ಹೊಸದಿಲ್ಲಿ: ಸಿಪಿಐ ನಾಯಕ ಹಾಗೂ ಜೆಎನ್ಯೂ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಶೀಘ್ರವೇ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕನ್ಹಯ್ಯ ಅವರು ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಗುಜರಾತ್ನ ಪಕ್ಷೇತರ ಶಾಸಕ ಜಿಗ್ನೇಶ್ ಮೆವಾನಿ ಕೂಡ ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಲಾಗಿದೆ. ಒಂದು ವೇಳೆ ಈ ಇಬ್ಬರೂ ನಾಯಕರು ಕಾಂಗ್ರೆಸ್ ಸೇರದೇ ಆದಲ್ಲಿ, ಸಾಲು ಸಾಲು ಯುವ ನಾಯಕರ ರಾಜೀನಾಮೆಯಿಂದ ಸೊರಗಿರುವ ದೇಶದ ಹಳೇಯ ರಾಜಕೀಯ ಪಕ್ಷಕ್ಕೆ ಹೊಸ ಚೈತನ್ಯ ಬರಲಿದೆ.
ಕಮ್ಯನಿಷ್ಟ್ ಪಾರ್ಟಿ ಆಫ್ ಇಂಡಿಯಾದಲ್ಲಿ (ಸಿಪಿಐ) ಕನ್ಹಯ್ಯಗೆ ಉಸಿರು ಕಟ್ಟುವ ವಾತಾವರಣ ಇದ್ದು, ಹೀಗಾಗಿ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದರ ಭಾಗವಾಗಿಯೇ ಮಂಗಳವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜ, 'ಈ ಬಗ್ಗೆ ಹರಿದಾಡುತ್ತಿರುವ ಊಹಾಪೋಹ ನನ್ನ ಕಿವಿಗೆ ಬಿದ್ದಿದೆ. ಕಳೆದ ತಿಂಗಳು ನಡೆದ ಪಕ್ಷದ ರಾಷ್ಟ್ರೀಯ ಪ್ರತಿನಿಧಿಗಳ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಆ ವೇಳೆ ಅವರು ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದರು ಎಂದಷ್ಟೇ ಈಗ ನಾನು ಹೇಳಬಲ್ಲೆ' ಎಂದಿದ್ದಾರೆ.
2019ರ ಲೋಕಸಭೆ ಚುನವಣೆಯಲ್ಲಿ ಬಿಹಾರದ ಬೇಗುಸರಾಯ್ನಿಂದ ಸ್ಪರ್ಧೆ ಮಾಡಿದ್ದ ಕನ್ಹಯ್ಯ ಕುಮಾರ್ ಬಿಜೆಪಿಯ ಗಿರಿರಾಜ್ ಸಿಂಗ್ ವಿರುದ್ಧ ಸೋಲನುಭವಿಸಿದ್ದರು.
ಇನ್ನು ಕಾಂಗ್ರೆಸ್ ಸೇರುವ ಬಗ್ಗೆ ಪ್ರತಿಕ್ರಿಯೆಗೆ ಕನ್ಹಯ್ಯ ಅವರು ಅಲಭ್ಯರಾಗಿದ್ದು, ಬಿಹಾರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಲು ಅವರು ಉತ್ಸುಕಾರಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಸೇರ ಬಯಸಿದ್ದಾರೆ ಎಂದು ಗೊತ್ತಾಗಿದೆ. ಕಳೆದ ಮೂರು ದಶಕಗಳಿಂದ ಬಿಹಾರದಲ್ಲಿ ಕಾಂಗ್ರೆಸ್ನ ಪರಿಸ್ಥಿತಿ ಶೋಚನೀಯವಾಗಿದ್ದು, ಸ್ಪರ್ಧೆ ಮಾಡಿದ್ದ 70 ಸೀಟುಗಳ ಪೈಕಿ ಕೇವಲ 19 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆರ್ಜೆಡಿ ಹಾಗೂ ಸಿಪಿಐ (ಎಂಎಲ್) ಮೈತ್ರಿಕೂಟ ಅಧಿಕಾರ ಪಡೆಯಲು ವಿಫಲವಾದರೂ ಭರ್ಜರಿ ಪ್ರದರ್ಶನ ತೋರಿತ್ತು.
144 ಸೀಟುಗಳಲ್ಲಿ ಸ್ಪರ್ಧೆ ಮಾಡಿದ್ದ ಆರ್ಜೆಡಿ ಅರ್ಧಕ್ಕಿಂತ ಅಧಿಕ ಸೀಟುಗಳಲ್ಲಿ ಗೆದ್ದರೆ, 19 ಕಡೆ ಸ್ಪರ್ಧಿಸಿದ್ದ ಸಿಪಿಐ (ಎಂಎಲ್) 12 ಕಡೆ ಜಯಭೇರಿ ಬಾರಿಸಿತ್ತು.
ಏತನ್ಮಧ್ಯೆ ಗುಜರಾತ್ನ ಪಕ್ಷೇತರ ಶಾಸಕ ಜಿಗ್ನೇಶ್ ಮೆವಾನಿ ಕೂಡ ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಲಾಗಿದೆ. ಕಳೆದ ಗುಜರಾತ್ ಚುನಾವಣೆಯಲ್ಲಿ ಮೇವಾನಿ ಸ್ಪರ್ಧೆ ಮಾಡಿದ್ದ ವಡ್ಗಾಮ್ನಲ್ಲಿ ತನ್ನ ಅಭ್ಯರ್ಥಿಯನ್ನು ಹಾಕದೇ ಕಾಂಗ್ರೆಸ್ ಮೇವಾನಿ ಗೆಲುವಿಗೆ ಸಹಕಾರ ನೀಡಿತ್ತು.
ಒಂದು ಇವರಿಬ್ಬರೂ ಕಾಂಗ್ರೆಸ್ ಸೇರಿದರೆ, ಕಾಂಗ್ರೆಸ್ಗೆ ಹೊಸ ಹುರುಪು ಬರಲಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಈಗಾಗಲೇ ಜ್ಯೋತಿರಾಧಿತ್ಯ ಸಿಂಧಿಯಾ, ಸುಶ್ಮಿತಾ ದೇವ್, ಜಿತಿನ್ ಪ್ರಸಾದ, ಪ್ರಿಯಾಂಕ ಚತುರ್ವೇದಿ ಮುಂತಾದ ಯುವ ನಾಯಕರು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬೇರೆ ಬೇರೆ ಪಕ್ಷಗಳನ್ನು ಸೇರಿಕೊಂಡಿದ್ದಾರೆ.
ಕಮ್ಯನಿಷ್ಟ್ ಪಾರ್ಟಿ ಆಫ್ ಇಂಡಿಯಾದಲ್ಲಿ (ಸಿಪಿಐ) ಕನ್ಹಯ್ಯಗೆ ಉಸಿರು ಕಟ್ಟುವ ವಾತಾವರಣ ಇದ್ದು, ಹೀಗಾಗಿ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದರ ಭಾಗವಾಗಿಯೇ ಮಂಗಳವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜ, 'ಈ ಬಗ್ಗೆ ಹರಿದಾಡುತ್ತಿರುವ ಊಹಾಪೋಹ ನನ್ನ ಕಿವಿಗೆ ಬಿದ್ದಿದೆ. ಕಳೆದ ತಿಂಗಳು ನಡೆದ ಪಕ್ಷದ ರಾಷ್ಟ್ರೀಯ ಪ್ರತಿನಿಧಿಗಳ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಆ ವೇಳೆ ಅವರು ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದರು ಎಂದಷ್ಟೇ ಈಗ ನಾನು ಹೇಳಬಲ್ಲೆ' ಎಂದಿದ್ದಾರೆ.
2019ರ ಲೋಕಸಭೆ ಚುನವಣೆಯಲ್ಲಿ ಬಿಹಾರದ ಬೇಗುಸರಾಯ್ನಿಂದ ಸ್ಪರ್ಧೆ ಮಾಡಿದ್ದ ಕನ್ಹಯ್ಯ ಕುಮಾರ್ ಬಿಜೆಪಿಯ ಗಿರಿರಾಜ್ ಸಿಂಗ್ ವಿರುದ್ಧ ಸೋಲನುಭವಿಸಿದ್ದರು.
ಇನ್ನು ಕಾಂಗ್ರೆಸ್ ಸೇರುವ ಬಗ್ಗೆ ಪ್ರತಿಕ್ರಿಯೆಗೆ ಕನ್ಹಯ್ಯ ಅವರು ಅಲಭ್ಯರಾಗಿದ್ದು, ಬಿಹಾರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಲು ಅವರು ಉತ್ಸುಕಾರಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಸೇರ ಬಯಸಿದ್ದಾರೆ ಎಂದು ಗೊತ್ತಾಗಿದೆ. ಕಳೆದ ಮೂರು ದಶಕಗಳಿಂದ ಬಿಹಾರದಲ್ಲಿ ಕಾಂಗ್ರೆಸ್ನ ಪರಿಸ್ಥಿತಿ ಶೋಚನೀಯವಾಗಿದ್ದು, ಸ್ಪರ್ಧೆ ಮಾಡಿದ್ದ 70 ಸೀಟುಗಳ ಪೈಕಿ ಕೇವಲ 19 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆರ್ಜೆಡಿ ಹಾಗೂ ಸಿಪಿಐ (ಎಂಎಲ್) ಮೈತ್ರಿಕೂಟ ಅಧಿಕಾರ ಪಡೆಯಲು ವಿಫಲವಾದರೂ ಭರ್ಜರಿ ಪ್ರದರ್ಶನ ತೋರಿತ್ತು.
144 ಸೀಟುಗಳಲ್ಲಿ ಸ್ಪರ್ಧೆ ಮಾಡಿದ್ದ ಆರ್ಜೆಡಿ ಅರ್ಧಕ್ಕಿಂತ ಅಧಿಕ ಸೀಟುಗಳಲ್ಲಿ ಗೆದ್ದರೆ, 19 ಕಡೆ ಸ್ಪರ್ಧಿಸಿದ್ದ ಸಿಪಿಐ (ಎಂಎಲ್) 12 ಕಡೆ ಜಯಭೇರಿ ಬಾರಿಸಿತ್ತು.
ಏತನ್ಮಧ್ಯೆ ಗುಜರಾತ್ನ ಪಕ್ಷೇತರ ಶಾಸಕ ಜಿಗ್ನೇಶ್ ಮೆವಾನಿ ಕೂಡ ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಲಾಗಿದೆ. ಕಳೆದ ಗುಜರಾತ್ ಚುನಾವಣೆಯಲ್ಲಿ ಮೇವಾನಿ ಸ್ಪರ್ಧೆ ಮಾಡಿದ್ದ ವಡ್ಗಾಮ್ನಲ್ಲಿ ತನ್ನ ಅಭ್ಯರ್ಥಿಯನ್ನು ಹಾಕದೇ ಕಾಂಗ್ರೆಸ್ ಮೇವಾನಿ ಗೆಲುವಿಗೆ ಸಹಕಾರ ನೀಡಿತ್ತು.
ಒಂದು ಇವರಿಬ್ಬರೂ ಕಾಂಗ್ರೆಸ್ ಸೇರಿದರೆ, ಕಾಂಗ್ರೆಸ್ಗೆ ಹೊಸ ಹುರುಪು ಬರಲಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಈಗಾಗಲೇ ಜ್ಯೋತಿರಾಧಿತ್ಯ ಸಿಂಧಿಯಾ, ಸುಶ್ಮಿತಾ ದೇವ್, ಜಿತಿನ್ ಪ್ರಸಾದ, ಪ್ರಿಯಾಂಕ ಚತುರ್ವೇದಿ ಮುಂತಾದ ಯುವ ನಾಯಕರು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬೇರೆ ಬೇರೆ ಪಕ್ಷಗಳನ್ನು ಸೇರಿಕೊಂಡಿದ್ದಾರೆ.