ಆ್ಯಪ್ನಗರ

30 ಲಕ್ಷಕ್ಕಾಗಿ ಅಪಹರಣ, ಕೊಲೆಯ ಡ್ರಾಮವಾಡಿದ್ರಾ ಪೊಲೀಸರು? ಐಪಿಎಸ್‌ ಅಧಿಕಾರಿ ಅಮಾನತು!

ಉತ್ತರ ಪ್ರದೇಶ ಸರಕಾರವು ಐಪಿಎಸ್‌ ಅಧಿಕಾರಿ ಸೇರಿದಂತೆ ನಾಲ್ವರು ಪೊಲೀಸ್‌ ಸಿಬ್ಬಂದಿಯನ್ನು ಖಾಸಗಿ ಲ್ಯಾಬ್‌ನ ಟೆಕ್ನಿಷಿಯನ್‌ ಅಪಹರಣ ಮತ್ತು ಹತ್ಯೆ ಸಂಬಂಧ ಅಮಾನತುಗೊಳಿಸಿದೆ.. ಅಲ್ಲದೇ ಸೂಕ್ತ ತನಿಖೆಗೆ ಸೂಚನೆ ನೀಡಿದೆ.

TIMESOFINDIA.COM 25 Jul 2020, 7:05 am
ಕಾನ್ಪುರ: ಖಾಸಗಿ ಲ್ಯಾಬ್‌ನ ಟೆಕ್ನಿಷಿಯನ್‌ ಅಪಹರಣ ಮತ್ತು ಹತ್ಯೆ ಸಂಬಂಧ ಉತ್ತರ ಪ್ರದೇಶ ಸರಕಾರವು ಐಪಿಎಸ್‌ ಅಧಿಕಾರಿ ಸೇರಿದಂತೆ ನಾಲ್ವರು ಪೊಲೀಸ್‌ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ಸಂಜೀತ್‌ ಯಾದವ್‌ (28) ಅವರನ್ನು ಕಳೆದ ತಿಂಗಳು ದುಷ್ಕರ್ಮಿಗಳು ಅಪಹರಿಸಿದ್ದರು. ನಂತರ 30 ಲಕ್ಷ ರೂಪಾಯಿ ಒತ್ತೆ ಹಣ ನೀಡಲು ಬೇಡಿಕೆ ಇರಿಸಿದ್ದರು.
Vijaya Karnataka Web photo-77138470


ಅಪಹರಣಕಾರರು ಬೇಡಿಕೆಯಿಟ್ಟಂತೆ 30 ಲಕ್ಷ ರೂ. ಹೊಂದಿಸಿ, ಹಣ ಪಡೆಯಲು ಬರುವಾಗ ಬಂಧಿಸಲು ಪೊಲೀಸರು ಯೋಜನೆ ರೂಪಿಸಿದ್ದರು. ಪೊಲೀಸರ ಕಣ್ಣು ತಪ್ಪಿಸಿ ಜುಲೈ 13ರಂದು ಅಪಹರಣಕಾರರು 30 ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದರು. ಈಗ ಪೊಲೀಸರು ಸಂಜೀತ್‌ ಹತ್ಯೆಯಾಗಿದೆ ಎಂದು ಹೇಳುತ್ತಿದ್ದಾರೆ, ಜತೆಗೆ ಮೃತದೇಹ ಪತ್ತೆ ಮಾಡುವುದು ಕೂಡ ಅವರಿಗೆ ಸಾಧ್ಯವಾಗಿಲ್ಲ.

ಸಂಜಿತ್‌ ಕುಟುಂಬದ ಸದಸ್ಯರು ವಾರದ ಹಿಂದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿನೇಶ್‌ ಕುಮಾರ್‌ ಅವರ ನಿವಾಸದ ಎದುರು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಬಳಿಕ ಸರಕಾರವು ಬೇರೊಂದು ತಂಡದಿಂದ ತನಿಖೆಗೆ ಆದೇಶಿಸಿತ್ತು. ಈ ನಡುವೆ, ''30 ಲಕ್ಷ ರೂ. ಹೊಂದಿಸಿ ಪೊಲೀಸರಿಗೆ ನೀಡಲಾಗಿಲ್ಲ ಎಂದು ಹೇಳಿಕೆ ನೀಡುವಂತೆಯೂ ಇಲಾಖೆ ಒತ್ತಡ ಹೇರುತ್ತಿದೆ,'' ಎಂದು ಸಂಜಿತ್‌ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ