ಲಾಹೋರ್: ಕಾಶ್ಮೀರ ಜನತೆಗೆ ನೀವು ನೀಡುತ್ತಿರುವ ಸಹಕಾರವನ್ನು ಹಾಗೆಯೇ ಮುಂದುವರಿಸಿ ಎಂದು ಮುಂಬಯಿ ದಾಳಿಯ ಸೂತ್ರಧಾರ, ನಿಷೇಧಿತ 'ಜಮಾತ್-ಉದ್-ದವಾ' ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ತಾನೀಯರಿಗೆ ವಿನಂತಿಸಿಕೊಂಡಿದ್ದಾನೆ. ಶನಿವಾರ ರಮ್ಜಾನ್ ಆಚರಣೆ ಸಂದರ್ಭದಲ್ಲಿ ತನ್ನ ದೇಶಬಾಂಧವರಿಗೆ ಸಯೀದ್ ಈ ಕರೆಕೊಟ್ಟಿದ್ದಾನೆ.
ಜೆಯುಡಿ ಸಂಘಟನೆ ನಿಷೇಧಕ್ಕೊಳಗಾಗಿದ್ದರೂ ಅದರ ಮುಖ್ಯಸ್ಥನ ರಮ್ಜಾನ್ ಆಚರಣೆಗೆ ಯಾರಿಂದಲೂ ಅಡ್ಡಿಯಾಗದಿರುವುದು ಮಾತ್ರ ವಿಪರ್ಯಾಸ. ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ಬಿಗಿ ಭದ್ರತೆ ನಡುವೆ ಸಯೀದ್ ನೇತೃತ್ವದಲ್ಲಿ ಅವನ ಹಿಂಬಾಲಕರು ಈದ್ಉಲ್ ಫಿತರ್ ಆಚರಿಸಿದರು.
ಗಡಾಫಿ ಕ್ರೀಡಾಂಗಣಕ್ಕೆ ಭದ್ರತೆ ಒದಗಿಸುವುದಕ್ಕಾಗಿ ಪೊಲೀಸ್ ಸಿಬ್ಬಂದಿ ಹಾಗೂ ಸಯೀದ್ನ ಸ್ವಂತ ಭದ್ರತಾ ಸಿಬ್ಬಂದಿಯನ್ನು ಭಾರಿ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.
ಪಾಕಿಸ್ತಾನದಲ್ಲಿ ಜಮಾತ್ ಸಂಘಟನೆಯನ್ನು ನಿಷೇಧಿಸಲಾಗಿದ್ದರೂ, ಅಚ್ಚರಿ ಎಂಬಂತೆ, ಅದರ ಮುಖಂಡನಿಗೆ ಸಾರ್ವಜನಿಕ ಮೆರವಣಿಗೆ ಆಯೋಜಿಸುವುದಕ್ಕೆ, ಸಭೆ-ಸಮಾರಂಭಗಳನ್ನು ನಡೆಸುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಸಯೀದ್ ಸಾರಥ್ಯದ ಜೆಯುಡಿ ಸಂಘಟನೆಯನ್ನು 2014ರ ಜೂನ್ನಲ್ಲಿ 'ಉಗ್ರಗಾಮಿ ಸಂಘಟನೆ' ಎಂದು ಅಮೆರಿಕ ಘೋಷಿಸಿತ್ತು. ಉಗ್ರಗಾಮಿ ಚಟುವಟಿಕೆಗಳಲ್ಲಿ ಸಯೀದ್ ಪಾತ್ರ ಖಾತರಿಯಾಗಿರುವ ಹಿನ್ನೆಲೆಯಲ್ಲಿ, ಅವನ ತಲೆಗೆ ಅಮೆರಿಕ 1 ಕೋಟಿ ಡಾಲರ್ ಬಹುಮಾನವನ್ನೂ ಘೋಷಿಸಿದೆ.
ಜೆಯುಡಿ ಸಂಘಟನೆ ನಿಷೇಧಕ್ಕೊಳಗಾಗಿದ್ದರೂ ಅದರ ಮುಖ್ಯಸ್ಥನ ರಮ್ಜಾನ್ ಆಚರಣೆಗೆ ಯಾರಿಂದಲೂ ಅಡ್ಡಿಯಾಗದಿರುವುದು ಮಾತ್ರ ವಿಪರ್ಯಾಸ. ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ಬಿಗಿ ಭದ್ರತೆ ನಡುವೆ ಸಯೀದ್ ನೇತೃತ್ವದಲ್ಲಿ ಅವನ ಹಿಂಬಾಲಕರು ಈದ್ಉಲ್ ಫಿತರ್ ಆಚರಿಸಿದರು.
ಗಡಾಫಿ ಕ್ರೀಡಾಂಗಣಕ್ಕೆ ಭದ್ರತೆ ಒದಗಿಸುವುದಕ್ಕಾಗಿ ಪೊಲೀಸ್ ಸಿಬ್ಬಂದಿ ಹಾಗೂ ಸಯೀದ್ನ ಸ್ವಂತ ಭದ್ರತಾ ಸಿಬ್ಬಂದಿಯನ್ನು ಭಾರಿ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.
ಪಾಕಿಸ್ತಾನದಲ್ಲಿ ಜಮಾತ್ ಸಂಘಟನೆಯನ್ನು ನಿಷೇಧಿಸಲಾಗಿದ್ದರೂ, ಅಚ್ಚರಿ ಎಂಬಂತೆ, ಅದರ ಮುಖಂಡನಿಗೆ ಸಾರ್ವಜನಿಕ ಮೆರವಣಿಗೆ ಆಯೋಜಿಸುವುದಕ್ಕೆ, ಸಭೆ-ಸಮಾರಂಭಗಳನ್ನು ನಡೆಸುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಸಯೀದ್ ಸಾರಥ್ಯದ ಜೆಯುಡಿ ಸಂಘಟನೆಯನ್ನು 2014ರ ಜೂನ್ನಲ್ಲಿ 'ಉಗ್ರಗಾಮಿ ಸಂಘಟನೆ' ಎಂದು ಅಮೆರಿಕ ಘೋಷಿಸಿತ್ತು. ಉಗ್ರಗಾಮಿ ಚಟುವಟಿಕೆಗಳಲ್ಲಿ ಸಯೀದ್ ಪಾತ್ರ ಖಾತರಿಯಾಗಿರುವ ಹಿನ್ನೆಲೆಯಲ್ಲಿ, ಅವನ ತಲೆಗೆ ಅಮೆರಿಕ 1 ಕೋಟಿ ಡಾಲರ್ ಬಹುಮಾನವನ್ನೂ ಘೋಷಿಸಿದೆ.