ಆ್ಯಪ್ನಗರ

ಮುಸ್ಲಿಂ ಮದುವೆ ಆಹ್ವಾನ ಪತ್ರಿಕೆಯಲ್ಲಿ ಕಲಶ, ಸ್ವಸ್ತಿಕ ಚಿಹ್ನೆ

ಬಲ್ಲಿಯಾ ಜಿಲ್ಲೆಯ ಗ್ರಾಮೀಣ ಮುಸ್ಲಿಂ ಕುಟುಂಬವೊಂದು ತಮ್ಮ ಸಂಬಂಧಿ ಹಾಗೂ ಸ್ನೇಹಿತರಿಗೆ ಹಿಂದೂ ಧಾರ್ಮಿಕ ಗುರುತುಗಳಿರುವ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಸೌಹಾರ್ದತೆ ಮೆರೆದಿದೆ.

ಟೈಮ್ಸ್ ಆಫ್ ಇಂಡಿಯಾ 24 Mar 2017, 3:10 pm
ವಾರಾಣಾಸಿ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಲ್ಲಿಯಾ ಜಿಲ್ಲೆಯ ಗ್ರಾಮೀಣ ಮುಸ್ಲಿಂ ಕುಟುಂಬವೊಂದು ತಮ್ಮ ಸಂಬಂಧಿ ಹಾಗೂ ಸ್ನೇಹಿತರಿಗೆ ಹಿಂದೂ ಧಾರ್ಮಿಕ ಲಾಂಛನಗಳಿರುವ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಸೌಹಾರ್ದತೆ ಮೆರೆದಿದೆ.
Vijaya Karnataka Web kalash swastika adorn muslim wedding invite in ballia village
ಮುಸ್ಲಿಂ ಮದುವೆ ಆಹ್ವಾನ ಪತ್ರಿಕೆಯಲ್ಲಿ ಕಲಶ, ಸ್ವಸ್ತಿಕ ಚಿಹ್ನೆ


ಬಲ್ಲಿಯಾ ಜಿಲ್ಲೆಯ ಪಿಂಡಾರಿ ಗ್ರಾಮದ ನರ್ಸುಲ್ಲಾ ಅವರ ಸಹೋದರನ ಮದುವೆ ಸಮಾರಂಭ ಇಂದು ನಡೆಯಿತು. ನರ್ಸುಲ್ಲಾ ಅವರು ಹಿಂದೂ ಧಾರ್ಮಿಕ ಗುರುತುಗಳ ಆಹ್ವಾನ ಪತ್ರಿಗೆ ನೀಡುವ ಮೂಲಕ ತಮ್ಮ ಸ್ನೇಹಿತರು ಹಾಗೂ ಸಂಬಂಧಿಗಳನ್ನು ವಿಶೇಷವಾಗಿ ಆಹ್ವಾನಿಸಿದ್ದರು.

ಈ ಆಹ್ವಾನ ಪತ್ರಿಕೆಯಲ್ಲಿ 'ಮಂಗಳಂ ಭಗವಾನ್ ವಿಷ್ಣು ಮಂಗಳಂ ಗರುಡ ಧ್ವಜ, ಮಂಗಳಂ ಪುಂಡರಿಕಾಕ್ಷ ಮಂಗಳಾಯೆ ತನೋ ಹರಿ' ಎಂಬ ಶ್ಲೋಕದ ಜತೆ ಕಲಶ ಹಾಗೂ ಸ್ವಸ್ತಿಕ ಚಿಹ್ನೆಯನ್ನು ಮುದ್ರಿಸಲಾಗಿದೆ.

'ನಾವು ನಮ್ಮ ಹಿಂದೂ ಮಿತ್ರರ ಮೇಲಿನ ಪ್ರೀತಿ ಹಾಗೂ ಅಪಾರ ಗೌರವದಿಂದ ಈ ರೀತಿಯ ಆಮಂತ್ರಣ ಪತ್ರಿಕೆಯನ್ನು ಹಂಚಿದ್ದೇವೆ. ಇದರಲ್ಲಿ ಹೊಸದೇನು ಇಲ್ಲ. ನಾವೇಲ್ಲ ಒಂದು ಗೂಡಿ ಮದುವೆ ಹಾಗೂ ಹಬ್ಬಗಳನ್ನು ಆಚರಿಸುತ್ತೇವೆ' ಎಂದು ನರ್ಸುಲ್ಲಾ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ