ಆ್ಯಪ್ನಗರ

#metoo: ಕೈಲಾಶ್‌ ಖೇರ್‌, ತೋಶಿ ಸಬ್ರಿ ಕೂಡ ಕಿರುಕುಳ ನೀಡಿದ್ದರು ಎಂದ ಗಾಯಕಿ

ಕೈಲಾಶ್‌ ಖೇರ್‌ ಹಾಗೂ ಸಂಗೀತ ನಿರ್ದೇಶಕ ತೋಶಿ ಸಬ್ರಿ ವಿರುದ್ಧ ಗಾಯಕಿ ವರ್ಷ ಸಿಂಗ್‌ ಮಿಟೂ ಅಭಿಯಾನದ ಮೂಲಕ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.

TIMESOFINDIA.COM 15 Oct 2018, 8:22 pm
[This story originally published in Times of India oct 15, 2018]
Vijaya Karnataka Web varsha


ಮುಂಬಯಿ: ಮಿ ಟೂ ಅಭಿಯಾನ ದೇಶದಲ್ಲಿ ಸಂಚಲನ ಮೂಡಿಸುತ್ತಿದೆ. ಹಲವಾರು ಬಾಲಿವುಡ್‌ ನಿರ್ಮಾಪಕರು, ಗಾಯಕರು, ಲೇಖಕರು, ನಟರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಲಾಗುತ್ತಿದ್ದು, ಇದೀಗ ಗಾಯಕ ಕೈಲಾಶ್‌ ಖೇರ್‌ ಅವರ ವಿರುದ್ಧ ಮತ್ತೊಂದು ಆರೋಪ ದಾಖಲಾಗಿದೆ.

ಗಾಯಕಿ ವರ್ಷ ಸಿಂಗ್‌ ಧನೊವಾ, ಕೈಲಾಶ್‌ ಖೇರ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ತನಗಾದ ಅನುಭವವನ್ನು ವೀಡಿಯೋ ಮಾಡಿ, ಸಾಮಾಜಿಕ ತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಇದಲ್ಲದೆ ಸಂಗೀತ ನಿರ್ದೇಶಕ ತೋಷಿ ಸಬ್ರಿ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಪತ್ರಕರ್ತೆ ಸೋನಾ ಮೊಹಾಪಾತ್ರ ಖೇರ್‌ ವಿರುದ್ಧ ಅಸಭ್ಯ ವರ್ತನೆ ಕುರಿತು ಆರೋಪ ಮಾಡಿದ್ದರು. ಈ ಎಲ್ಲ ಆರೋಪವನ್ನು ಕೈಲಾಶ್‌ ಖೇರ್‌ ತಳ್ಳಿಹಾಕಿದ್ದಾರೆ.

https://www.youtube.com/watch?time_continue=7&v=86YvxOuIx_g

ಕೈಲಾಶ್‌ ಅವರನ್ನು ಭೇಟಿಯಾದ ಬಳಿಕ, ಅವರು ಹಲವಾರು ಬಾರಿ ಮೆಸೇಜ್‌ ಮಾಡುತ್ತಿದ್ದರು. ನನ್ನನ್ನು ಭೇಟಿಯಾಗಬೇಕು, ನನ್ನೊಂದಿಗೆ ಸಮಯ ಕಳೆದು, ನಾವಿಬ್ಬರೂ ಪ್ರೀತಿಸಬೇಕು ಎಂದು ಸಂದೇಶಗಳನ್ನು ಕಳಿಸುತ್ತಿದ್ದರು ಎಂದು ವರ್ಷ ಆರೋಪಿಸಿದ್ದಾರೆ. ಕೈಲಾಶ್‌ ಖೇರ್‌ ಅವರಿಗೆ ಸಂದಿರುವ ಪದ್ಮಶ್ರೀ ಪುರಸ್ಕಾರವನ್ನೂ ಸರಕಾರ ವಾಪಸ್‌ ಪಡೆಯಬೇಕು ಎಂದು ವರ್ಷ ಆಗ್ರಹಿಸಿದ್ದಾರೆ.

ಸಂಗೀತ ನಿರ್ದೇಶ ತೋಶಿ ಸಬ್ರಿ ಅವರೊಂದಿಗಿನ ಅನುಭವ ಇನ್ನೂ ಭಯಾನಕವಾಗಿತ್ತು ಎಂದಿರುವ ವರ್ಷ ಸಿಂಗ್‌, ಹಾಡು ಹೇಳಿಸುವ ನೆಪದಲ್ಲಿ ನನ್ನನ್ನು ಕಾರಿನಲ್ಲಿ ಕುಳ್ಳಿರಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ ಮದ್ಯಪಾನ ಮಾಡುವಂತೆಯೂ ಒತ್ತಾಯಿಸಿದ್ದಾರೆ. ಆ ಬಳಿಕ ನನ್ನ ಮುಖ, ಕೆನ್ನೆಯನ್ನು ಸವರಿ, ತೀರಾ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ಬಳಿಕ ಯಾರೂ ಇಲ್ಲದ ವೇಳೆ ಸ್ಟುಡಿಯೋಗೆ ಕರೆದೊಯ್ದು ತೀರಾ ಅಸಹ್ಯವಾಗಿ ನಡೆದುಕೊಂಡಿದ್ದಾರೆ.

ಈ ವೇಳೆ ನಾನು ಈಗಾಗಲೇ ಒಬ್ಬರನ್ನು ಪ್ರೀತಿಸುತ್ತಿರುವುದಾಗಿ ಹೇಳಿದ ಬಳಿಕ ಬಿಟ್ಟಿದ್ದಾರೆ ಎಂದು ವರ್ಷ ಸಿಂಗ್‌ ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆ ಬಳಿಕ ಖಿನ್ನತೆಗೆ ಒಳಗಾಗಿದ್ದು, ಯಾವುದೇ ಸಂಗೀತ ನಿರ್ದೇಶಕರನ್ನು ಭೇಟಿ ಮಾಡಲು ಹೆದರುತ್ತಿದ್ದೆ ಎಂದು ವರ್ಷ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ