ಆ್ಯಪ್ನಗರ

ಕಠುವಾ ಪ್ರಕರಣ ಸಿಬಿಐಗೆ ವರ್ಗಾವಣೆ; ಸುಪ್ರೀಂ ತೀರ್ಮಾನ ಇಂದು

ಕಠುವಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ವಿಚಾರಣೆ ನಡೆಯಲಿದೆ.

Vijaya Karnataka Web 7 May 2018, 5:30 am
ಹೊಸದಿಲ್ಲಿ: ಕಠುವಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ವಿಚಾರಣೆ ನಡೆಯಲಿದೆ. ಜತೆಗೆ, ಪ್ರಕರಣದ ವಿಚಾರಣೆಯನ್ನು ಚಂಡೀಗಢಕ್ಕೆ ಸ್ಥಳಾಂತರಿಸಿ ಸಿಬಿಐ ತನಿಖೆಗೊಪ್ಪಿಸುವಂತೆ ಸಲ್ಲಿಸಲಾದ ಅರ್ಜಿಯ ವಿಚಾರಣೆಯೂ ನಡೆಯಲಿದೆ.
Vijaya Karnataka Web supreme court


ವಿಚಾರಣೆಯನ್ನು ಸೋಮವಾರದ ತನಕ ಮುಂದೂಡಿದ್ದ ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ಸಮಿತಿಯು, ಈ ನಿಟ್ಟಿನಲ್ಲಿ ಸಂತ್ರಸ್ತೆಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಕೈಗೆತ್ತಿಕೊಳ್ಳಲಿದೆ.

ಅಲ್ಪಸಂಖ್ಯಾತ ಅಲೆಮಾರಿ ಸಮುದಾಯಕ್ಕೆ ಸೇರಿದ 8 ವರ್ಷದ ಬಾಲಕಿ ಕಠುವಾ (ಜಮ್ಮು ವಲಯ) ಹತ್ತಿರದ ಗ್ರಾಮವೊಂದರಲ್ಲಿರುವ ತನ್ನ ಮನೆಯ ಸಮೀಪವೇ ಜನವರಿ 10ರಂದು ಕಣ್ಮರೆಯಾಗಿದ್ದಳು. ಒಂದು ವಾರದ ನಂತರ ಅದೇ ಪ್ರದೇಶದಲ್ಲಿ ಆಕೆಯ ಶವ ಪತ್ತೆಯಾಗಿತ್ತು.

ನ್ಯಾಯೋಚಿತ ವಿಚಾರಣೆಯ ಕೊರತೆಯ ಸಾಧ್ಯತೆಗಳ ಹಿನ್ನೆಲೆಯಲ್ಲಿ ಪ್ರಕರಣವನ್ನು ಸ್ಥಳೀಯ ನ್ಯಾಯಾಲಯದಿಂದ ಬೇರೆಡೆಗೆ ವರ್ಗಾಯಿಸುವುದಾಗಿ ಸುಪ್ರೀಂ ಕೋರ್ಟ್‌ ಕಟು ಎಚ್ಚರಿಕೆ ನೀಡಿತ್ತು. ಸಮರ್ಪಕ ನ್ಯಾಯತೀರ್ಮಾನ ನಡೆಯುವಂತೆ ನೋಡಿಕೊಳ್ಳುವುದೇ ತನ್ನ ನಿಜವಾದ ಕಾಳಜಿ ಎಂದೂ ಹೇಳಿತ್ತು.

ಇದಕ್ಕೂ ಮೊದಲು, ತಮ್ಮ ಕುಟುಂಬ, ತಮ್ಮೊಬ್ಬ ಸ್ನೇಹಿತ ಹಾಗೂ ತಮ್ಮ ಪರ ವಕೀಲ ದೀಪಿಕಾ ಸಿಂಗ್‌ ರಾವತ್‌ ಅವರಿಗೆ ಬೆದರಿಕೆ ಬಂದಿತ್ತು ಎಂದು ಸಂತ್ರಸ್ತೆಯ ತಂದೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ