ಆ್ಯಪ್ನಗರ

ಹತ ಉಗ್ರ ಕಂದಹಾರ್‌ ವಿಮಾನ ಅಪಹರಣದ ಸಂಚುಕೋರನ ಮಗ

ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಸೋಮವಾರ ಹೊಡೆದುರುಳಿಸಿದ ಮೂವರು ಉಗ್ರರಲ್ಲಿ ಒಬ್ಬ 1999ರ ಕಂದಹಾರ್‌ ವಿಮಾನ ಅಪಹರಣ ಪ್ರಕರಣದ ಸಂಚುಕೋರ ಅಬ್ದುಲ್‌ ರೌಫ್‌ ಎಂಬಾತನ ಮಗ ಎಂದು ...

Vijaya Karnataka 8 Nov 2017, 7:59 am

ಶ್ರೀನಗರ/ಹೊಸದಿಲ್ಲಿ: ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಸೋಮವಾರ ಹೊಡೆದುರುಳಿಸಿದ ಮೂವರು ಉಗ್ರರಲ್ಲಿ ಒಬ್ಬ 1999ರ ಕಂದಹಾರ್‌ ವಿಮಾನ ಅಪಹರಣ ಪ್ರಕರಣದ ಸಂಚುಕೋರ ಅಬ್ದುಲ್‌ ರೌಫ್‌ ಎಂಬಾತನ ಮಗ ಎಂದು ತಿಳಿದುಬಂದಿದೆ. ಅಲ್ಲದೇ ಪುಲ್ವಾಮ ಜಿಲ್ಲೆಯಲ್ಲಿ ಹತ ಉಗ್ರರಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳಲ್ಲಿ ಅಮೆರಿಕ ತಯಾರಿತ ಎಂ4 ರೈಫಲ್‌ ಒಂದು ಸೇರಿದೆ. ಕಾಶ್ಮೀರ ಕಣಿವೆಯಲ್ಲಿ ಅಮೆರಿಕ ತಯಾರಿತ ರೈಫಲ್‌ಅನ್ನು ಉಗ್ರರು ಬಳಸಿರುವುದು ಇದೇ ಮೊದಲು ಎಂದು ಹೇಳಲಾಗಿದೆ.

ಏರ್‌ ಇಂಡಿಯಾ ವಿಮಾನವನ್ನು ಉಗ್ರರು ಅಪಹರಿಸಿ ಅದನ್ನು ಅಫಘಾನಿಸ್ತಾನದ ಕಂದಹಾರ್‌ನಲ್ಲಿ ಇಳಿಸಿ ಪ್ರಯಾಣಿಕರನ್ನು ಒತ್ತೆಯಾಗಿರಿಸಿಕೊಂಡಿದ್ದರು. ಪ್ರಕರಣ ಸುಖಾಂತ್ಯಗೊಳ್ಳಬೇಕೆಂದರೆ ಜೈಷೆ ಮೊಹಮ್ಮದ್‌ ಮುಖ್ಯಸ್ಥ ಮೌಲಾನ ಮಸೂದ್‌ ಅಜರ್‌ನನ್ನು ಬಿಡುಗಡೆಗೊಳಿಸಬೇಕೆಂದು ಅಂದಿನ ಪ್ರಧಾನಿ ವಾಜಪೇಯಿ ನೇತೃತ್ವದ ಸರಕಾರಕ್ಕೆ ಷರತ್ತು ಹಾಕಿ, ಅದರಲ್ಲಿ ಯಶಸ್ವಿಯಾಗಿದ್ದರು. ಅಜರ್‌ನ ಸಹೋದರನೇ ಅಬ್ದುಲ್‌ ರೌಫ್‌.

Vijaya Karnataka Web kandahar hijack conspirators son killed in kashmir
ಹತ ಉಗ್ರ ಕಂದಹಾರ್‌ ವಿಮಾನ ಅಪಹರಣದ ಸಂಚುಕೋರನ ಮಗ


ಪುಲ್ವಾಮಾದ ಕಾರ್ಯಚರಣೆಯಲ್ಲಿ ಸೇನೆ ಗುಂಡಿಗೆ ಬಲಿಯಾದ ಭಯೋತ್ಪಾದಕರನ್ನು ಮೆಹಮೂದ್‌ ಭಾಯ್‌, ತಲ್ಲಾ ರಶೀದ್‌ ಮತ್ತು ವಾಸಿಮ್‌ ಅಹ್ಮದ್‌ ಗೈನಿ ಎಂದು ಗುರುತಿಸಲಾಗಿದೆ. ಈ ಮೂವರ ಪೈಕಿ ತಲ್ಲಾ ರಶೀದ್‌, ಮಸೂದ್‌ ಅಜರ್‌ನ ಸಹೋದರನ ಮಗ ಎಂದು ಸ್ವತಃ ಜೈಷೆ ಮೊಹಮ್ಮದ್‌ ಸಂಘಟನೆ ಹೇಳಿಕೆ ನೀಡಿತ್ತು. ಆದರೆ ಈಗ ವಶಪಡಿಸಿಕೊಳ್ಳಲಾದ ಅಮೆರಿಕ ನಿರ್ಮಿತ ರೈಫಲ್‌ ಈ ಹೇಳಿಕೆಯನ್ನು ದೃಢಪಡಿಸಿದೆ ಎನ್ನುತ್ತಾರೆ ಪೊಲೀಸರು. ಅಂದಹಾಗೆ ಈ ರೈಫಲ್‌ಅನ್ನು ಅಮೆರಿಕ ನೇತೃತ್ವದ ನೇಟೊ ಪಡೆಗಳು ಆಫ್ಘನ್‌ ಮತ್ತು ಇರಾಕ್‌ ಯುದ್ಧದಲ್ಲಿ ವ್ಯಾಪಕವಾಗಿ ಬಳಸಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ