ಆ್ಯಪ್ನಗರ

ತಾಯ್ನಾಡಿಗೆ ಮರಳಿದ ಪರಿಕ್ಕರ್‌ಗೆ ಕೇಜ್ರಿವಾಲ್ ಸ್ವಾಗತ

ಮೂರು ತಿಂಗಳಷ್ಟು ದೀರ್ಘಕಾಲ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ಹಿಂತಿರುಗಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸ್ವಾಗತ ಕೋರಿದ್ದಾರೆ.

THE ECONOMIC TIMES 16 Jun 2018, 2:03 pm
ಹೊಸದಿಲ್ಲಿ: ಮೂರು ತಿಂಗಳಷ್ಟು ದೀರ್ಘಕಾಲ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ಹಿಂತಿರುಗಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸ್ವಾಗತ ಕೋರಿದ್ದಾರೆ.
Vijaya Karnataka Web Parikkar- Kejrival


"@ಮನೋಹರ ಪರಿಕ್ಕರ್ ಸರ್ ನಿಮಗೆ ಸ್ವಾಗತ. ದೇವರು ನಿಮಗೆ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಕರುಣಿಸಲಿ", ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಮೇದೋಜೀರಕ ಗ್ರಂಥಿಯ ಸಮಸ್ಯೆಯಿಂದ ಬಳಲುತ್ತಿದ್ದ ಪರಿಕ್ಕರ್ (62) , ಈ ವರ್ಷ ಮಾರ್ಚ್‌ 7ರಂದು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದರು. ಗೋವಾದಿಂದ ಹೊರಡುವ ಮೊದಲು, ರಾಜ್ಯದ ಆಡಳಿತ ಮಾರ್ಗದರ್ಶನಕ್ಕಾಗಿ ಕ್ಯಾಬಿನೆಟ್ ಸಲಹಾ ಸಮಿತಿಯನ್ನು ರಚಿಸಿದ್ದರು.

ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಅವರು ಗುರುವಾರ ಸಂಜೆ ತಾಯ್ನಾಡಿಗೆ ವಾಪಸ್ಸಾಗಿದ್ದರು ಮತ್ತು ಶುಕ್ರವಾರವೇ ಕೆಲಸಕ್ಕೆ ಹಾಜರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ