ಶ್ರೀನಗರ: ಕಾಶ್ಮೀರ ಯಾರಿಗೆ ಸೇರಬೇಕು ಎಂಬ ಬಿಕ್ಕಟ್ಟು ಭಾರತ ಮತ್ತು ಪಾಕಿಸ್ತಾನ ನಡುವಿನದ್ದು. ಇದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಬಿಕ್ಕಟ್ಟು ಕುರಿತು ಯಾವುದೇ ಥರದ ಬೆಳವಣಿಗೆ ಕಂಡುಬಂದಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಿಶ್ವಸಂಸ್ಥೆಯ ವೀಕ್ಷಕರು ಈಗಲೂ ಇದ್ದಾರೆ. ಮಿಲಿಟರಿ ತಾಕತ್ತು ಬಳಸಿ ಈ ಬಿಕ್ಕಟ್ಟು ಶಮನ ಸಾಧ್ಯವಿಲ್ಲ. ಆಜಾದ್ ಕಾಶ್ಮೀರದಲ್ಲಿನ ಜನರೊಂದಿಗೆ ಪಾಕಿಸ್ತಾನ, ಕಾಶ್ಮೀರದ ಜನರೊಂದಿಗೆ ಭಾರತ ಮಾತುಕತೆ ನಡೆಸಿದಾಗ ಮಾತ್ರ ಈ ಬಿಕ್ಕಟ್ಟು ಶಮನಗೊಳ್ಳುತ್ತದೆ ಎಂದು ಅಬ್ದುಲ್ಲಾ ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕರ್ತರ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
‘ಕಾಶ್ಮೀರ ಸಮಸ್ಯೆ ಭಾರತ-ಪಾಕ್ನದು, ಮಾತುಕತೆ ಮೂಲಕವಷ್ಟೇ ಪರಿಹಾರ’
ಆಜಾದ್ ಕಾಶ್ಮೀರದಲ್ಲಿನ ಜನರೊಂದಿಗೆ ಪಾಕಿಸ್ತಾನ, ಕಾಶ್ಮೀರದ ಜನರೊಂದಿಗೆ ಭಾರತ ಮಾತುಕತೆ ನಡೆಸಿದಾಗ ಮಾತ್ರ ಈ ಬಿಕ್ಕಟ್ಟು ಶಮನಗೊಳ್ಳುತ್ತದೆ ಎಂದು ಅಬ್ದುಲ್ಲಾ ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕರ್ತರ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
PTI 12 Jul 2019, 5:00 am