ಆ್ಯಪ್ನಗರ

ನಮ್ಮನ್ನು ಯುದ್ಧ ಕೈದಿಗಳಂತೆ ನಡೆಸಿಕೊಳ್ಳಲಾಗುತ್ತಿದೆ: ಮುಫ್ತಿ ಮಗಳಿಂದ ಅಮಿತ್‌ ಶಾಗೆ ಸಂದೇಶ

ಕಾಶ್ಮೀರದ ಮಾಜಿ ಸಿಎಂ ಮೆಹಬೂಬ ಮುಫ್ತಿ ಪುತ್ರಿ ಇಲ್ತಿಜಾ ಜಾವೇದ್‌, ತಮ್ಮನ್ನು ಗೃಹ ಬಂಧನದಲ್ಲಿರಿಸಲಾಗಿತ್ತು, ಜೀವ ಬೆದರಿಕೆ ಹಾಕಾಗಿದೆ ಎಂದು ಗೃಹಸಚಿವ ಅಮಿತ್‌ ಶಾಗೆ ವಾಯ್ಸ್‌ ಮೆಸೇಜ್‌ ಕಳುಹಿಸಿದ್ದಾರೆ.

Multiple Agencies 16 Aug 2019, 4:20 pm
ಶ್ರೀನಗರ: ನಮ್ಮನ್ನು ಗೃಹ ಬಂಧನದಲ್ಲಿಡಲಾಗಿದೆ ಎಂದು ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬ ಮುಫ್ತಿ ಅವರ ಪುತ್ರಿ ಗೃಹಸಚಿವ ಅಮಿತ್‌ ಶಾಗೆ 2ನೇ ಬಾರಿಗೆ ಪತ್ರ ಬರೆದಿದ್ದಾರೆ.
Vijaya Karnataka Web mufti


ಕಾಶ್ಮೀರದ ಜನರನ್ನು ಪ್ರಾಣಿಗಳಂತೆ ಪಂಜರದಲ್ಲಿಟ್ಟಿದ್ದಾರೆ. ಅಲ್ಲದೆ ಜೀವ ಬೆದರಿಕೆ ಒಡ್ಡಿದ್ದಾರೆ. ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಮೆಹಬೂಬ ಮುಫ್ತಿ ಪುತ್ರಿ ಇಲ್ತಿಜಾ ಜಾವೇದ್‌ ಪತ್ರದಲ್ಲಿ ತಿಳಿಸಿದ್ದಾರೆ.

ರಾಷ್ಟ್ರಾದ್ಯಂತ ಎಲ್ಲರೂ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದರೆ, ಕಾಶ್ಮೀರದಲ್ಲಿ ಮಾತ್ರ ಜನರನ್ನು ಬಂಧನದಲ್ಲಿರಿಸಲಾಗಿದೆ. ಜನರ ಸಾಮಾನ್ಯ ಹಕ್ಕುಗಳನ್ನೂ ಕಸಿದುಕೊಳ್ಳಲಾಗಿದೆ. ತಮ್ಮ ಮನೆಗೆ ಭೇಟಿ ನೀಡಲು ಬಂದಿದ್ದ ಅನೇಕರನ್ನು ಗೇಟ್‌ನಿಂದಲೇ ವಾಪಸ್‌ ಕಳುಹಿಸಲಾಗಿದ್ದು, ನಮ್ಮನ್ನು ಮನೆಯಿಂದ ಹೊರಗೆ ಹೋಗಲೂ ಅವಕಾಶ ನೀಡುತ್ತಿಲ್ಲ ಎಂದು ಇಲ್ಜಿಜಾ ಆರೋಪಿಸಿದ್ದಾರೆ.

ಕಹಿ ಸತ್ಯವನ್ನು ಹೇಳಿದ್ದಕ್ಕಾಗಿ ನಮ್ಮನ್ನು ಯುದ್ಧ ಕೈದಿಗಳಂತೆ ನೋಡಿಕೊಳ್ಳಲಾಗುತ್ತಿದೆ. ಇನ್ನೊಮ್ಮೆ ನಾನು ವಿರುದ್ಧವಾಗಿ ಮಾತನಾಡಿದ್ದೇ ಆದಲ್ಲಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಜೀವ ಬೆದರಿಕೆಯೂ ಹಾಕಲಾಗಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶದಲ್ಲಿ ಮಾತನಾಡುವ ಹಕ್ಕೇ ಇಲ್ಲ ಎಂಬುದನ್ನು ಗ್ರಹಿಸುವುದೂ ಕಷ್ಟಕರ ಎಂದು ಇಲ್ತಿಜಾ ಜಾವೇದ್‌ ವಾಯ್ಸ್‌ ನೋಟ್‌ ಸಹಿತ ಸಂದೇಶ ಹಾಗೂ ಪತ್ರವನ್ನು ರವಾನಿಸಿದ್ದಾರೆ.

ಇಲ್ಲಿನ ವಾತಾವರಣ ಅತ್ಯಂತ ಭಯ ಹುಟ್ಟಿಸುವಂತಿದ್ದು, ಜೀವ ಬೆದರಿಕೆ ಇದೆ. ಕಾಶ್ಮೀರದಲ್ಲಿ ನಿರ್ಣಯ ಹಾಗೂ ಪರಿಸ್ಥಿತಿಯ ವಿರುದ್ಧ ಮಾತನಾಡಿದವರ ಸ್ಥಿತಿಯೂ ಇದೇ ರೀತಿ ಇದೆ ಎಂದು ಇಲ್ತಿಜಾ ಹೇಳಿದ್ದಾರೆ.
ಕಳೆದ ವಾರ ಬಿಡುಗಡೆ ಮಾಡಿದ್ದ ಮೊದಲ ಆಡಿಯೋ ಸಂದೇಶದಲ್ಲಿ, ತನ್ನ ತಾಯಿಗೆ ಕಾನೂನು ಪ್ರಕಾರ ವಕೀಲರನ್ನು ಭೇಟಿಯಾಗಲೂ ಅವಕಾಶ ನೀಡಲಾಗುತ್ತಿಲ್ಲ ಎಂದು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ