ಆ್ಯಪ್ನಗರ

ಭಾರತ ಜತೆಗಿನ ಏಕೀಕರಣದಲ್ಲಿದೆ ಕಾಶ್ಮೀರಿಗರ ಕಲ್ಯಾಣ: ಮುಸ್ಲಿಂ ಉನ್ನತ ಮಂಡಳಿ

ಭಾರತದ ಜತೆ ಕಾಶ್ಮೀರ ಏಕೀಕರಣವಾದರೆ ಮಾತ್ರ ಇಲ್ಲಿನ ಅಭಿವೃದ್ಧಿ ಸಾಧ್ಯ ಎಂದು ನಿರ್ಣಯ ಹೊರಡಿಸುವ ಮೂಲಕ ಕಾಶ್ಮೀರದ ಉನ್ನತ ಮುಸ್ಲಿಂ ಸಂಘಟನೆ ಪಾಕಿಸ್ತಾನಕ್ಕೆ ತಪರಾಕಿ ನೀಡಿದೆ.

TIMESOFINDIA.COM 12 Sep 2019, 5:00 pm
ಹೊಸದಿಲ್ಲಿ: ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಭಾರತದ ಜತೆ ಏಕೀಕರಣವಾದರೆ ಮಾತ್ರ ಕಾಶ್ಮೀರದ ಅಭಿವೃದ್ಧಿ ಸಾಧ್ಯ ಎಂದು ಉನ್ನತ ಮುಸ್ಲಿಂ ಸಂಘಟನೆ ಜಾಮಿಯತ್ ಉಲಾಮಾ-ಇ-ಹಿಂದ್ (ಜೆಎಚ್‌ಯು) ನಿರ್ಣಯ ಹೊರಡಿಸಿದೆ.
Vijaya Karnataka Web kashmir


ಸಂಘಟನೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಪಾಕಿಸ್ತಾನಕ್ಕೆ ಭಾರೀ ವಿರೋಧ ಎದುರಾಗಿದೆ.

ಪಟ್ಟಭದ್ರ ಹಿತಾಸಕ್ತಿಗಳು ಮತ್ತು ನೆರೆಯ ದೇಶದ ದುಷ್ಟ ಶಕ್ತಿಗಳು ಇಲ್ಲಿನ ಅಮಾಯಕ ಜನರನ್ನು ಕತ್ತಿ, ಗುರಾಣಿಗಳಂತೆ ಬಳಸಿಕೊಳ್ಳುವ ಮೂಲಕ ಕಾಶ್ಮೀರದ ವಾತಾವರಣ ಹಾಳು ಮಾಡುತ್ತಿವೆ ಎಂದು ಜೆಎಚ್‌ಯು ವಾಗ್ದಾಳಿ ನಡೆಸಿದೆ.

ಕಾಶ್ಮೀರಿಗಳ ಆಸೆ, ಆಕಾಂಕ್ಷೆ, ಆತ್ಮ ಗೌರವ ಮತ್ತು ಸಾಂಸ್ಕೃತಿಕ ಗುರುತು ಸೇರಿದಂತೆ ಇಲ್ಲಿಯ ಜನರ ಸ್ವಾತಂತ್ರ್ಯ ನಮಗೆ ಮುಖ್ಯ. ಭಾರತ ಜತೆಗಿನ ಏಕೀಕರಣದಲ್ಲಿ ಕಾಶ್ಮೀರಿಗಳ ಕಲ್ಯಾಣ ಇದೆ ಎಂದು ಸಂಘ ಅಭಿಪ್ರಾಯ ಪಟ್ಟಿದೆ.

ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳ ಹೋರಾಟ ಬೆಂಬಲಿಸಲು ಸಾಧ್ಯವೇ ಇಲ್ಲ ಎಂದು ಒತ್ತಿ ಹೇಳಿರುವ ಜೆಎಚ್‌ಯು, ಇಂಥ ಹೋರಾಟಗಳು ಭಾರತಕ್ಕೆ ಮಾತ್ರವಲ್ಲ, ಕಾಶ್ಮೀರದ ಜನತೆಗೂ ಹಾನಿಕಾರ ಎಂದು ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ