ್ ನೇಮಕ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯಿಂದ ನ್ಯಾಯಮೂರ್ತಿ ಎನ್.ವಿ.ರಮಣ ಗುರುವಾರ ಹಿಂದೆ ಸರಿದಿದ್ದಾರೆ. ಈಗಾಗಲೇ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾಯಮೂರ್ತಿ ಎ.ಕೆ.ಸಿಕ್ರಿ ವಿಚಾರಣೆಯಿಂದ ಹಿಂದೆ ಸರಿದಿದ್ದು, ಈ ಹಾದಿ ತುಳಿದ ಮೂರನೇ ನ್ಯಾಯಮೂರ್ತಿ ರಮಣ. ಕಾಮನ್ ಕಾಸ್ ಎಂಬ ಸರಕಾರೇತರ ಸಂಸ್ಥೆ ಸಲ್ಲಿಸಿರುವ ಅರ್ಜಿಯು ಗುರುವಾರ ನ್ಯಾಯಮೂರ್ತಿಗಳಾದ ರಮಣ ಮತ್ತು ಎಂ.ಎಂ.ಶಾಂತನಗೌಡರ್ ಅವರಿದ್ದ ಅವರಿದ್ದ ಪೀಠದ ಎದುರು ವಿಚಾರಣೆಗೆ ಬಂದಿತು. ''ಮಹೇಶ್ವರ ರಾವ್ ನನ್ನ ರಾಜ್ಯದವರು. ಹೀಗಾಗಿ ನಾನು ಅವರನ್ನು ಬಲ್ಲೆ. ಜತೆಗೆ ನಾನು ಪುತ್ರಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸಬೇಕಿದೆ. ಹೀಗಾಗಿ ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿದ್ದೇನೆ,'' ಎಂದು ನ್ಯಾ.ರಮಣ ಘೋಷಿಸಿದರು. ಸಿಜೆಐ ಹೊಸ ಪೀಠ ರಚಿಸಬೇಕಾಗಿದೆ.
ರಾವ್ ನೇಮಕ ವಿವಾದ ಅರ್ಜಿ ವಿಚಾರಣೆಯಿಂದ ಜಡ್ಜ್ ಹಿಂದಕ್ಕೆ
''ಮಹೇಶ್ವರ ರಾವ್ ನನ್ನ ರಾಜ್ಯದವರು. ಹೀಗಾಗಿ ನಾನು ಅವರನ್ನು ಬಲ್ಲೆ. ಜತೆಗೆ ನಾನು ಪುತ್ರಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸಬೇಕಿದೆ. ಹೀಗಾಗಿ ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿದ್ದೇನೆ,'' ಎಂದು ನ್ಯಾ.ರಮಣ ಘೋಷಿಸಿದರು.
Vijaya Karnataka 1 Feb 2019, 5:00 am