ಆ್ಯಪ್ನಗರ

ಪೋಸ್ಟರ್‌ನಲ್ಲಿ ಮೋದಿ, ಶಾ ಜತೆ ರಾಹುಲ್ ಆಪ್ತ ಜ್ಯೋತಿರಾದಿತ್ಯ

ರಾಹುಲ್ ಆಪ್ತ ಎಂದು ಗುರುತಿಸಿಕೊಂಡಿರುವ ಸಿಂಧಿಯಾ, ಮಧ್ಯಪ್ರದೇಶ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ ಪಕ್ಷದ ಹಿರಿಯ ನಾಯಕರು ಅದಕ್ಕೆ ತಡೆ ಒಡ್ಡುತ್ತಲೇ ಬಂದಿದ್ದಾರೆ. ಅಧ್ಯಕ್ಷ ಸ್ಥಾನ ಸಿಗದಿದ್ದರೆ ಸಿಂಧಿಯಾ ಬಿಜೆಪಿ ತೆಕ್ಕೆಗೆ ಜಾರುತ್ತಾರೆ ಎಂಬ ವದಂತಿಗಳು ಕಳೆದ ಎರಡು ತಿಂಗಳಿಂದ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

Vijaya Karnataka 13 Oct 2019, 1:31 pm
ಭೋಪಾಲ್‌: ಕಾಂಗ್ರೆಸ್‌ನಲ್ಲಿ ಲೋಕಸಭಾಚುನಾವಣೆ ಸೋಲಿನ ಅವಲೋಕನದ ಅಗತ್ಯವಿದೆ ಎಂದು ಆಗ್ರಹಿಸಿ ಪಕ್ಷದ ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ
Vijaya Karnataka Web -

ರಾಹುಲ್‌ ಗಾಂಧಿ ಅವರ ಆಪ್ತ ಜ್ಯೋತಿರಾದಿತ್ಯ ಸಿಂಧಿಯಾ ಅವರ ಫೋಟೊವನ್ನು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ಫೋಟೊ ಇರುವ ಪೋಸ್ಟರ್‌ನಲ್ಲಿ ಹಾಕಿರುವುದು ವಿವಾದ ಸೃಷ್ಟಿಸಿದೆ.

ಪೋಸ್ಟರ್‌ನಲ್ಲಿ ಭಾರತಮಾತೆಯ ಚಿತ್ರ ಕೂಡ ಇರುವುದು ಗಮನಾರ್ಹ. ಮಧ್ಯಪ್ರದೇಶದ ಭಿಂಡ್‌ ಜಿಲ್ಲೆಗೆ ಸಿಂಧಿಯಾ ಭೇಟಿ ನೀಡುವ ಸಂದರ್ಭದಲ್ಲಿ ಬಿಜೆಪಿಯ ಕಾರ್ಯಕರ್ತ
ಹೃದೇಶ್‌ ಕುಮಾರ್‌ ಎಂಬಾತ ಈ ಪೋಸ್ಟರ್‌ ಹಾಕಿಸಿದ್ದಾರೆ.

ಕಾಂಗ್ರೆಸ್‌ಗೆ ತುರ್ತು ಆತ್ಮಾವಲೋಕನದ ಅಗತ್ಯವಿದೆ: ಜ್ಯೋತಿರಾದಿತ್ಯ ಸಿಂಧಿಯಾ

ಈ ಕುರಿತು ಪ್ರತಿಕ್ರಿಯಿಸಿರುವ ಶರ್ಮಾ, 370ನೇ ವಿಧಿ ರದ್ದುಗೊಳಿಸುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಜ್ಯೋತಿ ರಾದಿತ್ಯ ಬೆಂಬಲ ಸೂಚಿಸಿದ್ದರು. ಅದಕ್ಕೆ ಧನ್ಯವಾದ ತಿಳಿಸಲು ಈ ಪೋಸ್ಟರ್‌ ಹಾಕಿಸಿದ್ದೇನೆ ಎಂದಿದ್ದಾರೆ. ಪೋಸ್ಟರ್‌ನಲ್ಲಿ ಮೋದಿ, ಶಾ ಅವರೊಂದಿಗೆ ಸಿಂಧಿಯಾ ಅವರ ಫೋಟೊ ಕಾಣಿಸಿಕೊಂಡ ಕೂಡಲೇ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುವ ವದಂತಿ ಹರಡಿತ್ತು.

ಇದಕ್ಕೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್‌ ವಕ್ತಾರ ಪಂಕಜ್‌ ಚತುರ್ವೇದಿ, ಯಾವುದೇ ಕಾರಣಕ್ಕೂ ಜ್ಯೋತಿರಾದಿತ್ಯ ಅವರು ಬಿಜೆಪಿಗೆ ಹೋಗುವುದಿಲ್ಲ. ಈ ಪೋಸ್ಟರ್‌ ಅನ್ನು ತಪ್ಪಾಗಿ ಅರ್ಥೈಸುವುದು ಬೇಡ ಎಂದಿದ್ದಾರೆ.

ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಅವರೊಂದಿಗೆ ತೆರೆಮರೆ ತಿಕ್ಕಾಟದಲ್ಲಿರುವ ಸಿಂಧಿಯಾ ರಾಜ್ಯ ಸರಕಾರದ ಆಡಳಿತದ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷಗಿರಿಗೆ ರಾಹುಲ್ ವಿದಾಯ: ಪಲಾಯನ ಮಾಡಿದ್ದು ದೊಡ್ಡ ತಪ್ಪೆಂದ ಸಲ್ಮಾನ್ ಖುರ್ಶಿದ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ