ಆ್ಯಪ್ನಗರ

ಪುಕ್ಕಟ್ಟೆ ಚಿಕನ್ ತಂದೂರಿ ನೀಡದ್ದಕ್ಕೆ ಪೊಲೀಸರಿಂದ ಹೋಟೆಲ್ ಮಾಲೀಕನ ಮೇಲೆ ದೌರ್ಜನ್ಯ

ಈ ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Times Now 15 Feb 2019, 2:02 pm
ಮುಂಬಯಿ: ಉಚಿತವಾಗಿ ಚಿಕನ್ ತಂದೂರಿ ಕೊಡಲೊಪ್ಪದ ಹೋಟೆಲ್ ಮಾಲೀಕನ ಮೇಲೆ ಪೊಲೀಸ್ ಸಿಬ್ಬಂದಿ ದೌರ್ಜನ್ಯ ನಡೆಸಿದ ಘಟನೆ ಮುಂಬಯಿಯಲ್ಲಿ ನಡೆದಿದೆ. ವಾಣಿಜ್ಯ ನಗರಿಯ ಕಲ್ಯಾಣದಲ್ಲಿರುವ ಹೋಟೆಲ್ ಒಂದರಲ್ಲಿ ಈ ಘಟನೆ ನಡೆದಿದೆ.
Vijaya Karnataka Web Police 1


ಈ ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯ್ ಸುರ್ವೆ ಎಂಬುವವರಿಗೆ ಸೇರಿದ ಸ್ವಾಮಿ ಸಮರ್ಥ್‌ಗೆ ಆಗಾಗ ಬರುತ್ತಿದ್ದ ಪೊಲೀಸ್ ಸಿಬ್ಬಂದಿ ಕಿರುಕುಳ ನೀಡುತ್ತಲೇ ಇರುತ್ತಿದ್ದರು. ಕೆಲವು ದಿನಗಳ ಹಿಂದೆ ಕೆಲವು ಪೊಲೀಸ್ ಪೇದೆಗಳು ಬಂದು ಪುಕ್ಕಟ್ಟೆ ಚಿಕನ್ ತಂದೂರಿ ಬೇಡಿಕೆ ಇಟ್ಟಿದ್ದರು. ಆದರೆ ಅದಕ್ಕೊಪ್ಪದ ಸುರ್ವೆಗೆ ಅವರು ಆಗಾಗ ಕಿರುಕುಳ ನೀಡುತ್ತಲೇ ಇದ್ದರು ಎಂದು ಹೇಳಲಾಗುತ್ತಿದೆ.

ನಿಯಮಗಳ ಪ್ರಕಾರ ರಾತ್ರಿ 1.30 ವರೆಗೆ ಹೋಟೆಲ್‌ನ್ನು ತೆರೆದಿಡಬಹುದು. ಆದರೆ ಪೊಲೀಸರೊಬ್ಬರು ನನ್ನ ಹೋಟೆಲ್‌ಗೆ ನುಗ್ಗಿ ರಾತ್ರಿ 12ಗಂಟೆಗೆ ಬಾಗಿಲು ಹಾಕಿಸಿದರು. ನನ್ನ ಮೇಲೆ ಹಲ್ಲೆ ಕೂಡ ನಡೆಸಿದರು ಎಂದವರು ದೂರಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳು ಅವರ ಹೇಳಿಕೆಗೆ ಬಲ ನೀಡಿವೆ.

ಆದರೆ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿರುವ ಪೊಲೀಸರು ನಗರಾಡಳಿತದಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಸುರ್ವೆ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದಿದ್ದಾರೆ.

ನಾನು ನಿಯಮ ಉಲ್ಲಂಘಿಸಿದ್ದರೆ ನಗರಾಡಳಿತ ಕ್ರಮ ಕೈಗೊಳ್ಳಬೇಕಿತ್ತು. ವೃಥಾ ನನ್ನನ್ನು ಪೀಡಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ