ಆ್ಯಪ್ನಗರ

ಸಿಎಂ ರಾಜೀನಾಮೆಗೆ ಆಗ್ರಹಿಸಿದ ಕಮಲ್‌ ಹಾಸನ್‌

ಏಜೆನ್ಸೀಸ್‌ ಚೆನ್ನೈ ನಟ ಕಮಲ್‌ ಹಾಸನ್‌ ಮಂಗಳವಾರ ತಮಿಳುನಾಡಿನ ಆಡಳಿತಾರೂಢ ಎಐಡಿಎಂಕೆ ವಿರುದ್ಧ ಮತ್ತೊಮ್ಮೆ ಟ್ವಿಟರ್‌ನಲ್ಲಿ ಸಮರ ಸಾರಿದ್ದು, ಮುಖ್ಯಮಂತ್ರಿ ಕೆ...

ವಿಕ ಸುದ್ದಿಲೋಕ 15 Aug 2017, 10:37 pm

ಚೆನ್ನೈ : ನಟ ಕಮಲ್‌ ಹಾಸನ್‌ ಮಂಗಳವಾರ ತಮಿಳುನಾಡಿನ ಆಡಳಿತಾರೂಢ ಎಐಡಿಎಂಕೆ ವಿರುದ್ಧ ಮತ್ತೊಮ್ಮೆ ಟ್ವಿಟರ್‌ನಲ್ಲಿ ಸಮರ ಸಾರಿದ್ದು, ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಸರಣಿ ಟ್ವೀಟ್‌ಗಳ ಮೂಲಕ ''ದೈರ್ಯವಿರುವವರೆಲ್ಲ ಮುಂದೆ ಬನ್ನಿ, ಭ್ರಷ್ಟಾಚಾರದ ವಿರುದ್ಧ ಹೊಸ ಹೋರಾಟಕ್ಕೆ ಪ್ರತಿಜ್ಞೆ ಮಾಡೋಣ,'' ಎಂದು ಕರೆನೀಡಿದ್ದಾರೆ. ಉತ್ತರ ಪ್ರದೇಶದ ಆಸ್ಪತ್ರೆ ದುರಂತಕ್ಕೆ ಯೋಗಿ ಆದಿತ್ಯನಾಥರ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹಿಸಿರುವುದನ್ನು ಉಲ್ಲೇಖಿಸಿದ ಅವರು, ''ಒಬ್ಬ ರಾಜ್ಯದ ಮುಖ್ಯಮಂತ್ರಿ ತನ್ನ ರಾಜ್ಯದಲ್ಲಿ ನಡೆದ ದುರಂತ ಅಥವಾ ಭ್ರಷ್ಟಾಚಾರದ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದರೆ, ತಮಿಳುನಾಡಿನಲ್ಲೇಕೆ ಯಾವುದೇ ಪಕ್ಷ ಸಿಎಂ ರಾಜೀನಾಮೆಗೆ ಒತ್ತಾಯಿಸಿಲ್ಲ?''ಎಂದು ಪ್ರಶ್ನಿಸಿದ್ದಾರೆ.

Vijaya Karnataka Web kamal haasan virtually demands tn cms resignation
ಸಿಎಂ ರಾಜೀನಾಮೆಗೆ ಆಗ್ರಹಿಸಿದ ಕಮಲ್‌ ಹಾಸನ್‌


ಭ್ರಷ್ಟಾಚಾರದಿಂದ ಸ್ವಾತಂತ್ರ್ಯ ದೊರೆಯದ ಹೊರತು ನಾವೆಲ್ಲರೂ ಗುಲಾಮರು ಎಂದಿರುವ ಕಮಲ್‌ ಈ ನಿಟ್ಟಿನಲ್ಲಿ ಉತ್ತಮ ರಾಜ್ಯವನ್ನು ನಿರ್ಮಿಸಲು ಇಚ್ಛೆ ಇದ್ದವರು ಕೈಜೋಡಿಸಬೇಕೆಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

Kamal Haasan virtually demands TN CM's resignation

Actor Kamal Haasan today fired a fresh salvo at the ruling AIADMK in Tamil Nadu virtually calling for Chief Minister K Palaniswami's resignation over alleged corruption.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ