ಆ್ಯಪ್ನಗರ

ಕರುಳಿನ ಕರೆಗೆ ಕರಗಿದ ಕಾಶ್ಮೀರಿ ಉಗ್ರ ಮನೆಗೆ

'ಮನೆಗೆ ಮರಳಿ ಬಾ' ಎಂಬ ತಾಯಿಯ ಮನವಿಗೆ ಓಗೊಟ್ಟು ಉಗ್ರಗಾಮಿಯಾಗಲು ಹೊರಟಿದ್ದ ಕಾಶ್ಮೀರಿ ಯುವಕನೊಬ್ಬ ಹಿಂಸಾಚಾರದ ಹಾದಿ ತೊರೆದು ಮನೆಗೆ ಮರಳಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

Vijaya Karnataka Web 30 Mar 2018, 10:08 am
ಶ್ರೀನಗರ: 'ಮನೆಗೆ ಮರಳಿ ಬಾ' ಎಂಬ ತಾಯಿಯ ಮನವಿಗೆ ಓಗೊಟ್ಟು ಉಗ್ರಗಾಮಿಯಾಗಲು ಹೊರಟಿದ್ದ ಕಾಶ್ಮೀರಿ ಯುವಕನೊಬ್ಬ ಹಿಂಸಾಚಾರದ ಹಾದಿ ತೊರೆದು ಮನೆಗೆ ಮರಳಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
Vijaya Karnataka Web kashmir youth shuns militancy returns home after child appeal
ಕರುಳಿನ ಕರೆಗೆ ಕರಗಿದ ಕಾಶ್ಮೀರಿ ಉಗ್ರ ಮನೆಗೆ


ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ಶೇಶ ಪಾಲ್‌ ವೈದ್‌ ಗುರುವಾರ ಈ ಘೋಷಣೆ ಹೊರಡಿಸಿದ್ದಾರೆ. ಆದರೆ, ಆ ಉಗ್ರಗಾಮಿ ಹಾಗೂ ಆತನ ಕುಟುಂಬದ ಬಗ್ಗೆ ಅವರು ಗುಟ್ಟು ಬಿಟ್ಟುಕೊಟ್ಟಿಲ್ಲ.

''ಭಯೋತ್ಪಾದನೆ ಹಾದಿ ತೊರೆಯುವಂತೆ ಮತ್ತೊಬ್ಬ ತಾಯಿ ಮಾಡಿಕೊಂಡ ಮನವಿಗೆ ಮಗನಿಂದ ಉತ್ತಮ ಸ್ಪಂದನೆ ದೊರೆತಿದೆ. ಅವನ ಕುಟುಂಬಕ್ಕೆ ದೇವರು ಹರಸಲಿ ಮತ್ತು ಉಳಿದವರಿಗೂ ಅದೇ ದಾರಿ ತೋರಿಸಲಿ,'' ಎಂದು ವೈದ್‌ ಟ್ವೀಟ್‌ ಮಾಡಿದ್ದಾರೆ.

ಕಾಶ್ಮೀರಿ ಮಹಿಳೆ ಮೈಮೂನಾ ಮುಷ್ತಾಕ್‌ ಬುಧವಾರ ಶ್ರೀನಗರದ ಪ್ರೆಸ್‌ ಎನ್‌ಕ್ಲೇವ್‌ಗೆ ಆಗಮಿಸಿ ಕಿಕ್ಕಿರಿದು ನೆರೆದಿದ್ದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಾ, ತಮ್ಮ ಮಗನಿಗೆ ಮನೆಗೆ ಮರಳುವಂತೆ ಕರೆ ನೀಡಿದ್ದರು.

ಆಕೆಯ ಮಗ 19 ವರ್ಷದ ಫಾಹದ್‌ ಮುಷ್ತಾಕ್‌ ವಾಜಾ ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದ. ಆದರೆ, ಕಳೆದ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಆತನ ಫೋಟೊ ಅಪ್‌ಲೋಡ್‌ ಆಗಿತ್ತು. ಫೋಟೊ ಜತೆ, 'ವಾಜಾ ಲಷ್ಕರೆ ತಯ್ಬಾ ಸಂಘಟನೆಗೆ ಸೇರ್ಪಡೆಗೊಂಡಿದ್ದಾನೆ' ಎಂಬ ಸಂದೇಶ ಬೇರೆ ಲಗತ್ತಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ