ಕಾಶ್ಮೀರಿ ಪಂಡಿತರನ್ನು ಕಾಡುತ್ತಿದೆ ಉಗ್ರ ಭೀತಿ: 1990ರ ಪರಿಸ್ಥಿತಿಯೇ ಈಗಲೂ ಇದೆ..?
ಪಂಡಿತರ ಮೇಲೆ ಉಗ್ರರ ಕೆಂಗಣ್ಣು ಬಿದ್ದಿರುವುದರಿಂದ ಸರಕಾರಿ ಉದ್ಯೋಗದಲ್ಲಿರುವ ಪಂಡಿತರನ್ನು ಸುರಕ್ಷಿತ ಸ್ಥಳಕ್ಕೆ ಅಥವಾ ತವರು ಗ್ರಾಮಕ್ಕೆ ಕಳುಹಿಸಲಾಗುತ್ತಿದೆ. ಇಷ್ಟೆಲ್ಲ ಬೆಳವಣಿಗೆಗಳು ಸರಕಾರಿ ನೌಕರಿಯಲ್ಲಿರುವ ಪಂಡಿತರು ಮಾತ್ರವಲ್ಲ, ಇಡೀ ಪಂಡಿತ ಸಮುದಾಯವನ್ನೇ ಚಿಂತೆಗೀಡು ಮಾಡಿದೆ. ಇಂತಹ ದಾಳಿಗಳು, ಆಕ್ರಮಣಗಳು ಮುಂದೆಯೂ ನಡೆಯುವ ಭೀತಿ ಇರುವುದರಿಂದ ಸಾವಿರಾರು ಯುವಕರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಪಂಡಿತರನ್ನೇ ಗುರಿಯಾಗಿಸಿ ಉಗ್ರರು ದಾಳಿ ಮಾಡುತ್ತಿದ್ದು, ಮೇ 12 ರಂದು ಸರಕಾರಿ ನೌಕರ ರಾಹುಲ್ ಭಟ್ ಅವರನ್ನು ಹತ್ಯೆ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಹೈಲೈಟ್ಸ್:
- ಇದುವರೆಗೆ ಸಾವಿರಾರು ಪಂಡಿತರು ಸರಕಾರಿ ಉದ್ಯೋಗ ಪಡೆದಿದ್ದಾರೆ
- ಸರ್ಕಾರಿ ಉದ್ಯೋಗಿ ರಾಹುಲ್ ಭಟ್ ಅವರನ್ನು ಕಚೇರಿಯಲ್ಲಿಯೇ ಉಗ್ರರು ಹತ್ಯೆಗೈದಿದ್ದಾರೆ
- ಸಾವಿರಾರು ಸರಕಾರಿ ನೌಕರರನ್ನು ಸುರಕ್ಷಿತ ಅಥವಾ ಅವರ ಸ್ವಗ್ರಾಮಗಳಿಗೆ ಸ್ಥಳಾಂತರಿಸಲಾಗುತ್ತಿದೆ
ಶ್ರೀನಗರ: ಜಮ್ಮು - ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದಾಗಿದೆ. ಕಾಶ್ಮೀರಿ ಪಂಡಿತರು ಮರಳಿ ಕಣಿವೆಗೆ ಬರಲು ಕೇಂದ್ರ ಸರಕಾರವೂ ಕ್ರಮ ತೆಗೆದುಕೊಳ್ಳುತ್ತಿದೆ. ಎನ್ಡಿಎ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಾಶ್ಮೀರದಲ್ಲಿ ಉಗ್ರರನ್ನೂ ಹೆಚ್ಚಿನ ಪ್ರಮಾಣದಲ್ಲಿ ಸದೆ ಬಡಿಯಲಾಗಿದೆ. ಹೀಗೆ, ಕಣಿವೆಯ ಚಹರೆ ಬದಲಾಗುತ್ತಿದ್ದರೂ, ಕಾಶ್ಮೀರಿ ಪಂಡಿತರಿಗೆ ಮಾತ್ರ ಕಣಿವೆ ಎಂಬುದು ಈಗಲೂ ದುಃಸ್ವಪ್ನವೇ ಆಗಿದೆ. ಅದರಲ್ಲೂ, 1990ರ ದಶಕದಲ್ಲಿ ಇದ್ದ ಭೀತಿ, ಪರಿಸ್ಥಿತಿಯೇ ಈಗಲೂ ಇದೆ ಎಂದು ಪಂಡಿತರು ಅಳಲು ತೋಡಿಕೊಂಡಿದ್ದಾರೆ. ಪಂಡಿತರನ್ನೇ ಗುರಿಯಾಗಿಸಿ ಉಗ್ರರು ದಾಳಿ ಮಾಡುತ್ತಿದ್ದು, ಮೇ 12 ರಂದು ಸರಕಾರಿ ನೌಕರ ರಾಹುಲ್ ಭಟ್ ಅವರನ್ನು ಹತ್ಯೆ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಪಂಡಿತರ ಮೇಲೆ ಉಗ್ರರ ಕೆಂಗಣ್ಣು ಬಿದ್ದಿರುವುದರಿಂದ ಸರಕಾರಿ ಉದ್ಯೋಗದಲ್ಲಿರುವ ಪಂಡಿತರನ್ನು ಸುರಕ್ಷಿತ ಸ್ಥಳಕ್ಕೆ ಅಥವಾ ತವರು ಗ್ರಾಮಕ್ಕೆ ಕಳುಹಿಸಲಾಗುತ್ತಿದೆ. ಇಷ್ಟೆಲ್ಲ ಬೆಳವಣಿಗೆಗಳು ಸರಕಾರಿ ನೌಕರಿಯಲ್ಲಿರುವ ಪಂಡಿತರು ಮಾತ್ರವಲ್ಲ, ಇಡೀ ಪಂಡಿತ ಸಮುದಾಯವನ್ನೇ ಚಿಂತೆಗೀಡು ಮಾಡಿದೆ. ಇಂತಹ ದಾಳಿಗಳು, ಆಕ್ರಮಣಗಳು ಮುಂದೆಯೂ ನಡೆಯುವ ಭೀತಿ ಇರುವುದರಿಂದ ಸಾವಿರಾರು ಯುವಕರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಸಾವಿರಾರು ನೌಕರರ ಸ್ಥಳಾಂತರ: ಕಾಶ್ಮೀರಿ ಪಂಡಿತರಿಗಾಗಿ ಜಾರಿಗೆ ತಂದ ಪ್ರಧಾನ ಮಂತ್ರಿ ಪರಿಹಾರ ಹಾಗೂ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಇದುವರೆಗೆ ಸಾವಿರಾರು ಪಂಡಿತರು ಸರಕಾರಿ ಉದ್ಯೋಗ ಪಡೆದಿದ್ದು, ಇದೇ ರೀತಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ರಾಹುಲ್ ಭಟ್ ಅವರನ್ನು ಕಚೇರಿಯಲ್ಲಿಯೇ ಉಗ್ರರು ಹತ್ಯೆಗೈದಿದ್ದಾರೆ. ಹಾಗಾಗಿ ಜಮ್ಮು - ಕಾಶ್ಮೀರ ಶಿಕ್ಷಣ ಇಲಾಖೆಯು ಸಾವಿರಾರು ಸರಕಾರಿ ನೌಕರರನ್ನು ಸುರಕ್ಷಿತ ಅಥವಾ ಅವರ ಸ್ವಗ್ರಾಮಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಈಗಾಗಲೇ 50ಕ್ಕೂ ಹೆಚ್ಚು ನೌಕರರನ್ನು ಸ್ಥಳಾಂತರ ಮಾಡಲಾಗಿದೆ. ಆದರೆ, ಸರಕಾರಿ ಉದ್ಯೋಗದಲ್ಲಿರುವ ಪಂಡಿತರನ್ನು ಸ್ಥಳಾಂತರ ಮಾಡುವುದು ತಾತ್ಕಾಲಿಕ ಪರಿಹಾರವಾಗಿದ್ದು, ಪಂಡಿತರನ್ನು ಗುರಿಯಾಗಿಸಿ ಮಾಡುವ ದಾಳಿಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಜನ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಇದಲ್ಲದೆ, 'ನವ ಕಾಶ್ಮೀರ' ಕನಸು ಬಿತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಂಡಿತರ ರಕ್ಷಣೆಗಾಗಿ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ಪ್ರಶ್ನೆ, ಕುತೂಹಲ ಮೂಡಿದೆ.
ಪಂಡಿತರ ಮೇಲೆ ಉಗ್ರರ ಕೆಂಗಣ್ಣು ಬಿದ್ದಿರುವುದರಿಂದ ಸರಕಾರಿ ಉದ್ಯೋಗದಲ್ಲಿರುವ ಪಂಡಿತರನ್ನು ಸುರಕ್ಷಿತ ಸ್ಥಳಕ್ಕೆ ಅಥವಾ ತವರು ಗ್ರಾಮಕ್ಕೆ ಕಳುಹಿಸಲಾಗುತ್ತಿದೆ. ಇಷ್ಟೆಲ್ಲ ಬೆಳವಣಿಗೆಗಳು ಸರಕಾರಿ ನೌಕರಿಯಲ್ಲಿರುವ ಪಂಡಿತರು ಮಾತ್ರವಲ್ಲ, ಇಡೀ ಪಂಡಿತ ಸಮುದಾಯವನ್ನೇ ಚಿಂತೆಗೀಡು ಮಾಡಿದೆ. ಇಂತಹ ದಾಳಿಗಳು, ಆಕ್ರಮಣಗಳು ಮುಂದೆಯೂ ನಡೆಯುವ ಭೀತಿ ಇರುವುದರಿಂದ ಸಾವಿರಾರು ಯುವಕರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಸಾವಿರಾರು ನೌಕರರ ಸ್ಥಳಾಂತರ: ಕಾಶ್ಮೀರಿ ಪಂಡಿತರಿಗಾಗಿ ಜಾರಿಗೆ ತಂದ ಪ್ರಧಾನ ಮಂತ್ರಿ ಪರಿಹಾರ ಹಾಗೂ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಇದುವರೆಗೆ ಸಾವಿರಾರು ಪಂಡಿತರು ಸರಕಾರಿ ಉದ್ಯೋಗ ಪಡೆದಿದ್ದು, ಇದೇ ರೀತಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ರಾಹುಲ್ ಭಟ್ ಅವರನ್ನು ಕಚೇರಿಯಲ್ಲಿಯೇ ಉಗ್ರರು ಹತ್ಯೆಗೈದಿದ್ದಾರೆ. ಹಾಗಾಗಿ ಜಮ್ಮು - ಕಾಶ್ಮೀರ ಶಿಕ್ಷಣ ಇಲಾಖೆಯು ಸಾವಿರಾರು ಸರಕಾರಿ ನೌಕರರನ್ನು ಸುರಕ್ಷಿತ ಅಥವಾ ಅವರ ಸ್ವಗ್ರಾಮಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಈಗಾಗಲೇ 50ಕ್ಕೂ ಹೆಚ್ಚು ನೌಕರರನ್ನು ಸ್ಥಳಾಂತರ ಮಾಡಲಾಗಿದೆ. ಆದರೆ, ಸರಕಾರಿ ಉದ್ಯೋಗದಲ್ಲಿರುವ ಪಂಡಿತರನ್ನು ಸ್ಥಳಾಂತರ ಮಾಡುವುದು ತಾತ್ಕಾಲಿಕ ಪರಿಹಾರವಾಗಿದ್ದು, ಪಂಡಿತರನ್ನು ಗುರಿಯಾಗಿಸಿ ಮಾಡುವ ದಾಳಿಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಜನ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಇದಲ್ಲದೆ, 'ನವ ಕಾಶ್ಮೀರ' ಕನಸು ಬಿತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಂಡಿತರ ರಕ್ಷಣೆಗಾಗಿ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ಪ್ರಶ್ನೆ, ಕುತೂಹಲ ಮೂಡಿದೆ.