ಆ್ಯಪ್ನಗರ

ರೇಪಿಸ್ಟ್‌ ಪಾದ್ರಿ ವಿರುದ್ಧ ಕ್ರಮಕ್ಕೆ ಆ್ಯಂಟನಿ ಆಗ್ರಹ

ಕಣ್ಣೂರಿನ ಪೆರವೂರಿನಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಪಾದ್ರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಮುಖಂಡ ಎ.ಕೆ. ಆ್ಯಂಟನಿ ಆಗ್ರಹಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 6 Mar 2017, 1:13 pm
ಕೋಯಿಕ್ಕೋಡ್‌: ಕಣ್ಣೂರಿನ ಪೆರವೂರಿನಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಪಾದ್ರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಮುಖಂಡ ಎ.ಕೆ. ಆ್ಯಂಟನಿ ಆಗ್ರಹಿಸಿದ್ದಾರೆ.
Vijaya Karnataka Web kerala antony demands strict action against rapist priest
ರೇಪಿಸ್ಟ್‌ ಪಾದ್ರಿ ವಿರುದ್ಧ ಕ್ರಮಕ್ಕೆ ಆ್ಯಂಟನಿ ಆಗ್ರಹ


ಆರೋಪಿ ಕರುಣೆ ಮತ್ತು ಕ್ಷಮೆಗೆ ಅರ್ಹನಲ್ಲವಾದ ಕಾರಣ ಯಾವುದೇ ಧಾರ್ಮಿಕ ಮತ್ತು ರಾಜಕೀಯ ಹಿನ್ನಲೆಯನ್ನು ಕೂಡ ಪರಿಗಣಿಸದೆ ಕಠಿಣ ಶಿಕ್ಷೆಯ ಮಾರ್ಗವನ್ನೇ ಅನುಸರಿಸಬೇಕು ಎಂದು ಅವರು ಹೇಳಿದ್ದಾರೆ.

ಆರೋಪಿಗೆ ಸೂಕ್ತ ಶಿಕ್ಷೆ ನೀಡುವ ಮೂಲಕ ದೇಶದಲ್ಲಿರುವ ಇಂಥ ಮನಸ್ಥಿತಿಯವರಿಗೆ ಸೂಕ್ತ ಸಂದೇಶ ನೀಡುವ ಅಗತ್ಯ ಇದೆ. ಆರೋಪಿಯು ಸಮುದಾಯಕ್ಕೆ ಮತ್ತು ದೇವರ ನಾಡು ಎನ್ನುವ ರಾಜ್ಯದ ಗೌರವಕ್ಕೆ ಕಳಂಕ ತಂದಿರುವುದಾಗಿ ಆ್ಯಂಟನಿ ಹೇಳಿದ್ದಾರೆ.

ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಫಾ. ರಾಬಿನ್‌ ವಡಕ್ಕಂಚೆರಿಲ್‌ ಎಂಬವರನ್ನು ಫೆ. 28ರಂದು ಬಂಧಿಸಲಾಗಿತ್ತು.

antony demands strict action against 'rapist' priest: Senior congress leader A K Antony came down heavily on the priest who is accused of raping a minor girl at Peravoor in Kannur district.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ