Kapil Sibal: ಕೋರ್ಟ್ನಲ್ಲಿ ಅನಿಲ್ ಅಂಬಾನಿ ಪರ ವಾದ; ಹೊರಗಡೆ ಟೀಕೆ - ಸಿಬಲ್ ನೀತಿ ಪ್ರಶ್ನಿಸಿದ ಬಿಜೆಪಿ
ಒಂದು ಕಡೆ ಪಕ್ಷದ ಪರ ರಫೇಲ್ ಡೀಲ್ನಲ್ಲಿ ಅನಿಲ್ ಅಂಬಾನಿ ಲಾಭ ಪಡೆದುಕೊಂಡಿದ್ದಾರೆ ಎಂದು ವಾದಿಸುವ ಕಾಂಗ್ರೆಸ್ ಸಂಸದ ಕಪಿಲ್ ಸಿಬಲ್, ಇನ್ನೊಂದು ಕಡೆ ಸುಪ್ರೀಂಕೋರ್ಟ್ ಹಿರಿಯ ವಕೀಲರಾಗಿ ಅದೇ ಉದ್ಯಮಿ ಪರವಾಗಿಯೇ ವಾದ ಮಾಡಿದ್ದಾರೆ. ಈ ನಿಲುವನ್ನು ಬಿಜೆಪಿ ಟೀಕೆ ಮಾಡಿದೆ.
TIMESOFINDIA.COM 13 Feb 2019, 11:01 am
ಹೈಲೈಟ್ಸ್:
- ರಫೇಲ್ ಡೀಲ್ನಲ್ಲಿ ಅನಿಲ್ ಅಂಬಾನಿ ವಿರುದ್ಧ ಕಾಂಗ್ರೆಸ್ ಆರೋಪ
- ಸುಪ್ರೀಂಕೋರ್ಟ್ನಲ್ಲಿ ಅಂಬಾನಿ ಪರ ವಾದ ಮಾಡಿದ ಕಪಿಲ್ ಸಿಬಲ್
- ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ವಿರೋಧಾಭಾಸ ಪ್ರಶ್ನಿಸಿದ ಬಿಜೆಪಿ
ಹೊಸದಿಲ್ಲಿ: ಕಾಂಗ್ರೆಸ್ ಸಂಸದ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಉದ್ಯಮಿ ಅನಿಲ್ ಅಂಬಾನಿಯನ್ನು ಟೀಕೆ ಮಾಡಿದ ದಿನವೇ ಕೋರ್ಟ್ನಲ್ಲಿ ಅವರ ಪರ ವಾದ ಮಾಡಿದ್ದಾರೆ. ಈ ರೀತಿ ವಿರೋಧಾಭಾಸಕ್ಕೆ ಬಿಜೆಪಿಯವರು ಕಪಿಲ್ ಸಿಬಲ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಫೇಲ್ ಡೀಲ್ ಬಗ್ಗೆ ಟ್ವೀಟ್ ಮಾಡಿದ ಕಪಿಲ್ ಸಿಬಲ್, ಪ್ರಧಾನಿ ಮೋದಿ ಹಾಗೂ ಅನಿಲ್ ಅಂಬಾನಿ ವಿರುದ್ಧ ಟೀಕೆ ಮಾಡಿದರು. ''ಏರ್ಬಸ್, ಫ್ರೆಂಚ್ ಸರಕಾರ, ಅನಿಲ್ ಅಂಬಾನಿಗೆ ಪ್ರಧಾನಿ ಮೋದಿ ತನ್ನ ಫ್ರಾನ್ಸ್ ಪ್ರವಾಸದ ವೇಳೆ ಅಂದರೆ ಏಪ್ರಿಲ್ 9 ರಿಂದ 11 ಏಪ್ರಿಲ್ 2015ರವರೆಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆಂದು ಮೊದಲೇ ಗೊತ್ತಿತ್ತು'' ಎಂದು ಟೀಕಿಸಿದರು.
ಆದರೆ, ಕೆಲ ನಿಮಿಷಗಳಲ್ಲೇ ಸಿಬಲ್ ಸುಪ್ರೀಂಕೋರ್ಟ್ನಲ್ಲಿ ಅಂಬಾನಿ ಪರವಾಗಿ ವಾದ ಮಾಡಿದ್ದಾರೆ. ರಿಲಯನ್ಸ್ ಕಮ್ಯೂನಿಕೇಷನ್ ಎರಿಕ್ಸನ್ ಇಂಡಿಯಾ ವಿರುದ್ಧ ಸಲ್ಇಸಿರುವ ಮಾನನಷ್ಟ ಮೊಕದ್ದಮೆ ಕೇಸ್ನಲ್ಲಿ ಅಂಬಾನಿ ಒಡೆತನದ ರಿಲಯನ್ಸ್ ಕಂಪನಿ ಪರ ವಕಾಲತ್ತು ವಹಿಸಿದ್ದಾರೆ.
ಈ ಬಗ್ಗೆ ಬಿಜೆಪಿ ವಕ್ತಾರ ಹಾಗೂ ಸುಪ್ರೀಂಕೋರ್ಟ್ ವಕೀಲ ನಳಿನ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದು, ''ಹಿರಿಯ ವಕೀಲರು ಯಾವ ವಿಚಾರದಲ್ಲಿ ಬೇಕಾದರೂ ವಾದ ಮಾಡಬಹುದು. ಆದರೆ, ಅನಿಲ್ ಅಂಬಾನಿ ವಿಚಾರದಲ್ಲಿ ಕಪಿಲ್ ಸಿಬಲ್ ವಿರೋಧಾಭಾಸ ವಕೀಲರು ಹಾಗೂ ರಾಜಕೀಯ ನಾಯಕರ ಪ್ರಾಮಾಣಿಕತೆಯ ಮಹತ್ವಗಳ ಬಗ್ಗೆ ಪ್ರಶ್ನೆ ಮೂಡುತ್ತದೆ'' ಎಂದಿದ್ದಾರೆ.
ಆದರೆ, ಇದನ್ನು ಸಮರ್ಥಿಸಿಕೊಂಡಿರುವ ಕಪಿಲ್ ಸಿಬಲ್, ರಫೇಲ್ ರಕ್ಷಣಾ ಒಪ್ಪಂದ ಹಾಗೂ ಅವರ ಪರ ವಕೀಲ ಎರಡಕ್ಕೂ ವ್ಯತ್ಯಾಸವಿದೆ. ''ನಾನು ಎರಿಕ್ಸನ್ ವಿರುದ್ದದ ಕೇಸ್ನಲ್ಲಿ ರಿಲಯನ್ಸ್ ಕಮ್ಯೂನಿಕೇಷನ್ಸ್ ಪರ ವಾದ ಮಾಡುತ್ತಿದ್ದೆ. ಅದಕ್ಕೂ ರಫೇಲ್ಗೂ ಸಂಬಂಧವಿಲ್ಲ. ಇದು ಕಾರ್ಪೊರೇಟ್ ಹೋರಾಟ ಹಾಗೂ ಅನಿಲ್ ಅಂಬಾನಿ ಎಂಡಿಯಾಗಿದ್ದಾರೆ ಅಷ್ಟೇ. ನಾನು 20 ವರ್ಷಗಳಿಂದ ಅವರ ಪರ ವಕಾಲತ್ತು ವಹಿಸುತ್ತಿದ್ದೇನೆ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲದೆ, ಕಾಂಗ್ರೆಸ್ ಸಹ ಸಿಬಲ್ರನ್ನು ಸಮರ್ಥಿಸಿಕೊಂಡಿದ್ದು, ''ಅವರ ರಾಜಕೀಯ ನಿಲುವು ಸ್ಪಷ್ಟವಾಗಿಯೇ ಇದೆ. ರಫೇಲ್ ಡೀಲ್ನಲ್ಲಿ ಭ್ರಷ್ಟಾಚಾರ ನಡೆದಿದೆ ಹಾಗೂ ಪ್ರಧಾನಿ ಇದಕ್ಕೆ ಹೊಣೆಯಾಗಿದ್ದು, ಅಂಬಾನಿ ಲಾಭ ಪಡೆದಿದ್ದಾರೆ. ಇನ್ನೊಂದೆಡೆ, ಅವರು ವಕೀಲರಾಗಿ ಎರಿಕ್ಸನ್ ವಿರುದ್ಧದ ಕೇಸ್ನಲ್ಲಿ ವಾದ ಮಾಡಿದ್ದಾರೆ. ಇದರಲ್ಲಿ ಯಾವುದೇ ವಿರೋಧಾಭಾಸವಿಲ್ಲ'' ಎಂದು ಎಐಸಿಸಿ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಆದರೆ, ಕೆಲ ನಿಮಿಷಗಳಲ್ಲೇ ಸಿಬಲ್ ಸುಪ್ರೀಂಕೋರ್ಟ್ನಲ್ಲಿ ಅಂಬಾನಿ ಪರವಾಗಿ ವಾದ ಮಾಡಿದ್ದಾರೆ. ರಿಲಯನ್ಸ್ ಕಮ್ಯೂನಿಕೇಷನ್ ಎರಿಕ್ಸನ್ ಇಂಡಿಯಾ ವಿರುದ್ಧ ಸಲ್ಇಸಿರುವ ಮಾನನಷ್ಟ ಮೊಕದ್ದಮೆ ಕೇಸ್ನಲ್ಲಿ ಅಂಬಾನಿ ಒಡೆತನದ ರಿಲಯನ್ಸ್ ಕಂಪನಿ ಪರ ವಕಾಲತ್ತು ವಹಿಸಿದ್ದಾರೆ.
ಈ ಬಗ್ಗೆ ಬಿಜೆಪಿ ವಕ್ತಾರ ಹಾಗೂ ಸುಪ್ರೀಂಕೋರ್ಟ್ ವಕೀಲ ನಳಿನ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದು, ''ಹಿರಿಯ ವಕೀಲರು ಯಾವ ವಿಚಾರದಲ್ಲಿ ಬೇಕಾದರೂ ವಾದ ಮಾಡಬಹುದು. ಆದರೆ, ಅನಿಲ್ ಅಂಬಾನಿ ವಿಚಾರದಲ್ಲಿ ಕಪಿಲ್ ಸಿಬಲ್ ವಿರೋಧಾಭಾಸ ವಕೀಲರು ಹಾಗೂ ರಾಜಕೀಯ ನಾಯಕರ ಪ್ರಾಮಾಣಿಕತೆಯ ಮಹತ್ವಗಳ ಬಗ್ಗೆ ಪ್ರಶ್ನೆ ಮೂಡುತ್ತದೆ'' ಎಂದಿದ್ದಾರೆ.
ಆದರೆ, ಇದನ್ನು ಸಮರ್ಥಿಸಿಕೊಂಡಿರುವ ಕಪಿಲ್ ಸಿಬಲ್, ರಫೇಲ್ ರಕ್ಷಣಾ ಒಪ್ಪಂದ ಹಾಗೂ ಅವರ ಪರ ವಕೀಲ ಎರಡಕ್ಕೂ ವ್ಯತ್ಯಾಸವಿದೆ. ''ನಾನು ಎರಿಕ್ಸನ್ ವಿರುದ್ದದ ಕೇಸ್ನಲ್ಲಿ ರಿಲಯನ್ಸ್ ಕಮ್ಯೂನಿಕೇಷನ್ಸ್ ಪರ ವಾದ ಮಾಡುತ್ತಿದ್ದೆ. ಅದಕ್ಕೂ ರಫೇಲ್ಗೂ ಸಂಬಂಧವಿಲ್ಲ. ಇದು ಕಾರ್ಪೊರೇಟ್ ಹೋರಾಟ ಹಾಗೂ ಅನಿಲ್ ಅಂಬಾನಿ ಎಂಡಿಯಾಗಿದ್ದಾರೆ ಅಷ್ಟೇ. ನಾನು 20 ವರ್ಷಗಳಿಂದ ಅವರ ಪರ ವಕಾಲತ್ತು ವಹಿಸುತ್ತಿದ್ದೇನೆ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲದೆ, ಕಾಂಗ್ರೆಸ್ ಸಹ ಸಿಬಲ್ರನ್ನು ಸಮರ್ಥಿಸಿಕೊಂಡಿದ್ದು, ''ಅವರ ರಾಜಕೀಯ ನಿಲುವು ಸ್ಪಷ್ಟವಾಗಿಯೇ ಇದೆ. ರಫೇಲ್ ಡೀಲ್ನಲ್ಲಿ ಭ್ರಷ್ಟಾಚಾರ ನಡೆದಿದೆ ಹಾಗೂ ಪ್ರಧಾನಿ ಇದಕ್ಕೆ ಹೊಣೆಯಾಗಿದ್ದು, ಅಂಬಾನಿ ಲಾಭ ಪಡೆದಿದ್ದಾರೆ. ಇನ್ನೊಂದೆಡೆ, ಅವರು ವಕೀಲರಾಗಿ ಎರಿಕ್ಸನ್ ವಿರುದ್ಧದ ಕೇಸ್ನಲ್ಲಿ ವಾದ ಮಾಡಿದ್ದಾರೆ. ಇದರಲ್ಲಿ ಯಾವುದೇ ವಿರೋಧಾಭಾಸವಿಲ್ಲ'' ಎಂದು ಎಐಸಿಸಿ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.