ಆ್ಯಪ್ನಗರ

'ನಂದಿಗ್ರಾಮದಿಂದ ಸ್ಪರ್ಧಿಸುವುದಾದರೆ ಮಾಜಿ ಸಿಎಂ ಎಂಬ ಲೆಟರ್ ಪ್ಯಾಡ್ ರೆಡಿ ಮಾಡಿಕೊಳ್ಳಿ'!

ಒಂದು ವೇಳೆ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸ್ಪರ್ಧಿಸುವುದು ಖಚಿತವಾದರೆ, ಅವರು ಮಾಜಿ ಮುಖ್ಯಮಂತ್ರಿ ಎಂಬ ಲೆಟರ್ ಪ್ಯಾಡ್‌ನ್ನು ಹೊಂದುವುದು ಸೂಕ್ತ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ವ್ಯಂಗ್ಯವಾಡಿದ್ದಾರೆ.

Vijaya Karnataka Web 19 Jan 2021, 5:56 pm
ಕೋಲ್ಕತ್ತಾ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ಘೋಷಿಸಿದ್ದಾರೆ.
Vijaya Karnataka Web Suvendu Adhikari
ಸಂಗ್ರಹ ಚಿತ್ರ


ನಂದಿಗ್ರಾಮ ಸುವೇಂದು ಅಧಿಕಾರಿ ಅವರ ಭದ್ರ ನೆಲೆಯಾಗಿದ್ದು, ಮಮತಾ ಬ್ಯಾನರ್ಜಿ ಅವರ ಈ ರಣವೀಳ್ಯವನ್ನು ಸುವೇಂದು ಅಧಿಕಾರಿ ಸ್ಪರ್ಧಾತ್ಮಕವಾಗಿ ಸ್ವೀಕರಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸುವೇಂದು ಅಧಿಕಾರಿ, ಒಂದು ವೇಳೆ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸ್ಪರ್ಧಿಸುವುದು ಖಚಿತವಾದರೆ, ಅವರು ಮಾಜಿ ಮುಖ್ಯಮಂತ್ರಿ ಎಂಬ ಲೆಟರ್ ಪ್ಯಾಡ್‌ನ್ನು ಹೊಂದುವುದು ಸೂಕ್ತ ಎಂದು ವ್ಯಂಗ್ಯವಾಡಿದ್ದಾರೆ.

ಮಿನಿ ಪಾಕಿಸ್ತಾನ ಹುಡುಗರನ್ನು ನಮ್ಮ ಹುಡುಗರು ಅಟ್ಟಾಡಿಸಿದರು: ಸುವೇಂದು ವ್ಯಂಗ್ಯ!

ನಂದಿಗ್ರಾಮದಿಂದ ಮಮತಾ ಸ್ಪರ್ಧಿಸಿದರೆ ಅವರ ಸೋಲು ಖಚಿತ. ಹೀಗಾಗಿ ಈಗಲೇ ಅವರು ಮಾಜಿ ಮುಖ್ಯಮಂತ್ರಿ ಎಂಬ ಲೆಟರ್ ಪ್ಯಾಡ್‌ನ್ನು ಸಿದ್ಧಮಾಡಿಟ್ಟುಕೊಳ್ಳುವುದು ಸೂಕ್ತ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.


ನಂದಿಗ್ರಾಮದಿಂದ ತಾವಾಗಲಿ ಅಥವಾ ಬಿಜೆಪಿ ನಿರ್ಧರಿಸುವ ಯಾರೇ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿ ಮಮತಾ ಬ್ಯಾನರ್ಜಿ ಗೆದ್ದರೆ ತಾವು ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಸುವೇಂದು ಅಧಿಕಾರಿ ಘೋಷಿಸಿದ್ದಾರೆ.

ನಂದಿಗ್ರಾಮದಿಂದ ಮಮತಾ ಬ್ಯಾನರ್ಜಿ ಸ್ಪರ್ಧಿಸುವ ನಿರ್ಣಯ ಸುವೇಂದು ಅಧಿಕಾರಿ ಅವರನ್ನು ಚಿಂತೆಗೀಡು ಮಾಡಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಒಂದು ವೇಳೆ ಚುನಾವಣೆಯಲ್ಲಿ ಮಮತಾ ವಿರುದ್ಧ ಸೋತರೆ ಸುವೇಂದು ಅಧಿಕಾರಿ ಅವರ ವರ್ಚಸ್ಸು ಕಳೆಗುಂದಲಿದೆ ಎಂಬ ವಿಶ್ಲೇಷಣೆಗಳು ಮೂಡಿ ಬರುತ್ತಿವೆ.

ಮುಂದಿನ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧೆ: ಪಕ್ಷ ತೊರೆದ ಸುವೇಂದು ಅಧಿಕಾರಿಗೆ ಮಮತಾ ಬ್ಯಾನರ್ಜಿ ರಣವೀಳ್ಯ

ಇದೇ ಕಾರಣಕ್ಕೆ ಮೇಲ್ನೋಟಕ್ಕೆ ಮಮತಾ ಬ್ಯಾನರ್ಜಿ ಅವರ ರಣವೀಳ್ಯವನ್ನು ಸ್ವೀಕರಿಸಿರುವಂತೆ ಸುವೇಂದು ಅಧಿಕಾರಿ ಮಾತನಾಡುತ್ತಿದ್ದರೂ, ಆಂತರಿಕವಗಿ ತೀವ್ರ ಚಿಂತೆಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ