ಆ್ಯಪ್ನಗರ

370ನೇ ವಿಧಿ ರದ್ದತಿಗೆ ಹಿರಿಯರ ಬೆಂಬಲ, ಕಾಂಗ್ರೆಸ್ ಕುಟುಂಬಕ್ಕೆ ನುಂಗಲಾರದ ತುತ್ತು

ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದುಪಡಿಸುವ ಮೂಲಕ ನೆಹರೂ ಆಡಳಿತ ಅಂದು ಮಾಡಿದ್ದ ಐತಿಹಾಸಿಕ ಪ್ರಮಾದವನ್ನು ಮೋದಿ ಸರಕಾರ ಈಗ ಸರಿಪಡಿಸಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ದ್ವಿವೇದಿ ಹೇಳಿದ್ದಾರೆ. ಅವರನ್ನೇ ಅನುಸರಿಸಿ ಇನ್ನೂ ಹಲವು ಹಿರಿಯ ಕಾಂಗ್ರೆಸಿಗರು ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಕಾಂಗ್ರೆಸ್ ವರಿಷ್ಠರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Vijaya Karnataka Web 6 Aug 2019, 12:49 pm
ಹೊಸದಿಲ್ಲಿ: 370ನೇ ವಿಧಿ ರದ್ದಾಗಿ ಜಮ್ಮು-ಕಾಶ್ಮೀರದ ಏಕೀಕರಣ ಪೂರ್ಣಗೊಂಡಿರುವಂತೆಯೇ ಕಾಂಗ್ರೆಸ್‌ನಲ್ಲಿ ಭಾರೀ ಒಡಕು ಕಾಣಿಸಿಕೊಂಡಿದೆ.
Vijaya Karnataka Web Janardhan Dwivedi


ದೀಪೇಂದರ್ ಹೂಡಾ, ಜನಾರ್ದನ ದ್ವಿವೇದಿ ಸೇರಿದಂತೆ ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ಸರಕಾರದ ನಿರ್ಧಾರವನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಗುಲಾಂ ನಬಿ ಆಜಾದ್, ಪಿ. ಚಿದಂಬರಂ ಮುಂತಾದ ನಾಯಕರು 370ನೇ ವಿಧಿ ರದ್ದತಿಯನ್ನು ಪ್ರಶ್ನಿಸಿ ಕಾಂಗ್ರೆಸ್‌ ವರಿಷ್ಠರ ನಿಲುವನ್ನು ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯರಲ್ಲೂ ತೀವ್ರ ಒಡಕು ಕಾಣಿಸಿಕೊಂಡಿದೆ. ನೆಹರೂ ಆಡಳಿತದಲ್ಲಿ ಮಾಡಿದ ಐತಿಹಾಸಿಕ ಪ್ರಮಾದವನ್ನು ಈಗ ಮೋದಿ ಸರಕಾರ ಸರಿಪಡಿಸಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ದ್ವಿವೇದಿ ಪ್ರತಿಪಾದಿಸಿದ್ದಾರೆ.

ಜಮ್ಮು-ಕಾಶ್ಮೀರ ಪುನಾರಚನೆ ವಿಧೇಯಕ ಲೋಕಸಭೆಯಲ್ಲಿ ಮಂಡಿಸಿ ಕಾಂಗ್ರೆಸ್‌ಗೆ ಝಾಡಿಸಿದ ಅಮಿತ್ ಶಾ


ಇನ್ನೊಬ್ಬ ಹಿರಿಯ ನಾಯಕ ದೀಪೇಂದರ್ ಹೂಡಾ ಅವರೂ ಸರಕಾರದ ನಿಲುವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಇದು ಕಾಂಗ್ರೆಸ್ ವರಿಷ್ಠರಿಗೆ ತೀವ್ರ ಮುಜುಗರ ತಂದಿದೆ.

370ನೇ ವಿಧಿ ರದ್ದಿಗೆ ವಿರೋಧ: ಪಕ್ಷ ತ್ಯಜಿಸಿದ ಕಾಂಗ್ರೆಸ್ ನಾಯಕ

ಸಾರ್ವಜನಿಕ ಅಭಿಪ್ರಾಯಕ್ಕೆ ವಿರುದ್ಧವಾಗಿ ಹೋದರೆ ಭವಿಷ್ಯ ಕರಾಳ ಎಂದು ಅರಿತ ಕಾಂಗ್ರೆಸ್ ನಾಯಕರು 370ನೇ ವಿಧಿ ರದ್ದತಿಯನ್ನು ಬೆಂಬಲಿಸುತ್ತಿದ್ದಾರೆ. ಆದರೆ ನೆಹರೂ-ಗಾಂಧಿ ಕುಟುಂಬದ ಹೊಗಳುಭಟರಂತೆ ವರ್ತಿಸುವ ನಾಯಕರು ಮಾತ್ರ 370ನೇ ವಿಧಿಯ ರದ್ದತಿಯನ್ನು ವಿರೋಧಿಸುತ್ತಿದ್ದಾರೆ.

ನಿನ್ನೆ ರಾಜ್ಯಸಭೆಯಲ್ಲಿ ಗೃಹಸಚಿವ ಅಮಿತ್ ಶಾ ಅವರು ವಿಧೇಯಕ ಮಂಡಿಸಿದ ಕೂಡಲೇ ಪಿಡಿಪಿ ಸದಸ್ಯರು ಸಂವಿಧಾನದ ಪ್ರತಿಯನ್ನು ಹರಿದು ಹಾಕಿದರು. ಕೂಡಲೇ ಅವರನ್ನು ಸದನದಿಂದ ಉಚ್ಚಾಟಿಸಲಾಯಿತು. ಆದರೆ ಈ ವಿಷಯವನ್ನು ಖಂಡಿಸುತ್ತಲೇ ಮಾತನಾಡಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್‌ ಮಾತ್ರ, ಸಂವಿಧಾನವನ್ನು ಬಿಜೆಪಿ ನಾಶಪಡಿಸಿದೆ ಎಂದು ಬಿಂಬಿಸಲು ಯತ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ